ಮೈಸೂರು | ‘ ಅರಿವೇ ಅಂಬೇಡ್ಕರ್ ‘ ಸಂಚಿಕೆ ಬಿಡುಗಡೆ; ಓದಿನಲ್ಲಿ ಜೀವವಿದೆ, ಜೀವನವಿದೆ : ಲೇಖಕ ನಾ. ದಿವಾಕರ್

Date:

Advertisements

ಮೈಸೂರಿನ ಶ್ರೀರಾಂಪುರದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿಯಂದು ಈದಿನ. ಕಾಮ್ ಮೊತ್ತ ಮೊದಲ ಬಾರಿಗೆ ಕನ್ನಡದಲ್ಲಿ ಹೋರ ತಂದಿರುವ ‘ ಅರಿವೇ ಅಂಬೇಡ್ಕರ ‘ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿದರು.

ಲೇಖಕರಾದ ನಾ. ದಿವಾಕರ್ ವಿದ್ಯಾರ್ಥಿಗಳ ಕುರಿತು ಮಾತನಾಡಿ ” ಅಂಬೇಡ್ಕರ್‌, ಗಾಂಧಿ, ಕಾರ್ಲ್‌ಮಾರ್ಕ್ಸ್‌ ಸೇರಿದಂತೆ ಸಾಧಕ ಮಹನೀಯರ ಕುರಿತಾಗಿ ವಿಚಾರಗಳನ್ನು ಓದಿ ಮನನ ಮಾಡುವುದು. ಓದಿನ ಅರಿವಿನಿಂದ ತಮ್ಮದೇ ಅಭಿಪ್ರಾಯಗಳನ್ನು ರೂಪಿಸಿಕೊಳ್ಳಲು ಸಹಕಾರಿ. ಅಂದಿನ ಹೋರಾಟಗಳು, ಸಾಗಿ ಬಂದ ಕಠಿಣ ಹಾದಿಗಳು, ಬದುಕಿನ ಸಾರ ಪುಸ್ತಕದ ಓದಿನಿಂದ ಮಾತ್ರ ತಿಳಿಯಲು ಸಾಧ್ಯ.’ ಓದಿನಲ್ಲಿ ಜೀವವಿದೆ, ಜೀವವಿದೆ ‘.

ಅದನ್ನ, ಅರ್ಥೈಸಿ ವಿದ್ಯಾರ್ಥಿಗಳು ಓದಿನ ಆಸಕ್ತಿ ಬೆಳೆಸಿಕೊಳ್ಳಬೇಕು ಉತ್ತಮವಾದ ಸಮಾಜ ನಿರ್ಮಿಸಲು ಮೊದಲು ನಿಮ್ಮಲ್ಲಿ ಅಂತಹ ಪರಿವರ್ತನೆ ಕಂಡುಕೊಳ್ಳಬೇಕು ಅದಕ್ಕಾಗಿ ಓದುವುದನ್ನು ರೂಡಿಸಿಕೊಳ್ಳಿ. ಪತ್ರಿಕೆ ಪುಸ್ತಕಗಳನ್ನು ಓದುವುದು ಮತ್ತು ಅದರ ಬಗ್ಗೆ ಪರಸ್ಪರ ಚರ್ಚಿಸುವುದು ಉತ್ತಮವಾದ ಬೆಳವಣಿಗೆಯಾಗಿದೆ ” ಎಂದು ಕಿವಿಮಾತು ಹೇಳಿದರು.

Advertisements

ಸಮಾಜ ಚಿಂತಕರಾದ ಶ್ರೀನಿವಾಸ ನಟೇಕರ್‌ ಮಾತನಾಡಿ ” ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡು, ಅಂಬೇಡ್ಕರ್‌ ಅವರ ಕನಸನ್ನು ನನಸು ಮಾಡಬೇಕು. ಇದಕ್ಕಾಗಿ, ಅಂಬೇಡ್ಕರ್‌ ವಿಚಾರಗಳ ಸಾರಂಶ ರೂಪದಲ್ಲಿರುವ “ಅರಿವೇ ಅಂಬೇಡ್ಕರ್” ಪುಸ್ತಕವನ್ನು ನಿಮಗೆ ನೀಡುತ್ತೀದ್ದೇವೆ. ಇದನ್ನು ಓದಿ ನಿಮ್ಮ ಜ್ಞಾನ ಮಟ್ಟವನ್ನು ವಿಸ್ತರಿಸಿಕೊಳ್ಳಬೇಕು. ಅಂಬೇಡ್ಕರ್‌ರವರ ಮೂರ್ತಿಗಳನ್ನು ಸ್ವಾಪಿಸಿ ಹಾರ ಹಾಕಿ, ಫೋಟೋಗೆ ಪೂಜೆ ಮಾಡುವದಲ್ಲ, ಅವರ ವಿಚಾರಗಳನ್ನು ಓದಿ ಜೀವನದಲ್ಲಿ ಆಳವಡಿಸಿಕೊಳ್ಳಬೇಕು.

ಅಂಬೇಡ್ಕರ್ ಬರೀ ಹೆಸರಲ್ಲ ಅದೊಂದು ಶಕ್ತಿ ಇಡೀ ಜೀವನವೇ ಹೋರಾಟ. ಓದು, ಬರಹವೇ ಬದುಕಾಗಿತ್ತು. ಅಕ್ಷರ ಜ್ಞಾನ ಸಂಪಾದಿಸಿದ ಮೇರು ವ್ಯಕ್ತಿತ್ವ. ಅಂತಹ, ಮಹನೀಯರ ಬಗ್ಗೆ ಅರಿತು, ಬದುಕಲ್ಲಿ ಅಳವಡಿಸಿಕೊಳ್ಳಬೇಕು ” ಎಂದು ಕರೆ ನೀಡಿದರು.

” ಮೂರ್ತಿ ಭಂಜಕರಾದ ಅಂಬೇಡ್ಕರ್‌. ಮೂರ್ತಿಗಳನ್ನು ಕೆತ್ತುವುದರಲ್ಲೇ ತೃಪ್ತಿಪಡುವ ನಮ್ಮ ನಿಲವು ದುರಾದೃಷ್ಟಕರ. ಅವರು, ದಿನಕ್ಕೆ 18 ಗಂಟೆಗಳ ಕಾಲ ಓದಿ ಜ್ಞಾನ ಸಂಗ್ರಹಿಸಿದರಿಂದ ನಮಗೆ ಮಾರ್ಗದರ್ಶಕರಾಗಿ ನಿಂತಿದ್ದಾರೆ. ಸರ್ವ ಶ್ರೇಷ್ಠವಾದ ಸಂವಿಧಾನ ನೀಡಿದ್ದಾರೆ. ಮೊಬೈಲ್‌ ಬಳಕೆಗಿಂತ ಪುಸ್ತಕಗಳನ್ನು ಓದಬೇಕು. ಓದಿನಿಂದ ಮಾತ್ರ ಸಮಸಮಾಜ ನಿರ್ಮಾಣ ಮಾಡಲು ಸಾಧ್ಯ, ಸ್ವಾಸ್ತ್ಯ ಬದುಕಿಗೆ ಓದು ಉತ್ತಮವಾದ ವೇದಿಕೆ.

ಎಂತಹದ್ದೇ ಆಧುನಿಕತೆ ತೆರೆದುಕೊಳ್ಳಲಿ, ತಂತ್ರಜ್ಞಾನ ಆವರಿಸಲಿ ಎಲ್ಲದಕ್ಕೂ ಓದುವುದೊಂದೆ ಮಾನದಂಡವಾಗಿದೆ. ಓದಿನ ಮೂಲಕ ಬದಲಾವಣೆ ಸಾಧ್ಯ. ಭವಿಷ್ಯದಲ್ಲಿ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ರೂಪಿಸಿಕೊಳ್ಳಲು, ಉತ್ತಮ ಸಮಾಜ ಕಟ್ಟಲು ಜ್ಞಾನರ್ಜನೆ ಅಗತ್ಯವಿದ್ದು ಅದಕ್ಕಾಗಿ ಪ್ರತಿ ದಿನದ ಒಂದಷ್ಟು ಸಮಯವನ್ನಾದರೂ ಓದಿಗೆ ಮೀಸಲೀಡಬೇಕು ” ಎಂದು ವಕೀಲರಾದ ಬಾರುಕೋಲು ರಂಗಸ್ವಾಮಿ ಸಲಹೆ ನೀಡಿದರು.

ನೆರೆದಿದ್ದ ವಿದ್ಯಾರ್ಥಿಗಳಿಗೆ ‘ ಅರಿವೇ ಅಂಬೇಡ್ಕರ ‘ ವಿಶೇಷ ಸಂಚಿಕೆ ವಿತರಿಸಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೆಂಗಳೂರು ನಗರವೋ-ನರಕವೋ, ಕೇಳುವವರಾರು?

ಕಾರ್ಯಕ್ರಮದಲ್ಲಿ ಚಂದ್ರವಲ್ಲಿ, ಶಿಕ್ಷಣ ಇಲಾಖೆ ಮಹಾದೇವಯ್ಯ, ಹಾಸ್ಟೆಲ್‌ ವಾರ್ಡನ್ ಲೋಕೇಶ್‌ ಹಾಗೂ ವಿದ್ಯಾರ್ಥಿಗಳು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X