ಸಕ್ಕರೆ ಕಾರ್ಖಾನೆಗೆ ಷೇರು ಹಾಗೂ ಜಮೀನು ಸ್ವಾಧೀನಪಡಿಸಿಕೊಳ್ಳುವುದರಿಂದ ಹಿಡಿದು ಅಗತ್ಯ ಅನುಮತಿ ಪಡೆಯುವವರೆಗೆ ಬಂದ್ ಆಗಿದ್ದ ಕಾರ್ಖಾನೆಗೆ ಮೂಲ ಪ್ರಾರಂಭ ಮತ್ತು ಪುನರಾರಂಭಕ್ಕೆ ರೈತ ಕಾರ್ಮಿಕರಿಗೆ ವಚನ ಭ್ರಷ್ಟನಾಗದೆ, ಕೊಟ್ಟ ಮಾತಿನಂತೆ ನಡೆದುಕೊಂಡಿರುವೆ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ತಿಮ್ಮಾಪುರ ಗ್ರಾಮದ ರನ್ನ ನಗರದಲ್ಲಿರುವ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನರಾರಂಭ ಕಾರ್ಯಕ್ರಮದಲ್ಲಿ ಬೀಗದ ಕೈ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆ ರನ್ನ ಸಕ್ಕರೆ ಕಾರ್ಖಾನೆ ಪುನಶ್ಚೇತನಗೊಂಡಿದೆ. ಚುನಾವಣಾ ಪೂರ್ವದಲ್ಲಿ ರೈತರಿಗೆ ಮತ್ತು ಅಲ್ಲಿನ ಕಾರ್ಮಿಕರಿಗೆ ಹೆತ್ತ ತಾಯಿ ಮೇಲೆ ಆಣೆ ಪ್ರಮಾಣ ಮಾಡಿದ್ದನ್ನು ನಾನು ಈಡೇರಿಸಿದ್ದೇನೆ. ಕಾರ್ಖಾನೆಯನ್ನೇ ನಂಬಿ ಬದುಕುತ್ತಿರುವ ರೈತರು ಹಾಗೂ ಕಾರ್ಮಿಕರಿಗೆ ಮತ್ತು ಷೇರುದಾರರಿಗೆ ಇದು ಸಂಭ್ರಮ ತಂದಿದೆ ಎಂದರು.
ಸಹಕಾರ ಮತ್ತು ನಾಯಕತ್ವದ ಮೂಲಕ ಏನನ್ನು ಸಾಧಿಸಬಹುದು ಎಂಬುದಕ್ಕೆ ಈ ಸಕ್ಕರೆ ಕಾರ್ಖಾನೆಯ ಯಶಸ್ಸು ನಿಜಕ್ಕೂ ಜ್ವಲಂತ ಉದಾಹರಣೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪೂರ್ಣ ಬೆಂಬಲ ಕಾರ್ಖಾನೆ ಪುನಶ್ಚೇತನಕ್ಕೆ ಸಹಕಾರಿಯಾಗಿದ್ದು, ಇದೀಗ ಸ್ಥಳೀಯ ಆರ್ಥಿಕತೆಯನ್ನು ಹೆಚ್ಚಿಸಲು ಮತ್ತು ರೈತರು ಮತ್ತು ಕಾರ್ಮಿಕರ ಜೀವನ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ತಿಳಿಸಿದರು.
ಜಿಲ್ಲೆಗೆ ಮಹತ್ವದ ಮೈಲುಗಲ್ಲಾಗಿದ್ದು, ರೈತರಿಗೆ, ಕಾರ್ಮಿಕರಿಗೆ ಜೀವನಾಡಿಯಾಗಿದೆ. ಸಹಕಾರಿ ಸಕ್ಕರೆ ಕಾರ್ಖಾನೆಗಳು ಸ್ಥಳೀಯ ಆರ್ಥಿಕತೆಯನ್ನು ಬೆಂಬಲಿಸುವಲ್ಲಿ ಮತ್ತು ಗ್ರಾಮೀಣ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಹೇಳಿದರು.
ಕಾರ್ಖಾನೆಯನ್ನು ಪುನಃಸ್ಥಾಪಿಸಲು ಸಚಿವ ತಿಮ್ಮಾಪುರ ಅವರ ಬದ್ಧತೆಯು ರೈತರು ಮತ್ತು ಕಾರ್ಮಿಕರ ಕಲ್ಯಾಣಕ್ಕಾಗಿ ಅವರ ಸಮರ್ಪಣೆಯನ್ನು ತೋರಿಸುತ್ತದೆ ಎಂದು ಬೀಳಗಿ ಶುಗರ್ ಲಿಮಿಟೆಡ್ ಅಧ್ಯಕ್ಷ ಮಾಜಿ ಸಚಿವ ಎಸ್ ಆರ್ ಪಾಟೀಲ್ ಹೇಳಿದರು.

ಸಹಕಾರ ಸಂಘವನ್ನು ಉಳಿಸಿ ಬೆಳೆಸುವುದು ದೊಡ್ಡ ಕಾರ್ಯ. ನಾನು ಕಳೆದ ನಾಲ್ವತ್ತು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಸಹಕಾರ ರಂಗದಲ್ಲಿ ನನ್ನ ಹಲವಾರು ಸಂಸ್ಥೆಗಳು ಇವೆ. ಪಕ್ಷಾತೀತವಾಗಿ ಯಾವುದರಲ್ಲಿಯೂ ಹಸ್ತಕ್ಷೇಪ ಮಾಡದೆ, ರೈತರೊಂದಿಗೆ ಕಾರ್ಮಿಕರೊಂದಿಗೆ ಕಾರ್ಖಾನೆ ಸೇವಾ ಅಭಿವೃದ್ಧಿಗೆ ಶ್ರಮಿಸುತ್ತೇನೆ ಇಂದು ವಾಗ್ದಾನ ಮಾಡಿದರು.
ಸಕ್ಕರೆ ಮತ್ತು ಜವಳಿ ಸಚಿವ ಶಿವಾನಂದ ಪಾಟೀಲ್ ಮಾತನಾಡಿ, ಯಾವುದೇ ಸರ್ಕಾರಗಳು ಬರುತ್ತವೆ ಮತ್ತು ಹೋಗುತ್ತವೆ. ಆದರೆ ರೈತರ ಪರವಾಗಿ ರೈತರ ಬಗ್ಗೆ ಚಿಂತನೆ ಮತ್ತು ಏಳಿಗೆಗಾಗಿ ಸಿದ್ದರಾಮಯ್ಯನವರ ಸರ್ಕಾರ ಈ ಹಿಂದೆ 2013-14 ನೇ ಸಾಲಿನಲ್ಲಿ ರೈತರಿಗೆ ಸಹಾಯಧನ ನೀಡಿದೆ ಮತ್ತು ಈಗಲೂ ರೈತರ ಪರವಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಬಂದಾಗಿರುವ ಸಕ್ಕರೆ ಕಾರ್ಖಾನೆ, ಪುನರಾರಂಭ ಆಗೋದೇ ಕಷ್ಟ. ಆದರೂ ರನ್ನ ಸಹಕರಿ ಸಕ್ಕರೆ ಕಾರ್ಖಾನೆ ಪ್ರಾರಂಭವಾಗಿರುವುದಕ್ಕೆ ಸಚಿವ ತಿಮ್ಮಾಪುರವರ ದೂರ ದೃಷ್ಟಿ ಮತ್ತು ರೈತರಿಗೆ ನೀಡಿದ ಮಾತನ್ನು ಉಳಿಸಿಕೊಡುವಲ್ಲಿ ನನಗೆ ನಿರಂತರವಾಗಿ ಬೆನ್ನು ಬಿಡದೆ ಕಾರ್ಖಾನೆ ಪ್ರಾರಂಭಿಸಲು ಸತತ ಪ್ರಯತ್ನಪಟ್ಟಿದ್ದಾರೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಮೈಸೂರು | ದಸರಾ ಜಂಬೂ ಸವಾರಿ ವೇಳೆ ಕರ್ತವ್ಯ ನಿರತ ಪತ್ರಕರ್ತರ ಮೇಲೆ ಪೊಲೀಸ್ ದರ್ಪ; ಖಂಡನೆ
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯ್ ಕುಮಾರ್ ಸರ್ ನಾಯಕ್ ಶಾಸಕ ಎಚ್ ವೈ ಮೇಟಿ ಮಾತನಾಡಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಉದಯ್ ಕುಮಾರ್ ಸಾರವಾಡ, ರಾಜುಗೌಡ ಪಾಟೀಲ್ ಜಂಬಿಗಿ, ಸಂಜಯ ನಾಯಕ, ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.
