ಮೈಸೂರು | ಕೊಂಬಿಗೆ ಬಲೆ ಸಿಲುಕಿಕೊಂಡು ಜಿಂಕೆ ನರಳಾಟ

Date:

Advertisements

ಕಬಿನಿ ಹಿನ್ನೀರು ಪ್ರದೇಶದಲ್ಲಿ ಮೀನಿನ ಬಲೆಗಳು ವನ್ಯಜೀವಿಗಳ ಪಾಲಿಗೆ ಕಂಟಕವಾಗುತ್ತಿದ್ದು, ಜಿಂಕೆಯ ಕೊಂಬಿಗೆ ಮೀನಿನ ಬಲೆ ಸುತ್ತಿಕೊಂಡು ಪರದಾಡುತ್ತಿದೆ.

ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂತರ ಸಂತೆ ವಲಯದಿಂದ ಹೊರಡುವ ಸಫಾರಿಯಲ್ಲಿ ಡಿ ಜಿ ಕುಪ್ಪೆ ವ್ಯಾಪ್ತಿಯಲ್ಲಿ ಬಲ ಕೊಂಬಿನಲ್ಲಿ ಮೀನಿನ ಬಲೆ ಸಿಲುಕಿಸಿಕೊಂಡಿರುವ ಜಿಂಕೆ ಕಾಣಿಸಿಕೊಂಡಿದೆ.

ಕಬಿನಿ ಹಿನ್ನೀರು ಬಂಡೀಪುರ ಮತ್ತು ನಾಗರಹೊಳೆ ಎರಡು ಅರಣ್ಯ ಪ್ರದೇಶದಲ್ಲಿ ಚಾಚಿಕೋಂಡಿದೆ. ಕಾಡಂಚಿನ ಗ್ರಾಮಸ್ಥರು ಕೆಲವೆಡೆ ಮೀನುಗಾರಿಕೆ ನಡೆಸುತ್ತಾರೆ. ಕೆಲವೊಮ್ಮೆ ಮೀನು ಹಿಡಿದ ನಂತರ ಬಲೆಗಳನ್ನು ಬಿಸಾಡಿ ಹೋಗಿರುತ್ತಾರೆ.

Advertisements
ಕಬಿನಿ ಜಿಂಕೆ

ನೀರು ಕಡಿಮೆಯಾದಾಗ ಮೀನಿನ ಬಲೆ ದಡದಲ್ಲಿಯೇ ಉಳಿದಿರುತ್ತದೆ. ಜತೆಗೆ ಮೀನು ಹಿಡಿಯುವಾಗ ಅರಣ್ಯ
ಸಿಬ್ಬಂದಿಯ ಕಾರ್ಯಾಚರಣೆಗೂ ಹೆದರಿ ಬಲೆಗಳನ್ನು ಬಿಸಾಡಿ ಓಡಿರುತ್ತಾರೆ.

ಕಬಿನಿ ಹಿನ್ನೀರಿಗೆ ನೀರು ಕುಡಿಯಲು ಬರುವ ಹಲವು ವನ್ಯಜೀವಿಗಳು ನೆಲದ ಮೇಲೆ ಬಲೆ ಬಿದ್ದಿರುವುದನ್ನು ಗಮನಿಸದೆ ಬಲೆಯನ್ನು ತುಳಿದು. ಕೊಂಬಿನಿಂದ ಬಿಡಿಸಿಕೊಳ್ಳಲು ಹೋಗಿ ಸಿಕ್ಕಿಸಿಕೊಳ್ಳುತ್ತವೆ. ಇದರಿಂದ ಅವುಗಳ ಸಹಜ ಜೀವನಕ್ಕೆ ತೊಂದರೆಯಾಗುತ್ತದೆ. ಆದ್ದರಿಂದ ಬಲೆಯನ್ನು ಜಿಂಕೆ ಕೊಂಬಿನಿಂದ ಬಿಡಿಸಬೇಕು ಎಂಬುದು ವನ್ಯಜೀವಿ ಪ್ರೀಯರ ಆಗ್ರಹವಾಗಿದೆ.

ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಬಾಲಕಿ ಸಾವು ಪ್ರಕರಣ; ಮಂಜಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X