ನಿತ್ಯ ಸಾರ್ವಜನಿಕರಿಗೆ ಗಮ್ಯಸ್ಥಾನ ತಲುಪಿಸಲು ಶ್ರಮಿಸುವ ಚಾಲಕರ ಕಠಿಣ ಪರಿಶ್ರಮ ಮತ್ತು ಸೇವೆಯನ್ನು ಗೌರವಿಸಲು ಚಾಲಕರ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್ ಎ ಗಫಾರ್ ಎಲ್ಲ ಚಾಲಕರಿಗೂ ಚಾಲಕರ ದಿನಾಚರಣೆಯ ಶುಭಾಶಯ ತಿಳಿಸಿದರು.
ಕೊಪ್ಪಳ ಜಿಲ್ಲಾ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ ಸರಳವಾಗಿ ನಡೆದ ಚಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಾಶಯ ಕೋರಿ, “ರಸ್ತೆ ಸುರಕ್ಷೆ, ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಚಾಲಕರನ್ನು ಪ್ರೋತ್ಸಾಹಿಸಲು ಹಾಗೂ ಚಾಲಕರ ಸೇವೆಗೆ ಗೌರವ ಸಲ್ಲಿಸಲು ಈ ದಿನವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲರಿಗೂ ಶೂಭಾಷಯಗಳು” ಎಂದರು.
ಹಗಲು ರಾತ್ರಿ ಎನ್ನದೆ ಸೇವೆ ಸಲ್ಲಿಸುವ ಚಾಲಕರಿಗೆ ಡಿವೈಎಸ್ಪಿ ಮುತ್ತಣ್ಣ ಸವರಗೋಳ ಭಾಗವಹಿಸಿ ಶುಭ ಹಾರೈಸಿದರು.

ನಿರಂತರ ಪ್ರಯತ್ನದ ಮೂಲಕ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಎರಡನೇ ವರ್ಷ ಚಾಲಕರ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಶಾಲು ತಾಯಿ ಸಂಚಾರಿ ನಿಯಂತ್ರಕ ರವೀಂದ್ರ ನುಡಿದು ಚಾಲಕರಿಗೆ ಶುಭ ಹಾರೈಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಚಲನಚಿತ್ರೋತ್ಸವ ಮುಂದೂಡುವಂತೆ ನಾವು ದ್ರಾವಿಡ ಕನ್ನಡಿಗರು ಚಳವಳಿ ಮನವಿ
ಅಧ್ಯಕ್ಷತೆ ವಹಿಸಿದ್ದ ಡಿಪೋ ವ್ಯವಸ್ಥಾಪಕ ರಮೇಶ ಚಿಣಗಿ ಅವರು ಚಾಲಕರಿಗೆ ಶುಭಾಶಯಗಳನ್ನು ಹೇಳಿದರು.
ಕೇಂದ್ರೀಯ ಬಸ್ ನಿಲ್ದಾಣದ ಕಾರ್ಯಕ್ರಮದಲ್ಲಿ ಅಮೀನ್ ಸಾಬ್ ಕೋಳಿ, ಚೆನ್ನಮ್ಮ, ವಿಭಾಗೀಯ ನಿಯಂತ್ರಣಾಧಿಕಾರಿ ಎಂ ವೆಂಕಟೇಶ್, ವಿಭಾಗಿಯ ಸಂಚಾಲನ ಅಧಿಕಾರಿ ಆರ್ ಬಿ ಜಾಧವ್, ಚಾಲಕ ವಸಂತ ರಾಮದುರ್ಗ, ಅನಿಲ್ ಕುಮಾರ್, ಲೆಕ್ಕಾಧಿಕಾರಿ ಜಯಶ್ರೀ, ಕಾವ್ಯ, ಸಂಚಾರ ನಿರೀಕ್ಷಕ ಮಂಜುನಾಥ್ ಬಂಡಿ, ನಾಗರಾಜ ನಾಗರೆಡ್ಡಿ, ಕೆಎಸ್ಆರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಶನ್ ಮುಖಂಡ ಎ ಜಿ ಮಣ್ಣೂರು ಮುಂತಾದ ಕೆಎಸ್ಆರ್ಟಿಸಿ ಚಾಲಕರು, ನಿರ್ವಾಹಕರು, ಕಾರ್ಮಿಕರು ಭಾಗವಹಿಸಿ ಚಾಲಕರಿಗೆ ಶುಭಾಶಯ ತಿಳಿಸಿದರು.