ಮೈಸೂರು | ಪಿರಿಯಾಪಟ್ಟಣ ದಲಿತರಿಗೆ ಅನ್ಯಾಯ: 876ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ

Date:

Advertisements

ದಲಿತರಿಗೆ ಅನ್ಯಾಯವಾಗಿದ್ದು, ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ 876 ದಿನಗಳಿಂದ ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ತಾಲೂಕು ಕಚೇರಿ ಮುಂದೆ ದಸಂಸ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದರೂ ಕೂಡ ಮೈಸೂರು ಜಿಲ್ಲಾಡಳಿತ, ತಾಲೂಕು ಆಡಳಿತ, ಸರ್ಕಾರದಿಂದ ಯಾವುದೇ ಸ್ಪಂದನೆ ದೊರೆತಿಲ್ಲ.

ದೊಡ್ಡಹೊಸೂರು ಗ್ರಾಮದ ದಲಿತ ಮಹಿಳೆ ಚನ್ನಮ್ಮರ ಭೂ ಸಮಸ್ಯೆ, ಮುಮ್ಮಡಿ ಕಾವಲು ಗ್ರಾಮದ ಸರ್ವೆ ನಂ 1 ರ ಪಕ್ಕಾ ಪೋಡು ದುರಸ್ತಿ, ಕದರೇಗೌಡನ ಕೊಪ್ಪಲು ಗ್ರಾಮ ಠಾಣಾ ಒತ್ತುವರಿ, ಚನ್ನಕಲ್ ಕಾವಲು ಭೂ ಸಮಸ್ಯೆ, ಕೊಪ್ಪ ಗರಸಿಯಾ ಕಾಲೊನಿ ಸಮಸ್ಯೆ, ಕೊಣಸೂರು ಸರ್ವೆ ನಂ138ರ 3.20 ಎಕರೆ ಜಮೀನನ್ನು ಅತಿಕ್ರಮವಾಗಿ ಮಾಡಿರುವ ಒತ್ತುವರಿ ತೆರವು, ಸರ್ವೆ ನಂ 61 ರ ಇನಾಂ ಜಮೀನಿಗೆ ಸಾಗುವಳಿ ನೀಡುವಂತೆ, ಸರ್ವೆ ನಂ 93 ರಲ್ಲಿ ಅನುಭವದಲ್ಲಿರುವ ರೈತರಿಗೆ ಖಾತೆ ಮಾಡಿ ಕೊಡುವಂತೆ ಆಗ್ರಹಿಸಿ ಧರಣಿ ನಡೆಸುತ್ತಿದ್ದು,ಆದರೆ ಈವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ.

ಬೆಣಗಾಲು ಗ್ರಾಮದ ಸರ್ವೆ ನಂ 42 ರ ಬಿಡಿಎ ಜಾಗವನ್ನು ಇ ಕಂ ಕಾಫಿಕ್ಯೂರಿಂಗ್ ಮಾಲೀಕರು ಮಾಡಿರುವ ಒತ್ತುವರಿ, ಕೆಲವು ಗ್ರಾಮಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ನಡೆಸಿರುವ ಅವ್ಯವಹಾರಗಳ ಬಗ್ಗೆ, ಸೂಳೆಕೋಟೆ ಗ್ರಾಮದ ಸರ್ವೆ ನಂ 10 ರ ಮೂಲ ವಾರಸುದಾರರ ಭೂ ದಾಖಲೆಗಳ ತಿರುಚಿರುವ ಬಗ್ಗೆ, ದಲಿತ ದಸಂಸ ಪ್ರತಿಭಟನೆ ನಡೆಸಲು ಸೂಕ್ತ ಸ್ಥಳ ಗುರುತಿಸಿಕೊಡುವಂತೆ ಒತ್ತಾಯಿಸಿ ದಸಂಸ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದೆ.

Advertisements

ಆದರೆ ತಹಶೀಲ್ದಾರ್ ನಿಸರ್ಗ ಪ್ರಿಯ, “ಮನವಿಯನ್ನು ಪರಿಶೀಲಿಸಲಾಗಿದೆ. ಧರಣಿ ಕುಳಿತುಕೊಳ್ಳಲು ತಾಲೂಕು ಕಚೇರಿಯಿಂದ ಯಾವುದೇ ಅನುಮತಿ ನೀಡಲು ಅವಕಾಶ ಇರುವುದಿಲ್ಲ. ಈ ಬಗ್ಗೆ ಪಿರಿಯಾಪಟ್ಟಣ ಪೊಲೀಸ್ ನಿರೀಕ್ಷಕರಲ್ಲಿ ಮನವಿ ಸಲ್ಲಿಸಬಹುದು” ಎಂದು ದಸಂಸ ಮನವಿಗೆ ಹಿಂಬರಹ ನೀಡಿರುತ್ತಾರೆ.

WhatsApp Image 2024 10 05 at 4.50.17 PM 1

ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ಹಿರಿಯ ಮುಖಂಡ ಜಗದೀಶ್, “ಬಾಬಾ ಸಾಹೇಬರ ಸಂವಿಧಾನದಡಿ ತಾಲೂಕು ಕಛೇರಿ ಮುಂದೆ ಪ್ರತಿಭಟನೆ ಮಾಡಲು ಅವಕಾಶವಿಲ್ಲ ಎಂದು ಅವಮಾನಿಸಿದ್ದಾರೆ. ಹೋರಾಟದ ಹಕ್ಕನ್ನು ಕಸಿದುಕೊಳ್ಳುವ ಕುತಂತ್ರ ಅಧಿಕಾರಿಗಳದ್ದು. ಇದಕ್ಕೆಲ್ಲ ಬಗ್ಗಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನು ಓದಿದ್ದೀರಾ? ರಾಮನಗರ | ರೈಲ್ವೆ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಆದ್ಯತೆ: ಪ್ರಗತಿಪರ ಸಂಘಟನೆಗಳಿಂದ ಸ್ವಾಗತ

ಮುಮ್ಮಡಿ ಕಾವಲ್ ದೊಡ್ಡಯ್ಯ ಮಾತನಾಡಿ, “ಹೋರಾಟಗಾರರ ಚಾಪೆ, ಬಾಬಾ ಸಾಹೇಬರ ಫೋಟೋ, ಬ್ಯಾನರ್ ಕಸಿದುಕೊಂಡು ಹೋರಾಟ ಹತ್ತಿಕ್ಕಲು ಹೊರಟವರು, ಈಗ ಸ್ಥಳವಿಲ್ಲ ಅಹೋರಾತ್ರಿ ಧರಣಿಗೆ ಪೊಲೀಸ್ ಇಲಾಖೆಯನ್ನು ನಿವೇದಿಸಿಕೊಳ್ಳಿ ಎಂದಿದ್ದಾರೆ. ಅದರ ಅನುಸಾರ ಪೊಲೀಸ್ ನಿರೀಕ್ಷಕರಿಗೂ ಮನವಿ ಮಾಡಿದ್ದು, ಭದ್ರತೆ ನೀಡುವುದಾಗಿ ತಿಳಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ, ಯಾರ ಒತ್ತಡಕ್ಕೂ, ಅಧಿಕಾರಿಗಳ ಕುತಂತ್ರಕ್ಕೆ ಮಣಿಯದೆ ನಮ್ಮ ಹೋರಾಟ ಮುಂದುವರಿಯುತ್ತದೆ. ತಹಶೀಲ್ದಾರ್ ಅವರ ನಿಲುವನ್ನು ಪ್ರಶ್ನಿಸಿ ಮುಂದಿನ ಹೋರಾಟ ನಡೆಸಲಾಗುವುದು” ಎಂದು ತಿಳಿಸಿದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X