- ಅಂಗನವಾಡಿ ಕೇಂದ್ರದಲ್ಲಿರುವ ಸುಮಾರು 12 ಮಂದಿ ಮಕ್ಕಳು
- ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹ
ಅಂಗನವಾಡಿ ಕೇಂದ್ರಗಳಿಗೆ ಕಳಪೆ ಗುಣಮಟ್ಟದ ಆಹಾರ ಪದಾರ್ಥ ಪೂರೈಸುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅಂತೆಯೇ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ಚಿಕ್ಕಮಸೀದಿ ಬೀದಿಯಲ್ಲಿರುವ ಅಂಗನವಾಡಿಗೆ ಕಳಪೆ ಗುಣಮಟ್ಟದ ಅಕ್ಕಿಯನ್ನು ಪೂರೈಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಚಿಕ್ಕಮಸೀದಿ ಬೀದಿಯಲ್ಲಿರುವ ಅಂಗನವಾಡಿಯಲ್ಲಿ ಸುಮಾರು 12 ಮಂದಿ ಮಕ್ಕಳಿದ್ದಾರೆ. ಆದರೆ, ಕೇಂದ್ರಕ್ಕೆ ಹುಳು ಬಿದ್ದ ಅಕ್ಕಿಯನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪೋಷಕರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
“ಇಲಾಖೆಯಿಂದ ಹುಳು ಬಿದ್ದ ಅಕ್ಕಿಯನ್ನು ವಿತರಿಸಿದರೆ, ಇತ್ತ ಅಂಗನವಾಡಿಯ ಸಿಬ್ಬಂದಿ ಕೂಡ ಅದೇ ಅಕ್ಕಿಯನ್ನು ಬಳಸಿ ಆಹಾರ ತಯಾರಿಸುತ್ತಿದ್ದಾರೆ” ಎಂದು ಪೋಷಕರು ಕಿಡಿಕಾರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಅಂಗನವಾಡಿ ಕೇಂದ್ರಗಳಿಗೆ ಕಳಪೆ ಮೊಟ್ಟೆ ವಿತರಣೆ; ತನಿಖೆಗೆ ನ್ಯಾ. ಕೆ ಎನ್ ಫಣೀಂದ್ರ ಭರವಸೆ
“ಹುಳು ಬಿದ್ದ ಅಕ್ಕಿಯನ್ನು ಪುಟ್ಟ ಕಂದಮ್ಮಗಳು ಸೇವಿಸಿ ಹೆಚ್ಚು ಕಡಿಮೆ ಆದರೆ ಗತಿ ಏನು? ಸಂಬಂಧಪಟ್ಟ ಅಧಿಕಾರಿಗಳು, ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.