ಕೊಪ್ಪಳ | ಭಾರೀ ಮಳೆ; ಕೃಷಿ ಹೊಂಡ ಭರ್ತಿ

Date:

Advertisements

ಕೊಪ್ಪಳ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಪರಿಣಾಮ ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಗ್ರಾಮ ಪಂಚಾಯತಿ ಸದಸ್ಯ ಶರಣಪ್ಪ ಬಸಪ್ಪ ಎಮ್ಮಿ ಅವರ ಹೊಲದಲ್ಲಿದ್ದ ಕೃಷಿ ಹೊಂಡ ಸಂಪೂರ್ಣ ಭರ್ತಿಯಾಗಿದೆ.

ಕಳೆದ ತಿಂಗಳಷ್ಟೇ ತಮ್ಮ ಜಮೀನಿನಲ್ಲಿ ಶರಣಪ್ಪ ಅವರು ಕೃಷಿ ಹೊಂಡ ನಿರ್ಮಾಣ ಮಾಡಿದ್ದರು. ಇದೀಗ, ಮಳೆ ನೀರಿನಿಂದಾಗಿ ಹೊಂಡು ಸಂಪೂರ್ಣ ತುಂಬಿದೆ. “ಹೊಂಡ ತುಂಬಿರುವುದು ನಮ್ಮ ಗ್ರಾಮದ ಪ್ರಾಣಿ ಪಕ್ಷಿಗಳಿಗೆ, ಹೊಲ-ಗದ್ದೆಗಳಿಗೆ ಉಪಯೋಗವಾಗಲಿದೆ” ಎಂದು ಗ್ರಾಮದ ರೈತ ಗಟ್ಟೆಪ್ಪ ಉಮಚಗಿ ಹೇಳಿದ್ದಾರೆ.

ಶರಣಪ್ಪ ಅವರ ಜಮೀನಿಗೆ ಗ್ರಾಮ ಪಂಚಾಯತಿ ಪಿಡಿಒ ನೀಲಂ ಚಳಗೇರಿ, ಗ್ರಾಮ ಪಂಚಾಯತಿ ಅಧ್ಯಕ್ಷ ಸಕ್ರಪ್ಪ ಮಂಗಳಪ್ಪ ಚಿನ್ನೂರು ಭೇಟಿ ನೀಡಿ, ಹೊಂಡ ನಿರ್ಮಿಸಿದ ಶರಣಪ್ಪ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisements

ಈ ವೇಳೆ, ರೈತರಾದ ಬಸಪ್ಪ ಎಮ್ಮಿ, ರಾಮಣ್ಣ ನಿಂಗಾಪುರ, ರವಿಕುಮಾರ ಶೆಲೂಡಿ, ವೀರಭದ್ರಪ್ಪ ಎಮ್ಮಿ, ಸುರೇಶ ಮ್ಯಾಗಳೇಶಿ ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಪ್ಪಳ | ತಳಕಲ್‌ನಲ್ಲಿ 20 ಮಂದಿ ಮೇಲೆ ಬೀದಿ ನಾಯಿಗಳ ದಾಳಿ: ಇಬ್ಬರು ಬಾಲಕರು ಜಿಲ್ಲಾಸ್ಪತ್ರೆಗೆ ದಾಖಲು

ಕೊಪ್ಪಳ ತಾಲೂಕಿನ ತಳಕಲ್‌ನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇಂದು ಗ್ರಾಮದಲ್ಲಿ...

ಕೊಪ್ಪಳ | ಕರ್ತವ್ಯ ಲೋಪ ಆರೋಪ : ಕರಡೋಣ ಪಿಡಿಒ ಅಮಾನತು

ಕನಕಗಿರಿ ತಾಲೂಕಿನ ಕರಡೋಣ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗಲಿಂಗಪ್ಪ ಅವರನ್ನು...

ತುಂಗಭದ್ರಾ ಜಲಾಶಯದ 7 ಗೇಟ್​ಗಳು ಬೆಂಡ್​: ಸಚಿವ ಶಿವರಾಜ್​ ತಂಗಡಗಿ

ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ ಏಳು ಗೇಟ್​ಗಳು...

ಪ್ರೀತಿ ವಿಚಾರಕ್ಕೆ ಗವಿಸಿದ್ದಪ್ಪ ಹತ್ಯೆ ಪ್ರಕರಣ; ವಿಷದ ಬಾಟಲಿ ಮುಂದಿಟ್ಟುಕೊಂಡು ಬಾಲಕಿ ತಾಯಿ ಪ್ರತಿಭಟನೆ

ಕೊಪ್ಪಳದಲ್ಲಿ ಪ್ರೀತಿ ವಿಚಾರಕ್ಕೆ ನಡೆದ ಗವಿಸಿದ್ದಪ್ಪನ ಭೀಕರ ಹತ್ಯೆ ಪ್ರಕರಣವು ಇದೀಗ...

Download Eedina App Android / iOS

X