ಕೋಲಾರ | ಉತ್ತಮ ಬೆಲೆ ಸಿಗದೆ ನಷ್ಟ: ಉಚಿತವಾಗಿಯೇ ಬಾಳೆ ಹಣ್ಣು ಹಂಚಿದ ರೈತ

Date:

Advertisements

ಬೆಲೆ ಕುಸಿತದಿಂದ ಹಾಕಿ ಬಂಡವಾಳವು ಸಿಗದೆ, ಮಾರುಕಟ್ಟೆಗೆ ಸಾಗಿದ ಬಾಡಿಗೆ ಹಣವೂ ದೊರೆಯದ ಕಾರಣದಿಂದಾಗಿ ಕೋಲಾರ ಜಿಲ್ಲೆಯ ರೈತನೊಬ್ಬ ತಾವು ಬೆಳೆದಿದ್ದ ಬಾಳೆ ಹಣ್ಣನ್ನು ಉಚಿತವಾಗಿಯೇ ಹಂಚಿಸಿದ್ದಾರೆ.

ಕೋಲಾರ ಜಿಲ್ಲೆಯ ಕೋಟೆಕನಹಳ್ಳಿಯ ರೈತ ಕೆ.ವೈ ಗಣೇಶ್ ಅವರು ಮೂರು ಎಕರೆ ಭೂಮಿಯಲ್ಲಿ ಬಾಳೆ ಬೆಳೆ ಬೆಳೆದಿದ್ದರು. ಸುಮಾರು 2,000 ಬಾಳೆ ಸಸಿಗಳನ್ನು ನಟ್ಟಿದ್ದ ಗಣೇಶ್‌, ಬೆಳೆಗಾಗಿ ಸುಮಾರು 4.5 ಲಕ್ಷ ರೂ. ಖರ್ಚು ಮಾಡಿದ್ದರು. ಆದರೆ, ಬಾಳೆ ಬೆಲೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತಗೊಂಡಿದ್ದು, ಸಗಟು ವ್ಯಾಪಾರಿಗಳು ಕೆ.ಜಿ ಹಣ್ಣಿಗೆ ಕೇವಲ 10 ರೂ.ಗಳಂತೆ ಖರೀದಿಸುವುದಾಗಿ ಹೇಳಿದ್ದಾರೆ.

ಸುಮಾರು ಎರಡು ಟನ್ (2,000 ಕೆ.ಜಿ) ಬಾಳೆ ಹಣ್ಣು ಬೆಳೆದಿದ್ದ ಗಣೇಶ್‌, 10 ರೂ.ಗಳಂತೆ ಮಾರಾಟ ಮಾಡಿದರೆ, ಯಾವುದೇ ಪ್ರಯೋಜನವಿಲ್ಲ. ಅಲ್ಲದೆ, ಮಾರುಕಟ್ಟೆಗೆ ಕೊಂಡೊಯ್ದರೆ, ಹೆಚ್ಚುವರಿಯಾಗಿ ವಾಹನ ಬಾಡಿಗೆ ಹಣದ ಹೊರೆಯೂ ತಮ್ಮ ಮೇಲೆಯೇ ಬೀಳುತ್ತದೆಂದು ಬಾಳೆ ಹಣ್ಣನ್ನು ತೋಟದಲ್ಲಿ ಉಚಿತವಾಗಿಯೇ ಹಂಚಿದ್ದಾರೆ.

Advertisements

ಈ ಹಿಂದೆ, ಗಣೇಶ ಹಬ್ಬ, ದೀಪಾವಳಿ ಹಗೂ ವರಮಹಾಲಕ್ಷ್ಮಿ ಹಬ್ಬಗಳ ಸಮಯದಲ್ಲಿ ಗಣೇಶ್‌ ಅವರು ಕೆ.ಜಿಗೆ 60 ರೂ.ಗಳಂತೆ ಸಗಟು ವ್ಯಾಪಾರಿಗಳಿಗೆ ಬಾಳೆ ಹಣ್ಣು ಮಾರಿದ್ದರು. ಆದರೆ, ಈ ಬಾರಿ ಉತ್ತಮ ಬೆಲೆ ಸಿಗದೆ ಗಣೇಶ್‌ ಕಂಗಾಲಾಗಿದ್ದಾರೆ. ಇದೀಗ, ಲಕ್ಷಾಂತರ ರೂಪಾಯಿ ನಷ್ಟ ಅನುಭವಿದ್ದಾರೆ.

“ಬೆಳೆ ಬೆಳೆಯಲು ಸಾಲ ಮಾಡಿದ್ದೇನೆ. ಸಾಲ ತೀರಿಸುವುದರ ಜೊತೆಗೆ, ಹೊಸ ಬೆಳೆ ಬೆಳೆಯಲು ಮತ್ತೆ ಬಂಡವಾಳ ಹೊಂದಿಸಬೇಕು. ಆದರೆ, ಬೆಲೆ ಸಿಗದೆ ನಷ್ಟವಾಗಿದೆ. ಮುಂದೇನು ಮಾಡುವುದು ತೋಚುತ್ತಿಲ್ಲ” ಎಂದು ಗಣೇಶ್ ಹೇಳಿಕೊಂಡಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X