ಮೇ ಸಾಹಿತ್ಯ ಮೇಳ | ಭಾರತದಲ್ಲಿ ಮನುವಾದದ ವಿರುದ್ಧ ಶರಣರ ಪರಂಪರೆಯಿದೆ: ಪ್ರಕಾಶ್ ಅಂಬೇಡ್ಕರ್

Date:

Advertisements

ಭಾರತದ ಸಂಸ್ಕೃತಿಯಲ್ಲಿ ಎರಡು ಬಗೆಯ ಪರಂಪರೆಗಳಿವೆ. ಒಂದು, ಯಾಜಮಾನ್ಯ ಆಳ್ವಿಕೆಯ ದಬ್ಬಾಳಿಕೆಯ ಪರಂಪರೆ, ಮತ್ತೊಂದು, ಶರಣರ ಪರಂಪರೆ. ನಾವು ಅಪ್ಪಿಕೊಳ್ಳುವುದು ಶರಣ ಪರಂಪರೆಯನ್ನು, ಇದು ದೇಶದುದ್ದಕ್ಕೂ ಹಬ್ಬಿದೆ ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.

ಬಿಜಾಪುರದಲ್ಲಿ ನಡೆಯುತ್ತಿರುವ ‘ಮೇ ಸಾಹಿತ್ಯ ಮೇಳ’ದಲ್ಲಿ ಅವರು ಮಾತನಾಡಿದರು. “ಯಾಜಮಾನ್ಯ ಪರಂಪರೆಯು ಹಿಟ್ಲರ್ ಶಾಹಿಯಾದದ್ದು, ಇದರಲ್ಲಿ ನಿಮಗೆ ಚಿಂತಿಸುವ ಅವಕಾಶವಿಲ್ಲ. ಇದನ್ನು ವಿವರಿಸುವಾಗ ಮನುಸ್ಮೃತಿಯನ್ನು ಉದಾಹರಿಸಲಾಗುತ್ತದೆ. ಅಂದರೆ ಇಲ್ಲಿ ಯಾಜಮಾನ್ಯ ಮಾತ್ರವಲ್ಲ, ಅಸಹಿಷ್ಣುತೆಯೂ ಇದೆ ಎಂದರ್ಥ” ಎಂದರು.

“ಮತ್ತೊಂದೆಡೆ ಸಂತರ ಪರಂಪರೆಯಿದೆ. ಇಲ್ಲಿ ಶಾಂತಿಯಿದೆ, ಪರಸ್ಪರರನ್ನು ಒಪ್ಪಿಕೊಳ್ಳುವುದಿದೆ, ಸಹಬಾಳ್ವೆಯಿದೆ. ಜಾತಿ ಪದ್ಧತಿಯ ವಿರುದ್ಧ ಹೋರಾಟವಿದೆ. ಉದಾಹರಣೆಗೆ – ಸಂತರ ಸಂಸ್ಕೃತಿಯಲ್ಲಿ ಪುನರ್ವಿವಾಹವಿದೆ. ಆದರೆ, ವೈದಿಕಶಾಹಿಯಲ್ಲಿ ಮಹಿಳೆಯರಿಗೆ ಮರುವಿವಾಹದ ಅವಕಾಶವಿಲ್ಲ” ಎಂದು ವಿವರಿಸಿದರು.

Advertisements

“ಯಾರು ಸರ್ಕಾರಿ ಶಾಲೆಗಳಲ್ಲಿ ಕಲಿತರೋ, ಮೀಸಲಾತಿ ಅಡಿಯಲ್ಲಿ ಶಿಕ್ಷಣ ಪಡೆದರೋ ಅವರು ಈಗ ಅವರೆಡರ ವಿರುದ್ಧವೂ ಮಾತನಾಡುತ್ತಿದ್ದಾರೆ. ಇದೇ ಶಾಲೆಗಳಿಲ್ಲದಿದ್ದಾರೆ ಅವರು ಓದಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಸಾಮಾಜಿಕ, ಆರ್ಥಿಕ ಸುಭದ್ರತೆ ದೊರೆತ ನಂತರ, ಅವು ಬೇರೆ ವಿಷಯಗಳಂತೆ ಕಾಣುತ್ತಿವೆ. ಅವರೆಲ್ಲರೂ ಶಿಕ್ಷಣದ ಖಾಸಗೀಕರಣದ ಸಮರ್ಥಕರಾಗಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಮೊದಲೂ ಕೂಡಾ ಶಿಕ್ಷಣ ಖಾಸಗೀಕರಣದಲ್ಲೇ ಇತ್ತು. ಅದರಿಂದಲೇ ಅದನ್ನು ಧರ್ಮದ ಅಡಿಯಾಳಾಗಿ ಮಾಡಲಾಗಿತ್ತು. ಈ ಸಮುದಾಯ ಓದಬಹುದು, ಇವರು ಓದಬಾರದು ಎಂಬ ಧಾರ್ಮಿಕ ಕಟ್ಟುಪಾಡುಗಳಿದ್ದವು. ಬ್ರಿಟಿಷ್ ಸರ್ಕಾರ ಅದನ್ನು ಬದಲಿಸಿತು. ಈಗ ಶಿಕ್ಷಣದಲ್ಲಿ ಹೊಸ ಪದ್ದತಿಯನ್ನು ತರಲು ಯತ್ನಿಸಲಾಗುತ್ತಿದೆ. ‘ನೀವು ಎಷ್ಟು ಬೇಕಾದರೂ ಓದಿ ನಾವು ಬೇಡ ಎನ್ನುವುದಿಲ್ಲ. ಆದರೆ, ಅದರ ಖರ್ಚು ನೀವೇ ಭರಿಸಬೇಕು’ ಎಂದು ಹೇಳಲಾಗುತ್ತಿದೆ. ಯೋಚಿಸಿ ನೋಡಿ, ಒಂದುವೇಳೆ ಎಲ್ಲ ಸರ್ಕಾರಿ ಶಾಲೆಗಳು ಮುಚ್ಚಿಹೋದರೆ, ನಾವು ವೆಚ್ಚ ಭರಿಸಿ ನಮ್ಮ ಮಕ್ಕಳನ್ನು ಓದಿಸಲು ಸಾಧ್ಯವೇ?” ಎಂದರು.

ಈ ಸುದ್ದಿ ಓದಿದ್ದೀರಾ?: ಮೇ ಸಾಹಿತ್ಯ ಮೇಳ | ದಲಿತ ಚಳವಳಿ ನಾಯಕ ಎನ್ ವೆಂಕಟೇಶ್ ಸೇರಿ ಹಲವರಿಗೆ ಪ್ರಶಸ್ತಿ

“ಶಿಕ್ಷಣದ ಜೊತೆಗೆ ಬಾಬಾಸಾಹೇಬರು ಇನ್ನೆರಡು ವಿಚಾರ ಹೇಳಿದರು, ಸಂಘಟನೆ ಮತ್ತು ಹೋರಾಟ. ಎಲ್ಲಿಯತನಕ ಸಂಘಟನೆ ಇಲ್ಲ, ಅಲ್ಲಿಯತನಕ ನಮ್ಮ ದನಿಯಿಲ್ಲ. ಕರ್ನಾಟಕದ ಚುನಾವಣೆಯಲ್ಲಿ ಬದಲಾವಣೆ ಬಂದಿದೆ. ಬಿಜೆಪಿ ಹೋಗಿ ಕಾಂಗ್ರೆಸ್ ಬಂದಿದೆ. ಆದರೆ, ಕೇಂದ್ರದಲ್ಲಿ ಮನುವಾದಿಗಳಿದ್ದಾರೆ. ಅವರಿಗೆ ಪೂರ್ತಿ ಬಹುಮತ ಇದೆ. ಕೇಂದ್ರ ಸರ್ಕಾರವು ಅನೇಕ ರಾಜಕೀಯ ನಾಯಕರನ್ನು ಇಡಿ, ಸಿಬಿಐ ಇತ್ಯಾದಿಗಳ ಮೂಲಕ ನಿಯಂತ್ರಿಸಲು ನೋಡುತ್ತದೆ” ಎಂದು ಹೇಳಿದರು.

“ರಸ್ತೆಯಲ್ಲಿ ಕೂಗಾಡುವುದರಿಂದ ಪ್ರಯೋಜನವಿಲ್ಲ. ಜನರು ಎಚ್ಚರಗೊಂಡಿದ್ದಾರೆ. ಅವರಿಗೆ ವಿಷಯ ಗೊತ್ತಿದೆ. ಅದನ್ನು ವ್ಯಕ್ತಪಡಿಸುವ ಸಾಧನ ಅವರ ಬಳಿ ಇಲ್ಲ. ಕಾರ್ಯಾಚರಣೆಯ ಸಾಧನವನ್ನು ತಯಾರಿಸುವುದು ಇಂದಿನ ಮುಖ್ಯ ಕೆಲಸ. ಅದನ್ನು ಸಿದ್ಧಪಡಿಸುವ ಯೋಜನೆ ನಮ್ಮ ಬಳಿಯಿರಬೇಕು” ಎಂದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X