ಬೀದರ್‌ | ಸಂಸ್ಕಾರವಿಲ್ಲದ ಸಂಸ್ಕೃತಿ ಸಚಿವ; ಶಿವರಾಜ ತಂಗಡಗಿ ಹೇಳಿಕೆಗೆ ಸಚಿವ ಭಗವಂತ ಖೂಬಾ ಖಂಡನೆ

Date:

Advertisements

ದೇಶದ ಪ್ರಧಾನಿಗಳಿಗೆ ಗೌರವಿಸಿ ಮಾತನಾಡಬೇಕೆನ್ನುವ ಕನಿಷ್ಠ ಸಂಸ್ಕಾರವಿಲ್ಲದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿಯವರು, ಪ್ರಧಾನಿಗಳ ಬಗ್ಗೆ ತುಚ್ಚ ಪದ ಬಳಸಿ ಯುವಕರಿಗೆ ಕರೆಕೊಟ್ಟಿರುವುದು ಖಂಡನಾರ್ಹ, ಇದು ಅವರ ಸಂಸ್ಕೃತಿ ಎತ್ತಿ ತೊರಿಸುತ್ತದೆ ಎಂದು ಕೇಂದ್ರ ಸಚಿವ ಖೂಬಾ
ಖಂಡಿಸಿದ್ದಾರೆ.

ಕಾರಟಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ “ಯುವಕರು. ವಿದ್ಯಾರ್ಥಿಗಳು  ಮೋದಿ ಮೋದಿ ಎನ್ನುತ್ತಾರೆ,  ಅಂತವರ ಕಪಾಳಕ್ಕೆ ಹೊಡೆಯಬೇಕು” ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಂಸದ ಖೂಬಾ ಅವರು, “ಪ್ರಧಾನಿ ಮೋದಿಜಿಯವರು ದೇಶದ ಅಭಿವೃದ್ದಿಗಾಗಿ ಹಾಕುತ್ತಿರುವ ಶ್ರಮ, ಇಡಿ ವಿಶ್ವಕ್ಕೆ ಗೊತ್ತು, ಅಂತರಾಷ್ಟ್ರೀಯ ಮಟ್ಟದಲ್ಲಿ ಜಗತ್ತಿನ ಎಲ್ಲಾ ದೇಶಗಳು ಇಂದು ನರೇಂದ್ರ ಮೋದಿಯವರ ಸಲಹೆ ಸೂಚನೆಗಳಿಗಾಗಿ ಕಾಯುತ್ತವೆ, ಇಂತಹ ಪ್ರಧಾನಿಗಳನ್ನು ಪಡೆದ ಭಾರತಿಯರು ಧನ್ಯರು” ಎಂದು ಸಚಿವ ಖೂಬಾ ತಿಳಿಸಿದ್ದಾರೆ.

“ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ, ಇಂತಹ ಪದಗಳು ಬಳಸುವುದು ಬಿಟ್ಟು, ತಮಗೆ ವಹಿಸಿದ ಸಚಿವಾಲಯದ ಕೆಲಸದ ಕಡೆ ಗಮನಹರಿಸಲಿ, ಇಂತಹ ಸಚಿವರ ಹೇಳಿಕೆಗಳಿಂದ ಇಂದು ಈ ರಾಜ್ಯದ ಜನರು ತಲೆ ತಗ್ಗಿಸುವಂತಾಗಿದೆ, ಇಂತವರನ್ನು ಬೆಳೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಬರುವ ಚುನಾವಣೆಯಲ್ಲಿ ಜನರೇ ಬುದ್ದಿ ಕಲಿಸುತ್ತಾರೆ” ಎಂದು ಕೇಂದ್ರ ಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದರು.

Advertisements

ಕೂಡಲೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಚಿವರ ಪರವಾಗಿ ರಾಜ್ಯದ ಜನರ ಕ್ಷಮೆಯಾಚಿಸಬೇಕು. ಸಚಿವ ಶೀವರಾಜ ತಂಗಡಗಿ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಸಚಿವ
ಖೂಬಾ ಆಗ್ರಹಿಸಿದರು.

ಬಂಜಾರಾ ಸಮಾಜದವರೊಂದಿಗೆ ಹೋಳಿ ಆಚರಣೆ :

ಹೊಳಿ ಹಬ್ಬದ ನಿಮಿತ್ಯ, ಸಂಸದ ಭಗವಂತ ಖೂಬಾರವರ ಮನೆಗೆ ಜಿಲ್ಲೆಯ ಬಂಜಾರಾ ಸಮಾಜದ ತಾಯಂದಿರು, ಸಹೊದರಿಯವರು ಆಗಮಿಸಿ, ಹಾಡು ಹಾಡಿ, ಆಶೀರ್ವದಿಸಿದರು.

ಜೊತೆಗೆ ಸಂಸದರು ಸಹ ಅವರೊಂದಿಗೆ ಅವರ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಈ ಸುದ್ದಿ ಓದಿದ್ದೀರಾ? ಸುರಪುರ ವಿಧಾನಸಭಾ ಉಪ ಚುನಾವಣೆ: ʼಕೈʼ ಹಿಡಿಯುವುದೇ ಅನುಕಂಪದ ಅಲೆ

ಈ ವೇಳೆ ಪಕ್ಷದ ಮುಖಂಡರು, ವಿವಿಧ ಸಂಘಟನೆಯ, ಸಮಾಜದ ಮುಖಂಡರುಗಳು, ಕಟುಂಬದವರು
ಸಚಿವರಿಗೆ ಬಣ್ಣ ಹಚ್ಚಿ, ಮೂರನೆ ಬಾರಿಗೆ ಆಯ್ಕೆಯಾಗಿ ಎಂದು ಶುಭ ಹಾರೈಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಅಧಿಕ ಮಳೆಯಿಂದ ಹಾನಿಗೀಡಾದ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಿ : ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್

 "ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಿಂದ ಸಾಕಷ್ಟು ಮಳೆಯಾಗುತ್ತಿದ್ದು, ಮಳೆಯಿಂದ ಹಾನಿಗೊಳಗಾಗುವ ಪ್ರದೇಶಗಳ ಸಾರ್ವಜನಿಕರ...

ಬೀದರ್‌ | ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಸಚಿವದ್ವಯರ ಭೇಟಿ; ಪರಿಶೀಲನೆ

ಕಮಲನಗರ ಹಾಗೂ ಔರಾದ್‌ ತಾಲೂಕಿನಲ್ಲಿ ಅಧಿಕ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಉಸ್ತುವಾರಿ...

ಹಾವೇರಿ | ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಅರ್ಜಿ ಆಹ್ವಾನ

"ಪರಿಶಿಷ್ಟ ವರ್ಗದ ಜನಾಂಗದ ಏಳಿಗಾಗಿ ಶ್ರಮಿಸಿದ ಅರ್ಹ ವ್ಯಕ್ತಿಗಳಿಗೆ ಶ್ರೀ ಮಹರ್ಷಿ...

ಉಡುಪಿ | ಶಾಸಕ ಯಶ್ಪಾಲ್ ಸುವರ್ಣರವರ ಮೇಲೆ ಕಠಿಣ ಸಾಂವಿಧಾನಿಕ ಕ್ರಮ ಜರುಗಿಸಿ – ಕೆ ಫಣಿರಾಜ್

ತಮ್ಮ ಶಾಸಕ ಸ್ಥಾನದ ಸಂವಿಧಾನಿಕ ಮರ್ಯಾದೆಯನ್ನು ಮೀರಿ ವರ್ತಿಸಿರುವ ಉಡುಪಿಯ ಶಾಸಕ...

Download Eedina App Android / iOS

X