ಕಲ್ಲು ಕ್ರಷರ್ನಲ್ಲಿ ಕೆಲಸ ಮಾಡುವ ವೇಳೆ ಕಲ್ಲು ಬಿದ್ದು ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಟೇಕಲ್ ಸಮೀಪ ನಡೆದಿದೆ. ಆಂಧ್ರ ಮೂಲದ ವೆಂಕಟೇಶ್ ಮೃತ ದುರ್ದೈವಿ.
ತಾಲೂಕಿನ ಟೇಕಲ್ ಸಮೀಪ ಮಾಕಾರಹಳ್ಳಿ ಬಳಿ ಕಲ್ಲು ಕ್ವಾರಿ ಪ್ರದೇಶದಲ್ಲಿ ಬಂಡೆಯೊಂದರ ಬ್ಲಾಸ್ಟಿಂಗ್ ತಯಾರಿಯ ವೇಳೆ ಕಲ್ಲುಗಳು ಹಾಗೂ ಬಂಡೆಯೊಂದು ಉರುಳಿ ಬಿದ್ದುದರ ಪರಿಣಾಮ ದುರ್ಘಟನೆ ಸಂಭವಿಸಿದೆಯಲ್ಲದೇ ಸ್ಥಳದಲ್ಲಿದ್ದ ಎರಡು ಟ್ರಾಕ್ಟರ್ಗಳು ಜಖಂಗೊಂಡಿವೆ.

ಗಾಯಾಳುಗಳಾದ ಮಧ್ಯಪ್ರದೇಶದ ಹರೀಶ್ ಹಾಗೂ ತಮಿಳುನಾಡಿನ ಈಶ್ವರ್ ಎಂಬುವವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಕೋಲಾರ | ತಂದೆಯಿಂದಲೇ ಮಗಳ ಮೇಲೆ ನಿರಂತರ ಅತ್ಯಾಚಾರ; ಆರೋಪಿ ಬಂಧನ
ಘಟನಾ ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ನಿಖಿಲ್ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಮಾಸ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
