ಮಂಡ್ಯ | ಹೈಕೋರ್ಟ್ ತೀರ್ಪು ಉಲ್ಲಂಘಿಸಿ ವೃದ್ಧ ದಂಪತಿಗೆ ವಂಚನೆ: ವಕೀಲ ವೆಂಕಟೇಶ್ ಆರೋಪ

Date:

Advertisements

ಮನೆ ಮತ್ತು ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ಉಲ್ಲಂಘನೆ ಮಾಡಿದ್ದು, ವೃದ್ಧ ದಂಪತಿಗೆ ವಂಚನೆ ಮಾಡಿದ್ದಾರೆ ಎಂದು ವಕೀಲ ವೆಂಕಟೇಶ್ ಆರೋಪ ವ್ಯಕ್ತಪಡಿಸಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ತಮ್ಮ ಕಚೇರಿಯಲ್ಲಿ ಮಾತನಾಡಿ, “ತಾಲೂಕಿನ ಮಿರ್ಚಿಬೋರನಕೊಪ್ಪಲು ಗ್ರಾಮದಲ್ಲಿ ಮರಿಸ್ವಾಮಾಚಾರ ಮತ್ತು ಸರೋಜಮ್ಮ ದಂಪತಿ ವಾಸವಾಗಿದ್ದರು. ಸತೀಶ್, ಮರಿಸ್ವಾಮಾಚಾರ ತಮ್ಮನ ಮಗ ದಂಪತಿ ಗಮನಕ್ಕೆ ಬಾರದಂತೆ ಪ್ರಮಾಣಪತ್ರ ಮಾಡಿಸುವ ನೆಪದಲ್ಲಿ ನೋಂದಣಿ ಮಾಡಿಸಿಕೊಂಡು ಅವರ ಹೆಸರಿಗೆ ಖಾತೆ ಮಾಡಿಕೊಂಡಿದ್ದಾರೆ. ಈ ಮೋಸ ದಂಪತಿಗೆ ಗೊತ್ತಾಗಿ ಹಿರಿಯ ನಾಗರಿಕರ ಪ್ರಕರಣದಡಿ ಪಾಂಡವಪುರ ವಿಭಾಗಾಧಿಕಾರಿಗಳ ಕೋರ್ಟಿನಲ್ಲಿ ಕೇಸು ದಾಖಲು ಮಾಡಿದ್ದರು. ಬಳಿಕ ಹಿರಿಯರ ಪರ ತೀರ್ಪು ಬಂದಿದೆ” ಎಂದು ವಕೀಲ ವೆಂಕಟೇಶ್ ಮಾಹಿತಿ ನೀಡಿದರು.

“ಉಪವಿಭಾಗಾಧಿಕಾರಿಗಳ ತೀರ್ಪಿನ ಮೇಲೆ ಸತೀಶ ಹೈಕೋರ್ಟಿಗೆ ಹೋಗಿ ತಡೆ ತಂದಿದ್ದಾರೆ. ಇದನ್ನು ಎಸಿ ಕೂಡ ತಹಶೀಲ್ದಾರರಿಗೆ ಹೈಕೋರ್ಟಿನ ಪ್ರೊಸೀಡಿಂಗನ್ನು ಫಾಲೋ ಮಾಡಲು ತಿಳಿಸಿದ್ದಾರೆ. ಆದರೆ ಶ್ರೀರಂಗಪಟ್ಟಣ ತಹಶೀಲ್ದಾರರು ವ್ಯತಿರಿಕ್ತವಾಗಿ ಒಂದು ನೋಟಿಸ್‌ ಮಾಡಿ ಪೊಲೀಸರ ರಕ್ಷಣೆಯೊಂದಿಗೆ ಸತೀಶನನ್ನು ವೃದ್ಧದಂಪತಿ ಮನೆಗೆ ಸೇರಿಸಲು ಕಳಿಸಿದ್ದಾರೆ. ಇದು ಕಾನೂನು ಬಾಹಿರ” ಎಂದು ತಿಳಿಸಿದರು.

Advertisements

“ಎಸಿ ಆದೇಶದ ಮೇಲೆ ಒಬ್ಬರನ್ನು ಮನೆ ಖಾಲಿಮಾಡಿಸಿದ ಮೇಲೆ ಪುನಃ ಮನೆಗೆ ಸೇರಿಸಲು ಬರುವುದಿಲ್ಲ. ಹೈಕೋರ್ಟಿನಲ್ಲಿ ಇಂಜೆಕ್ಷನ್ ಆರ್ಡರ್ ಮನೆಗೆ ಹೋಗಲು ಅವಕಾಶ ಮಾಡಿಕೊಟ್ಟಿದೆಯೆಂದು ಆದೇಶ ಇದ್ದಲ್ಲಿ ಮಾತ್ರ ಸೇರಿಸಬೇಕು. ಶ್ರೀರಂಗಪಟ್ಟಣ ತಹಶೀಲ್ದಾರರು ಹೆಚ್ಚುವರಿ ಮುತುವರ್ಜಿ ತೆಗೆದುಕೊಂಡು ಹೈಕೋರ್ಟ್ ಆದೇಶದಲ್ಲಿ ಇಲ್ಲದಿದ್ದರೂ, ಪ್ರಕರಣ ನ್ಯಾಯಾಲಯದಲ್ಲಿ ಇದ್ದಾಗ ಪೊಲೀಸರ ರಕ್ಷಣೆಗೆ ಆದೇಶ ಮಾಡಿ, ಸತೀಶ್ ಮತ್ತು ಕುಟುಂಬವನ್ನು ಸರೋಜಮ್ಮ ದಂಪತಿ ಮನೆಯಲ್ಲಿ ಒಟ್ಟಿಗೆ ಸೇರಿಸಲು ಆದೇಶಿಸುತ್ತಾರೆ” ಎಂದರು.

ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಹೆಣ್ಣುಮಕ್ಕಳ ಸುರಕ್ಷತೆ, ಹಕ್ಕು, ಆಶಯಗಳಿಗೆ ‘ಅಪ್ತಗೆಳತಿ’ ಪೂರಕ: ಶಾಸಕ ಎ ಆರ್ ಕೃಷ್ಣಮೂರ್ತಿ

“ಹಾವು ಮುಂಗುಸಿಯಂತೆ ಕಿತ್ತಾಡುತ್ತಿರುವ ಇಬ್ಬರು ಎದುರುದಾರರನ್ನು ಒಟ್ಟಿಗೆ ಒಂದೇ ಮನೆಗೆ ಸೇರಿಸುತ್ತಿರುವುದು ಎಷ್ಟು ಸರಿ? ನೀವು ಆದೇಶ ಮಾಡಿರುವುದು ಸರಿಯೇ? ಈ ಪ್ರಕರಣಕ್ಕೆ ಸತೀಶ್ ತಡೆ ಆದೇಶ ತಂದಿದ್ದಾರೆಯೇ? ಇದರ ಬಗ್ಗೆ ಕಾನೂನು ತಿಳುವಳಿಕೆ ಇದ್ದರೂ ಕೂಡ ಶ್ರೀರಂಗಪಟ್ಟಣದ ತಹಶೀಲ್ದಾರರಾದ ನೀವು ಕಾನೂನುಬಾಹಿರವಾಗಿ ಎದುರುದಾರರನ್ನು ಒಟ್ಟಿಗೆ ಸೇರಿಸಿ ಇನ್ನೂ ಅಶಾಂತಿ ಉಂಟು ಮಾಡುತ್ತಿದ್ದೀರೆಂದು ನಿಮಗೆ ಅನ್ನಿಸುವುದಿಲ್ಲವೇ? ಹಿರಿಯ ನಾಗರಿಕರಿಗೆ ಸಂರಕ್ಷಣೆ ಏಕೆ ಕೊಡುತ್ತಿಲ್ಲ? ಹೈಕೋರ್ಟ್ ಆದೇಶ ಇಲ್ಲದಿದ್ದರೂ ನೀವೇ ಒಂದು ಆದೇಶ ಮಾಡಿರುವುದು ಕಾನೂನು ಬಾಹಿರ. ಈ ಕೂಡಲೇ ತಹಶೀಲ್ದಾರರಾದ ತಾವು ಕಾನೂನು ಬಾಹಿರ ಚಟುವಟಿಕೆ ನಿಲ್ಲಿಸಬೇಕು. ಹೈಕೋರ್ಟಿನ ಆದೇಶಕ್ಕೆ ಮಾನ್ಯತೆ ಕೊಡಬೇಕು” ಎಂದು ವಕೀಲ ವೆಂಕಟೇಶ್ ಒತ್ತಾಯಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X