ಮನುಷ್ಯ ದುರಾಸೆಯಿಂದ ಅನ್ಯಮಾರ್ಗ ತುಳಿದು ಹಣ ಗಳಿಸಿದರೆ ಅದು ಪಾಪದ ಹಣವಾಗುತ್ತದೆ. ಹಣ, ಆಸ್ತಿಗಿಂತ ಮಾನವನಿಗೆ ಒಳ್ಳೆಯ ವ್ಯಕ್ತಿತ್ವ ಗೌರವವನ್ನು ನೀಡುತ್ತದೆ. ಶರಣರು ಭ್ರಷ್ಟಾಚಾರದ ವಿರೋಧಿಯಾಗಿದ್ದರು ಎಂದು ಸಾಹಿತಿ ಅರುಣಾ ನರೇಂದ್ರ ಹೇಳಿದರು.
ಕೊಪ್ಪಳ ಜಿಲ್ಲೆಯ ಗಂಗಾವತಿಯ ಹೊಸಳ್ಳಿ ರಸ್ತೆಯಲ್ಲಿರುವ ಶಿವಲೀಲಾ ಸಿ ಎಂ ಮತ್ತು ಬಸವರಾಜಯ್ಯ ಶಿಕ್ಷಕ ದಂಪತಿ ಮನೆಯಲ್ಲಿ ವಚನ ಶ್ರಾವಣದ 23ನೇ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ’ ಹಾಗೂ ‘ಸತ್ಯ ಶುದ್ಧವಿಲ್ಲದುದು ಕಾಯಕವಲ್ಲʼ ಎನ್ನುವ ಶರಣೆ ಕಾಳವ್ವೆಯ ವಚನ ನಿರ್ವಚನ ಮಾಡುತ್ತ ಶರಣರ ತತ್ವ ವಿಚಾರಗಳನ್ನು ಹಂಚಿಕೊಂಡರು.
“ಶ್ರಾವಣ ಮಾಸದಲ್ಲಿ ನಮ್ಮ ಮನೆಯಲ್ಲಿ ನಡೆಯತ್ತಿರುವ 23ನೇ ವಚನ ಶ್ರಾವಣ ಕಾರ್ಯಕ್ರಮ ಶರಣರ ವಚನಗಳ ಸಂದೇಶವನ್ನು ಅಂತರ್ಗತವಾಗಿ ರೂಢಿಸಿಕೊಳ್ಳಬೇಕು ಹಾಗೂ ರೂಪಿಸಿಕೊಳ್ಳಬೇಕು. ಅವರ ಸಮಾನತೆಯ ಸಂದೇಶಗಳನ್ನು ಪಸರಿಸಬೇಕು. ಇದನ್ನು ಅರುಹುವ ಜರೂರು ಇದೆ” ಎಂದು ಶಿವಲೀಲಾ ಸಿ ಎಂ ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ಸೆ. 1ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮೈಸೂರಿಗೆ ಭೇಟಿ
ಈ ವೇಳೆ ಅರುಣಾ ನರೇಂದ್ರ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ರಾಜ್ಯ ಕಾರ್ಯದರ್ಶಿ ಶ್ರೀಶೈಲ ಪಟ್ಟಣ ಶೆಟ್ಟಿ, ಗಂಗಾವತಿಯ ಎಲ್ಲ ಬಸವಪರ ಸಂಘಟನೆಗಳ ಪದಾಧಿಕಾರಿಗಳು, ಬಸವ ಅನುಯಾಯಿಗಳು ಹಾಗೂ ಶಿಕ್ಷಕರು ಕಾರ್ಯಕ್ರಮದಲ್ಲಿ ಇದ್ದರು.
Somebody essentially lend a hand to make significantly posts I might state That is the very first time I frequented your web page and up to now I surprised with the research you made to create this particular put up amazing Excellent job