ಮಂಗಳೂರು | ಮುಸ್ಲಿಂ ಯುವಕನ ದೀಪಾವಳಿ ಸಂಭ್ರಮ; ಗೂಡುದೀಪ ತಯಾರಿಸಿ ಹಂಚಿದ ಅಶ್ಫಾಕ್

Date:

Advertisements

ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಗೂಡುದೀಪಗಳನ್ನು ಮಾಡುವವರೇ ಅತಿ ವಿರಳ. ಆದರೆ, ಅಂತಿಮ ವರ್ಷದ ಎಂಜಿನಿಯರಿಂಗ್ ಓದುತ್ತಿರುವ ಮುಸ್ಲಿಂ ವಿದ್ಯಾರ್ಥಿ ಅಶ್ಫಾಕ್ ಎಂಬವರು ದೀಪಾವಳಿ ಮತ್ತು ಗೂಡುದೀಪದ ಮೇಲೆ ಅತಿಯಾದ ಪ್ರೀತಿ ಇಟ್ಟುಕೊಂಡಿದ್ದಾರೆ. ಈ ಬಾರಿಯ ದೀಪಾವಳಿಗೆ ಒಟ್ಟು 17 ಸಾಂಪ್ರದಾಯಿಕ ಗೂಡುದೀಪಗಳನ್ನು ತಯಾರಿಸಿ, ತನ್ನ ಸ್ನೇಹಿತರಿಗೆ ಹಂಚಿದ್ದಾರೆ. ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಏಳಿಂಜೆ ಗ್ರಾಮದ ಕೋಂಜಾಲು ಗುತ್ತುವಿನ ನಿವಾಸಿ ಅಶ್ಫಾಕ್ ಮೂಲತಃ ಬಾಗಲಕೋಟೆಯವರು. ಸ್ಥಜೋಂಜಾಲು ಗುತ್ತಿವನ ಮೂಲ ನಿವಾಸಿ ಕೌಶಲ್ಯ ಶೆಟ್ಟಿ ಅವರ ಪೋಷಣೆಯಲ್ಲಿ ಅಶ್ಫಾಕ್‌ ವಾಸಿಸುತ್ತಿದ್ದಾರೆ.

ಅಶ್ವಾಕ್ ಅವರು ದೀಪಾವಳಿ ಸಮಯದಲ್ಲಿ ಬಳಸಲಾಗುವ ದೀಪಗಳನ್ನು ಗಮನಿಸುತ್ತಿದ್ದರು. ಇದೀಗ, ಅವರೇ ಸ್ವತಃ ಗೂಡುದೀಪಗಳನ್ನು ತಯಾರಿಸಿದ್ದಾರೆ. ಅವರ ಕೆಲಸವು ಕೋಮುಸೌಹಾರ್ದತೆಗೆ ಸಾಕ್ಷಿಯಾಗಿರುವ ಜತೆಗೆ, ಅಶ್ವಾಕ್ ಸ್ಥಳೀಯರ ಪ್ರೀತಿಗೆ ಪಾತ್ರರಾಗಿದ್ದಾರೆ.

Advertisements
ಮಂಗಳೂರು, ಮುಸ್ಲಿಂ, ದೀಪಾವಳಿ, ಸೌಹಾರ್ದ ದೀಪಾವಳಿ, ಗೂಡುದೀಪ, Mangalore, Muslim, Diwali, Friendly Diwali, GooduDeepa,

“ಅಶ್ವಾಕ್ ಕಳೆದ ಹಲವಾರು ವರ್ಷಗಳಿಂದ ಸಾಂಪ್ರದಾಯಿಕ ಗೂಡುದೀಪ ತಯಾರಿಸುತ್ತಿದ್ದಾರೆ. ಕಳೆದ ತಿಂಗಳು ರಜೆಯ ಸಮಯದಲ್ಲಿ ರಾತ್ರಿ-ಹಗಲು ಕುಳಿತು 17 ಸಾಂಪ್ರದಾಯಿಕ, ದೊಡ್ಡಗಾತ್ರದ ಗೂಡುದೀಪ ಸಿದ್ದಪಡಿಸಿದ್ದಾರೆ. ಆದರೆ, ಯಾವುದೇ ಗೂಡುದೀಪಗಳನ್ನು ಮಾರಾಟ ಮಾಡದೆ ತನ್ನ ಮಿತ್ರರಿಗೆ ಹಂಚಿ ಖುಷಿಪಟ್ಟಿದ್ದಾರೆ. ಕಲಾತ್ಮಕವಾದ ಎಲ್ಲ ಕೃತಿಗಳನ್ನೂ ಇವರು ಮಾಡುತ್ತಾರೆ. ಅಲ್ಲದೆ ಹೈನುಗಾರಿಕೆಯಲ್ಲೂ ತೊಡಗಿಸಿರುವ ಅಶ್ಫಾಕ್ ದನ ಸಾಕಾಣಿಕೆಯಲ್ಲಿ ಆಸಕ್ತಿ ಹೊಂದಿದ್ದಾರೆ” ಎಂದು ಕೌಶಲ್ಯ ಶೆಟ್ಟಿ ಹೇಳಿದ್ದಾರೆ.

“ಹಿಂದಿನಿಂದಲೂ ಅಪಾರ ಆಸಕ್ತಿ ಇತ್ತು. ಮಕ್ಕಳ ಸಹಕಾರದಿಂದ ಸಾಂಪ್ರದಾಯಿಕ ಗೂಡುದೀಪ ತಯಾರಿಕೆಯಲ್ಲಿ ತೊಡಗಿದೆ. ಕೌಶಲ್ಯ ಶೆಟ್ಟಿಯವರ ಪ್ರೋತ್ಸಾಹದಿಂದ ಇದು ಸಾಧ್ಯವಾಯಿತು” ಎಂದು ಎಂಜಿನಿಯರಿಂಗ್ ವಿದ್ಯಾರ್ಥಿ ಅಶ್ಫಾಕ್ ತಿಳಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X