ಶ್ರೀರಂಗಪಟ್ಟಣ | ಕುವೆಂಪು ಕನ್ನಡ ನಾಡಿಗೆ ಕೀರ್ತಿ ಕಳಶ: ಸಿ.ಎಸ್.ವೆಂಕಟೇಶ್

Date:

Advertisements

ಕುವೆಂಪು ಕನ್ನಡ ನಾಡಿಗೆ ಕೀರ್ತಿ ಕಳಶ. ಅವರು ಸಾಹಿತ್ಯ ಕೃಷಿಯ ಜೊತೆಗೆ ಸಾಮಾಜಿಕ ಕಳಕಳಿ ಇಟ್ಟು ಕೊಂಡವರಾಗಿದ್ದರು. ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ ಎಂದು ತಮ್ಮ ಕೃತಿಗಳಲ್ಲಿ ಶ್ರೀಸಾಮಾನ್ಯನಿಗೆ ಮಾನ್ಯತೆ ಕೊಟ್ಟಿದ್ದರು ಎಂದು ಶ್ರೀರಂಗಪಟ್ಟಣದ ಪ್ರಜ್ಞಾವಂತರ ವೇದಿಕೆಯ ವಕೀಲರಾದ ವೆಂಕಟೇಶ್ ಹೇಳಿದರು.

Screenshot 2024 12 30 07 03 05 36 92460851df6f172a4592fca41cc2d2e6

ಅವರು ಶ್ರೀರಂಗಪಟ್ಟಣದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕುವೆಂಪು ಜಯಂತಿಯಂದು ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿ, ನಮ್ಮ ನಾಡಿನ ಹಿರಿಮೆಯನ್ನು ತಮ್ಮ ಕಾವ್ಯಗಳ ಮೂಲಕ ಕಟ್ಟಿಕೊಟ್ಟಿದ್ದಾರೆ ಎಂದರು.

ರೈತರ ಬದುಕು ಹೇಗಿದೆ. ಯಾವ ರೀತಿಯಲ್ಲಿ ವಂಚನೆ ಇಲ್ಲದೆ ರೈತರು ತನ್ನ ಕಾಯಕ ಮಾಡಿಕೊಂಡು ಬರುತ್ತಾರೆ ಎಂದು ರೈತ ಗೀತೆ ಮೂಲಕ ಕುವೆಂಪು ಬಹಳ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಈ ರೈತ ಗೀತೆ, ರೈತ ಹೋರಾಟಗಾರರಿಗೆ ಸ್ಪೂರ್ತಿ ಕೊಡುವ ಹಾಡಾಗಿದೆ ಎಂದು ನೆನೆದರು.

Advertisements

ಇದನ್ನು ಓದಿದ್ದೀರಾ? ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈದಿನ ವಿಶೇಷ ಸಂಚಿಕೆ, ನ್ಯೂಸ್ ಆ್ಯಪ್ ಬಿಡುಗಡೆ

ಕಡತನಾಳು ಜಯಶಂಕರ್ ಮಾತನಾಡಿ, ಶ್ರೀರಂಗಪಟ್ಟಣ ಕುವೆಂಪುರವರ ಆಶಯದಂತೆ ಸರ್ವ ಜನಾಂಗದ ಶಾಂತಿಯ ತೋಟದಂತಿದೆ. ಕುವೆಂಪು ವಿಶ್ವ ಮಾನವ ಸಂದೇಶ ಕೊಟ್ಟ ಕಾರಣ ವಿಕ್ಕೆಲ್ಲಾ ಕವಿಗಳಿಗಿಂತ ಹೆಚ್ಚಾಗಿ ನೆನೆಸುತ್ತೆವೆ. ಸಮಾಜದಲ್ಲಿ ನಡೆಯುತ್ತಿರುವ ಅನಿಷ್ಟಗಳನ್ನಲ್ಲಾ ತಮ್ಮ ಸಾಹಿತ್ಯದ ಮೂಲಕ ಖಂಡಿಸಿ ತಿದ್ದಿ ತೀಡಿದರು. ಆ ಕಾರಣಕ್ಕಾಗಿ ವಿಶ್ವ ಮಾನ್ಯರಾದರು ಎಂದರು.

ಇದನ್ನು ನೋಡಿದ್ದೀರಾ? 100 ಮೀಟರ್ ರಸ್ತೆಗೆ ₹55 ಲಕ್ಷ ಖರ್ಚು!

ಕುವೆಂಪು ದಿನಾಚರಣೆಯ ಸಂದರ್ಭದಲ್ಲಿ ಪ್ರಜ್ಞಾವಂತರ ವೇದಿಕೆ ಸಂಚಾಲಕರಾದ ಸಿ.ಎಸ್. ವೆಂಕಟೇಶ್, ಅಪ್ಪಾಜಿ ಶೆಟ್ಟಹಳ್ಳಿ, ಜಯಶಂಕರ, ಬೌದ್ಧ ಮಹಾಸಭಾದ ಸುರೇಂದ್ರ, ಮಾನವ ಹಕ್ಕು ಸಂಘಟನೆಯ ವಿಜೇಂದ್ರ ಕುಮಾರ್, ಪುಟ್ಟು, ವೆಂಕಟಮ್ಮ, ರೈತ ಸಂಘದ ಚಿಕ್ಕತಮ್ಮೇಗೌಡ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X