ಉಡುಪಿ | ದೈವ – ದೇವರ ದುರ್ಬಳಕೆ ಮೂಲ್ಕಿಯ ಬಪ್ಪನಾಡು ರಥ ಬೀಳಲು ಕಾರಣ : ಕೋಟ ನಾಗೇಂದ್ರ ಪುತ್ರನ್

Date:

Advertisements

ಮೂಲ್ಕಿಯ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಅಂಗವಾಗಿ ಬ್ರಹ್ಮರಥೋತ್ಸವ ವೇಳೆ ದೇವರ ತೇರಿನ ಮೇಲ್ಭಾಗ ಮುರಿದು ಬಿದ್ದಿದ್ದು, ದೈವ ದೇವರನ್ನು ದುರ್ಬಳಕೆ ಮಾಡಿಕೊಂಡಿರುದರಿಂದ ಇಂತಹ ಘಟನೆ ನಡೆಯಲು ಕಾರಣ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಧರ್ಮ – ಧರ್ಮ ಜೋಡಣೆ ಮಾಡಬೇಕು ಎಂದು ದುರ್ಗಾ ಪರಮೇಶ್ವರಿ ದೇವಿ ಬಪ್ಪ ಬ್ಯಾರಿಗೆ ಆಜ್ಞೆ ಮಾಡಿದೆ, ಆ ಪ್ರಕಾರ ಪುರಾತನ ಕಾಲದಿಂದ ಹಾಗೆ ನಡೆದು ಕೊಂಡು ಬಂದಿದೆ, ಆದರೆ ಈ ಬಿಜೆಪಿ ಯವರ ನಕಲಿ ಹಿಂದುತ್ವದಿಂದ ದೇವರೇ ಮುನಿಸಿ ಕೊಂಡು ಬಪ್ಪನಾಡು ರಥ ಧರೆಗೆ ಉರುಳಿದೆ.

ನಮ್ಮ ಹಿಂದಿನ ಹಿರಿಯರು ಹಾಕಿ ಕೊಟ್ಟಿರುವ ಚೌಕಟ್ಟುವಿನಲ್ಲಿ ದೇವತಾ ಕಾರ್ಯಕ್ರಮ ಬಹಳಷ್ಟು ಅದ್ದೂರಿಯಾಗಿ ಮತ್ತು ಶಿಷ್ಟಾಚಾರವಾಗಿ ನಡೆಯುತ್ತಿತ್ತು, ಕರಾವಳಿಯಲ್ಲಿ ಧಾರ್ಮಿಕ ಭಾವನೆಗೆ ಬೆಂಕಿ ಇಟ್ಟ ಬಿಜೆಪಿ ಕೋಮುವಾದಿಗಳಿಂದ ದೇವರೇ ಮುನಿಸಿ ಕೊಂಡು ಇಂತಹ ಘಟನೆ ನಡೆದಿದೆ‌ ಎಂದು ಹೇಳಿದ್ದಾರೆ.

Advertisements

ಸರ್ವ ಧರ್ಮ ಒಂದೇ ಎಂದು ತಿಳಿದು ಶಾಂಭವಿ ನದಿಯ ದಡದಲ್ಲಿ ಹಿಂದೂ ದೇವಿಯ ಆಜ್ಞೆ ಅಂತೆ ಬಪ್ಪನಾಡು ಕ್ಷೇತ್ರ ಉದಯ ಆಗಿದೆ, ಪದೇ ಪದೇ ಬಿಜೆಪಿ ಅವರ ರಾಜಕೀಯ ದುರುದ್ದೇಶದಿಂದ ಹಿಂದೂ ದೇವರ ದುರುಪಯೋಗ ಆಗಿದೆ, ಇದೆ ರೀತಿ ಮುಂದುವರೆದಲ್ಲಿ ಕರಾವಳಿಯ ದೈವ ದೇವರುಗಳು ಮುನಿಸಿ ಕೊಳ್ಳಲಿದೆ, ಇವತ್ತು ರಥ ಧರೆಗೆ ಉರುಳಿದೆ, ಮುಂದೆ ಹಿಂದೂ ದೇವಸ್ಥಾನವೇ ಮಗುಚಿ ಸಾರ್ವಜನಿಕರ ತಲೆ ಮೇಲೆ ಬೀಳಲಿದೆ ಎಂದು ಹೇಳಿದ್ದಾರೆ.

ಕರಾವಳಿ ಜನತೆಯಲ್ಲಿ ವಿನಮ್ರ ವಿನಂತಿ. ರಾಜಕೀಯದಲ್ಲಿ ಪಕ್ಷ ಬೇರೆ ಬೇರೆ ಇರಬಹುದು, ದೇವರ ಹೆಸರಿನಲ್ಲಿ ರಾಜಕೀಯ ಮಾಡುವವರನ್ನು ನಂಬಬೇಡಿ, ದಕ್ಷಿಣ ಕನ್ನಡ ಕರಾವಳಿಗೆ ಅಭಿವೃದ್ಧಿ ಮುಖ್ಯ, ರಾಮ, ಆಂಜನೇಯ, ಮತ್ತು ಎಲ್ಲ ದೇವರುಗಳನ್ನು ಅತ್ಯಂತ ಶ್ರದ್ಧೆಯಿಂದ ಪೂಜೆ ಪುರಸ್ಕಾರ ಮಾಡಿಕೊಂಡು ಬಂದಿರುವ ನಮ್ಮ ಹಿಂದೂ ಧರ್ಮ, ನಮ್ಮ ಉಡುಪಿ ಮಂಗಳೂರು ಅವಳಿ ಜಿಲ್ಲೆ. ಇತಿಹಾಸವೆ ಸುಳ್ಳು ಬಿಜೆಪಿಯವರ ರಾಜಕೀಯ ದುರುದ್ದೇಶವೆ ಸತ್ಯ ಎಂದು ತಿಳಿದು ಕೊಂಡರೆ ಮುಂದಿನ ದಿನ ಇನ್ನು ಹೆಚ್ಚಿನ ಇಂತಹ ಘಟನೆಗೆ ದಾರಿ ಮಾಡಿಕೊಟ್ಟಂತೆ ಎಂದು ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X