ಮೈಸೂರು ನಗರದ ಪುರಭವನದ ಮುಂಭಾಗದಲ್ಲಿರುವ ಡಾ ಬಿ ಆರ್ ಅಂಬೇಡ್ಕರ್ ಪ್ರತಿಮೆ ಬಳಿ ಜಮಾಯಿಸಿದ ಕಾರ್ಯಕರ್ತರು ಪ್ರತಿಜ್ಞಾ ವಿಧಿ ಸ್ವೀಕರಿಸುವ ಮೂಲಕ ‘ಜಾಗೃತ ಕರ್ನಾಟಕ’ ರಾಜಕೀಯ ಸಂಘಟನೆಗೆ ಚಾಲನೆ ನೀಡಿದರು.
“ಭಾರತದ ಇಂದಿನ ರಾಜಕೀಯ ದುಃಸ್ಥಿತಿ ಅತೀವ ಆತಂಕಕ್ಕೆ ದೂಡಿದೆ. ಇದೇ ರೀತಿ ರಾಜಕೀಯ ಕೆಟ್ಟ ಪರಿಸ್ಥಿತಿಯಲ್ಲಿ ಸಾಗಿದರೆ ಹಸಿವು, ಅಸಮಾನತೆ ಮತ್ತು ಶೋಷಣೆಯಿಂದ ಬಿಡುಗಡೆ ಸಾಧ್ಯವೇ ಇಲ್ಲ. ಸುಳ್ಳು, ಅಸಹನೆ, ದ್ವೇಷಗಳಿಂದ ದೇಶ ಕಟ್ಟಲು ಸಾಧ್ಯವಿಲ್ಲ. ರಾಜಕೀಯ ಪರಿಸ್ಥಿತಿ ಸುಧಾರಿಸಲು ಸಾಧ್ಯವಿಲ್ಲ. ಅಲ್ಲದೆ, ಜನರ ಪರಿಸ್ಥಿತಿ ಉನ್ನತ ಮಟ್ಟಕ್ಕೆ ತರಲು ಸಾಧ್ಯವೇ ಇಲ್ಲ. ಇದನ್ನೆಲ್ಲ ಮನಗಂಡು ರಾಜ್ಯದಲ್ಲಿ’ಜಾಗೃತ ಕರ್ನಾಟಕ’ವು ಇದೀಗ ರಾಜಕೀಯ ಸಂಘಟನೆಯಾಗಿ ರೂಪುಗೊಂಡಿದೆ.
ಮಾಜಿ ಪೊಲೀಸ್ ಅಧಿಕಾರಿ ಸುಹೇಲ್ ಅಹಮದ್ ಅವರ ನೇತೃತ್ವದಲ್ಲಿ ಸಂವಿಧಾನ ಪೀಠಿಕೆ ಓದಿದ ಕಾರ್ಯಕರ್ತರು “ರಾಜ್ಯದಲ್ಲಿ ಯುವಜನರನ್ನು ಒಳಗೊಂಡ ಪರ್ಯಾಯ ರಾಜಕಾರಣ, ಪ್ರಜಾಪ್ರಭುತ್ವ ಆಶಯದೊಂದಿಗೆ ಜನಪರವಾದ ಕೆಲಸ ಮಾಡುವ ಉದ್ದೇಶದಿಂದ ಜಾಗೃತ ಕರ್ನಾಟಕವನ್ನು ಇಂದು ರಾಜಕೀಯ ಸಂಘಟನೆಯಾಗಿ ಚಾಲನೆ ನೀಡಿದ್ದೇವೆ.

ರಾಜ್ಯದಲ್ಲಿ ಸಕ್ರಿಯವಾದ ರಾಜಕಾರಣ, ಯುವಜನರ ಒಳಗೊಳ್ಳುವಿಕೆ, ಸರ್ಕಾರಗಳ ಅನೀತಿಗಳ ವಿರುದ್ಧ ಹೋರಾಟದ ಮೂಲಕ ಜಾಗೃತಿ ಮೂಡಿಸುತ್ತ ಪರ್ಯಾಯ ರಾಜಕೀಯ ಶಕ್ತಿಯಾಗಿ ಮುಂದಿನ ದಿನಗಳಲ್ಲಿ ರೂಪಿಸಲಿದ್ದೇವೆ” ಎಂದರು.
ಇಂದು ಮೈಸೂರಿನಲ್ಲಿ ಚಾಲನೆ ನೀಡಿದ್ದೇವೆ ಇಡೀ ರಾಜ್ಯಾದ್ಯಂತ ಸದೃಢವಾದ ಕಾರ್ಯಕರ್ತರ ಪಡೆಯನ್ನು ರೂಪಿಸಿ, ರಾಜ್ಯದಲ್ಲಿ ಹೊಸದೊಂದು ರಾಜಕಾರಣಕ್ಕೆ ಭಾಷ್ಯ ಬರೆಯಲಿದ್ದೇವೆ ಎನ್ನುವ ಆಶಯ ನುಡಿಗಳನ್ನಾಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಡಾ ಬಾಬು ಜಗಜೀವನ ರಾಂ,ಡಾ ರಾಜ್ ಕುಮಾರ್ ಪ್ರತಿಮೆಗಳಿಗೆ ಮೇಲ್ಛಾವಣಿ ನಿರ್ಮಾಣ ಮಾಡುವಂತೆ ಆಗ್ರಹ
ಸುಬ್ರಹ್ಮಣ್ಯ, ಜಗದೀಶ್ ನಗರಕೆರೆ, ಚೇತನ್ ಕಾಗೆಪುರ, ಮಹೇಶ್ ಗೊರವನಹಳ್ಳಿ, ಮೋಹನ್ ಜಿ ಕೆ, ಮಂಡ್ಯ ನಾಗೇಶ್, ಸಂತೋಷ್, ಪೃಥ್ವಿರಾಜ್ ಬೊಪ್ಪ ಸಮುದ್ರ, ಕಿರಣ ಕನಕಪುರ, ರಾಘುರಾಮ್ ಬೆಂಗಳೂರು, ಜಗದೀಶ್ ನುಡಿ ಕರ್ನಾಟಕ, ಮಂಜುನಾಥ್ ಮಂಡ್ಯ, ಮಂಜುನಾಥ್ ಮಳವಳ್ಳಿ, ನವೀನ ಮಂಡ್ಯ, ಅಮೀರ್ ಅಮ್ಜ, ಸ್ವಾಮಿ ಹೊಂಗನೂರು, ಮಹದೇವ್ ಪ್ರಸಾದ್ ಹೊಂಗನೂರು, ಮಧು ಬಳ್ಳೂರು, ಕೃಷ್ಣಮೂರ್ತಿ ಚಂಗಚಹಳ್ಳಿ, ಹರೀಶ್ ಕುಮಾರ್ ಮೈಸೂರು, ಅಬ್ದುಲ್ಲ ಹಪೀಚ್, ದಿನೇಶ್ ರಾಮ ನಾಯಕ, ಈದಿನ.ಕಾಮ್ ವರದಿಗಾರ ಮೋಹನ್ ಮೈಸೂರು ಇದ್ದರು.


ನಿಮಗೆ ಮಂಗಳೂರಿನಲ್ಸಿ ಒಳ್ಳೆಯ ಅವಕಾಶ ಇದೆ. ಸಿದ್ರಾಮಣ್ಣನ ಪರಿವಾರ ವಾದಿ ನೀತಿಯ ಬಗ್ಗ್ರೆ ಕ ಪಕ್ಷದ ಬಗ್ಗ್ರೆ ಕಾಂಗ್ಸ್ರೆಸ್ ಕಾರ್ಯಕರ್ತರು ಅಸಮಾಧಾನ ಹೊಂದಿದ್ದಾರೆ.