ಬೆಂ.ಗ್ರಾಮಾಂತರ | ಮುಹೂರ್ತದ ವೇಳೆ ಹೊರನಡೆದ ವರ; ಕುಟುಂಬ ಕಂಗಾಲು

Date:

Advertisements

ಯುವತಿಯೋರ್ವಳು ಅನ್ಯ ಯುವಕನೊಂದಿಗೆ ಪ್ರೀತಿಯಲ್ಲಿದ್ದ ವಿಷಯ ತಿಳಿದ ವರ ತಾಳಿ ಕಟ್ಟುವ ವೇಳೆ ಹಸೆಮಣೆಯಿಂದ ಎದ್ದು ಹೊರನಡೆದಿರುವ ಘಟನೆ ಬೆಂ.ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬಾಲೇಪುರದಲ್ಲಿ ಬುಧವಾರ ನಡೆದಿದೆ.

ಮಂಗಳವಾರ ಖುಷಿಯಿಂದ ಆರತಕ್ಷತೆ ಮುಗಿಸಿಕೊಂಡಿದ್ದ ವರ ತಾಳಿ ಕಟ್ಟುವ ಸಮಯದಲ್ಲಿ ಹೊರನಡೆದಿದ್ದಾನೆ. ವರನ ದಿಢೀರ್‌ ವರ್ತನೆ ಕಂಡು ಕುಟುಂಬಸ್ಥರು ಬೆರಗಾಗಿದ್ದಾರೆ.

ಯುವತಿಯ ಪ್ರೀತಿಯ ಕಾರಣ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಪ್ರೀತಿಯ ವಿಚಾರ ಮೊದಲೇ ತಿಳಿಸಲಾಗಿತ್ತು. ಆದರೂ ಈ ರೀತಿ ಮಾಡಿದ್ದಾರೆ. ನಮಗೆ ನ್ಯಾಯ ಬೇಕು ಎಂದು ಯುವತಿ ಕುಟುಂಬಸ್ಥರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

Advertisements

ಜೀವನಪರ್ಯಂತ ಕೂಡಿ ಬಾಳಬೇಕಿರುವ ಜೋಡಿಗಳು ಮದುವೆ ವಿಚಾರದಲ್ಲಿ ಎಡವುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಮದುವೆ ವಿಚಾರದಲ್ಲಿ ದೃಢ ನಿರ್ಧಾರ, ಪರಸ್ಪರ ಖಚಿತತೆಯಿಂದ ಮಾತ್ರವೇ ಇಂತಹ ಎಡವಟ್ಟುಗಳಿಗೆ ಸೂಕ್ತ ಪರಿಹಾರ ದೊರೆಯಲಿದ್ದು, ಎಲ್ಲರೂ ಪಾಲಿಸಬೇಕಿದೆ.

ಇದನ್ನೂ ಓದಿ : ಈ ದಿನ ಸಂಪಾದಕೀಯ | ಮರ್ಯಾದೆಗೇಡು ಹತ್ಯೆಗಳು ನಿಲ್ಲಬೇಕಿದ್ದರೆ ಜಾತಿವಿನಾಶ ಆಗಲೇಬೇಕು

ಒಟ್ಟಾರೆಯಾಗಿ, ಗಂಡಾಳಿಕೆಯ ನಮ್ಮ ಸಮಾಜದಲ್ಲಿ ಗಂಡಿಗೊಂದು ನಿಯಮ, ಹೆಣ್ಣಿಗೊಂದು ನಿಯಮ ಪಾಲಿಸಲಾಗುತ್ತಿದೆ. ಗಂಡು ಹೆಣ್ಣು ಸಮಾನ ಎಂದೇಳುವ ಬಹುತೇಕರು ಗಂಡು ಹೆಚ್ಚು ಸಮಾನ ಎಂದೇ ಬಗೆಯುತ್ತಾರೆ ಮತ್ತು ಅದನ್ನೇ ಆಚರಿಸುತ್ತಾರೆ. ತನ್ನ ಪ್ರೀತಿ ಪ್ರಕರಣಗಳು ಎಷ್ಟೇ ಇದ್ದರೂ ಅದು ಸಹಜ ಸ್ವಾಭಾವಿಕ. ತಾನು ಕೈಹಿಡಿಯುವ ಹೆಣ್ಣಿಗೆ ಪ್ರೀತಿ ಪ್ರೇಮದ ಗತ ಇರಕೂಡದು ಮತ್ತು ಅಂತಹ ಹುಡುಗಿಯನ್ನು ಮದುವೆಯಾಗುವುದು ತನ್ನ ಹಕ್ಕು ಎಂದು ಗಂಡು ಭಾವಿಸುತ್ತಾನೆ. ಹೆಣ್ಣು ಮಕ್ಕಳೂ ಈ ತತ್ವವನ್ನು ಪಾಲಿಸಲು ಆರಂಭಿಸಿದರೆ, ಗಂಡಸಿಗೆ ಮದುವೆ ಮರೀಚಿಕೆ ಆದೀತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ | 20 ವರ್ಷಗಳ ಅಸಹಜ ಸಾವು ಪ್ರಕರಣ; ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಆಗ್ರಹ

ಬೆಂಗಳೂರಿನ ಪ್ರಮುಖ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಸಭೆ ಸೇರಿ ಧರ್ಮಸ್ಥಳ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಬೆಂಗಳೂರಿನಲ್ಲಿ ಬೈಕ್‌ ಟ್ಯಾಕ್ಸಿ ಪುನರಾರಂಭ; ಸೀಮಿತ ಆ್ಯಪ್‌ಗಳಲ್ಲಿ ಮಾತ್ರ ಲಭ್ಯ

ಬೆಂಗಳೂರಿನಲ್ಲಿ ಗುರುವಾರದಿಂದ (ಆಗಸ್ಟ್‌ 21) ಮತ್ತೆ ಬೈಕ್‌ ಟ್ಯಾಕ್ಸಿ ಸೇವೆಗಳು ಪುನಾರಂಭವಾಗಿವೆ....

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

Download Eedina App Android / iOS

X