ಕರ್ನಾಟಕ ಸರ್ಕಾರದಲ್ಲಿ ಪ್ರತಿಷ್ಠಿತ ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದ ಮೊಟ್ಟ ಮೊದಲ ಬಾರಿಗೆ ರಾಜ್ಯದ ಮಹಿಳಾ ನಿರ್ದೇಶಕರಾಗಿ ಪಿ ಎ ಸೀಮಾ ನೇಮಕಗೊಂಡಿದ್ದಾರೆ.
ಕೊಡಗಿನವರಾದ ಪಿ ಎ ಸೀಮಾ ಅವರು ಈ ಹಿಂದೆ ಹುಣಸೂರು ವಿಭಾಗದ ಡಿಸಿಎಫ್ ಆಗಿ ಸೇವೆ ಸಲಿಸಿದ್ದರು. 2017ರ ಗುಂಪಿನವರಾದ ಇವರು ಮೈಸೂರು, ಮಂಡ್ಯ, ಹುಣಸೂರು, ಮಡಿಕೇರಿಯಲ್ಲಿ ಡಿಸಿಎಫ್ ಆಗಿ ಸೇವೆ ಸಲ್ಲಿಸಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಆನೆಗಳ ಕಾರ್ಯಪಡೆಯ ಹೆಚ್ಚುವರಿ ಡಿಸಿಎಫ್ ಆಗಿ ಕೂಡ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ಹುಣಸೂರು ಹಾಗೂ ಕೆ ಆರ್ ನಗರದ ವಿಭಾಗದಲ್ಲಿ ಮಾನವ ಹಾಗೂ ಆನೆಗಳ ನಡುವೆ ಸಂಘರ್ಷವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಣೆ ಮಾಡಿದರೆಂಬ ಪ್ರಶಂಸೆಗೆ ಒಳಗಾಗಿದ್ದರು.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಕೇರಳ, ಕರ್ನಾಟಕ ಗಡಿ ಭಾಗ ಹಾಗೂ ಕೊಡಗು ಮತ್ತು ಮೈಸೂರು ಗಡಿಭಾಗವನ್ನೂ ಕೂಡ ಹೊಂದಿದ್ದು, ಇಲ್ಲಿ ನಿರಂತರ ಕಾಡುಪ್ರಾಣಿಗಳ ಬೇಟೆ, ಕಾಡುಪ್ರಾಣಿ ಹಾಗೂ ಮಾನವ ಸಂಘರ್ಷ ತಡೆಗಟ್ಟಲು ಉತ್ತಮ ಅಧಿಕಾರಿಯ ನಿರೀಕ್ಷೆಯಲ್ಲಿದ್ದ ಸ್ಥಳೀಯರಿಗೆ ಪಿ ಎ ಸೀಮಾ ಆಯ್ಕೆ ಹೆಚ್ಚಿನ ನಿರೀಕ್ಷೆ ಮೂಡಿಸಿದೆ.
ಈ ಸುದ್ದಿ ಓದಿದ್ದೀರಾ? ಶ್ರೀರಂಗಪಟ್ಟಣ | ವೃದ್ಧೆಯ ಮನೆ ಕಳ್ಳತನ ; ಪೊಲೀಸರ ವಿರುದ್ಧ ಸ್ಥಳೀಯರ ಆಕ್ರೋಶ
ಇವರ ಹಿನ್ನಲೆ: ಭಾರತೀಯ ಅರಣ್ಯ ಸೇವೆ(ಐಎಫ್ಎಸ್) ಅಧಿಕಾರಿ, ಮೂಲತಃ ನಾಪೋಕ್ಲುವಿನ ಪಾಡ್ಯಮಂಡ ಆನಂದ್-ಕಮಲ ದಂಪತಿಯ ಪುತ್ರಿ, ಮತ್ತೂರು ಗ್ರಾಮದ ಪುತ್ತಾಮನೆ ಡಾ ಅಶೋಕ್, ಶಾಂತಿರವರ ಸೊಸೆ, ಪುತ್ತಾಮನೆ ರಂಜನ್ ಪತ್ನಿ.