ಉಡುಪಿ | ಸೂತಕದ ಮನೆಯಲ್ಲಿಯೂ ಬಿಜೆಪಿಯು ರಾಜಕೀಯ ವಿಷ ಬೀಜ ಬಿತ್ತುತ್ತಿದೆ – ನಾಗೇಂದ್ರ ಪುತ್ರನ್

Date:

Advertisements

ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ದುರಂತ ನಡೆದಿದೆ, ಬರಿ 35 ಸಾವಿರ ಜನ ಸೇರ ಬಹುದಾದಂತ ಸ್ಥಳದಲ್ಲಿ ಸುಮಾರು 3 ಲಕ್ಷ ಜನ ಸೇರಿದ್ದು ಈ ದುರಂತಕ್ಕೆ ಕಾರಣ ಆಗಿದೆ, ಇದನ್ನು ಬಿಜೆಪಿ ಅವರು ರಾಜಕೀಯ ಬಾಣವಾಗಿ ಉಪಯೋಗಿಸಿ ಕೊಳ್ಳುತ್ತಿರುವುದು ಬಿಜೆಪಿ ನಾಯಕರ ದುರ್ಬುದ್ದಿ ಇಡಿ ಕರ್ನಾಟಕಕಕ್ಕೆ ತೋರಿಸುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿರುವ ಘಟನೆ ನಿಜವಾಗಿಯೂ ದುರಾದೃಷ್ಟಕರ, ವಿಧಾನ ಸೌಧದಲ್ಲಿ ನಮ್ಮ ನೆಚ್ಚಿನ RCB ಆಟಗಾರರಿಗೆ ಅಭಿನಂದನೆ ಕಾರ್ಯಕ್ರಮ ಸರಕಾರ ಆಯೋಜನೆ ಮಾಡಿದೆ ಸುಮಾರು ಒಂದು ಲಕ್ಷ ಜನ ಸೇರಿದ್ದರು, ಆದರೆ ಸರ್ಕಾರಿ ಕಾರ್ಯಕ್ರಮದ ಸ್ಥಳ ದಲ್ಲಿ ನೂಕು ನುಗ್ಗುಲು ಆಗಿದೆ, ಆದರೆ ಯಾವುದೇ ನೋವು, ಜೀವ ಹಾನಿ ಸಂಭವಿಸಿಲ್ಲ.

ಇದಕ್ಕೆ ಸರಕಾರ ಹೊಣೆ ಅಲ್ಲ, ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ ಅಲ್ಲಿನ ಕ್ರಿಕೆಟ್ ಅಸೋಶಿಯೇಷನ್ ಕಾರಣ ಆಗುತ್ತದೆ. ಬಿಜೆಪಿಯವರು ಸಿಕ್ಕಿದ್ದೇ ಚಾನ್ಸು ಎಂದು ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ನಿಮ್ಮ ಕೆಟ್ಟ ಬುದ್ದಿ ಬದಿಗಿಟ್ಟು ಮೃತಪಟ್ಟ ಕುಟುಂಬಕ್ಕೆ ಸಮಾಧಾನ ಪಡಿಸಿ‌ ಎಂದು ಆಗ್ರಹಿಸಿದ್ದಾರೆ.

Advertisements

ಯಾವುದೇ ತಂಡದ ಅಭಿಮಾನಿಗಳಿರಲಿ, ತಮ್ಮ ಜೀವಕ್ಕೆ ಕುತ್ತು ತಂದು ಕೊಳ್ಳುವಷ್ಟರ ಮಟ್ಟಕ್ಕೆ ಹೋಗೋದು ಒಳ್ಳೆಯದಲ್ಲ, ಮೃತಪಟ್ಟ ಎಲ್ಲಾ ಕುಟುಂಬಕ್ಕೂ ದೇವರು ನೋವನ್ನು ಸಹಿಸಿ ಕೊಳ್ಳುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. 17 ಜನ ಸತ್ತಿರೋದು ಜೀವಹಾನಿ ಅಲ್ವಾ.ಪ್ರಯಾಗ ಕುಂಭಮೇಳದಲ್ಲಿ ಕೋಟ್ಯಾಂತರ ಭಕ್ತರು ಆಗಮಿಸುತ್ತಾರೆ.ಅಲ್ಲಿ 30 ಜನ ಕಾಲ್ತುಳಿತಕ್ಕೆ ಸತ್ತಿದ್ದಕ್ಕೆ ಕಾಂಗ್ರೆಸ್ ಸರ್ಕಾರ ಅದನ್ನು ದೊಡ್ಡ ದಾಗಿ ಬಿಂಬಿಸುವ ಪ್ರಯತ್ನ ಮಾಡಿತ್ತು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ನಗರದ ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಅಡಿಗಲ್ಲು

ರಾಯಚೂರು ನಗರದ ವಾರ್ಡ್ ನಂ.34ರ ಬಂದೇನವಾಜ ಕಾಲೋನಿ, ದೇವರಾಜ ಅರಸ್ ಕಾಲೋನಿ,...

ಬಳ್ಳಾರಿ | ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಪ್ರದರ್ಶನ ಉಳಿಸಿ ಬೆಳೆಸಬೇಕು: ಜೋಳದರಾಶಿ ತಿಮ್ಮಪ್ಪ

ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ...

ಭಟ್ಕಳ | ಮಗಳ ಅಶ್ಲೀಲ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ: ಮೂವರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಕಿದ್ವಾಯಿ ರಸ್ತೆಯೊಂದರ ತರಕಾರಿ ವ್ಯಾಪಾರಿಯನ್ನು...

ಮಂಗಳೂರು | ಸ್ನಾತಕೋತ್ತರದತ್ತ ಮುಖಮಾಡದ ಪದವೀಧರರು: ಪ್ರವೇಶಾತಿ ಗಡುವು ವಿಸ್ತರಣೆ

ನಾಲ್ಕು ದಶಕಗಳಷ್ಟು ಹಳೆಯದಾದ ಮಂಗಳೂರು ವಿಶ್ವವಿದ್ಯಾಲಯ(MU), ನಿರೀಕ್ಷಿತ ಸಂಖ್ಯೆಯ ಪ್ರವೇಶಗಳನ್ನು ಪಡೆಯಲು...

Download Eedina App Android / iOS

X