ಉಡುಪಿ | ಕರಾವಳಿ ಇತಿಹಾಸದಲ್ಲಿ ಮೀನುಗಾರ ಮಹಿಳೆಯರು ಜೈಲು ಶಿಕ್ಷೆ ಅನುಭವಿಸಿದ್ದು ಇದೆ ಮೊದಲು

Date:

Advertisements

ಪೇಪರ್ ಹರಿಯೋದು, ಪೇಪರ್ ಕಳ್ಳತನ ಮಾಡೋದು, ಸಂತ್ರಸ್ತರು ಕೊಟ್ಟ ಹೇಳಿಕೆಯನ್ನು ಯಾವುದೊ ಭ್ರಷ್ಟಾಚಾರ ಕೇಸಲ್ಲಿ ಅಮಾನತ್ತು ಆದವನಿಂದ ಪೇಪರ್ ನಲ್ಲಿ ಹೇಳಿಕೆಯನ್ನು ತಿರಿಚೋದು ಇವೆಲ್ಲವನ್ನೂ ಉಡುಪಿ ಶಾಸಕರಿಂದ ಕಲಿಬೇಕು, ಉಡುಪಿ ಶಾಸಕರಿಗೆ ಅದು ವಿಧಾನಸಭಯನ್ನು ಕುಸ್ತಿ ಅಖಾಡ ಎಂದು ಭಾವಿಸಿದ ಹಾಗೆ ಇದೆ, ಆರು ತಿಂಗಳು ಶಾಸಕ ಸ್ಥಾನ ಅಮಾನತ್ತು ಆಗಿದ್ದು ಉಡುಪಿ ಜಿಲ್ಲೆಯ ಇತಿಹಾಸ ದಲ್ಲಿ ಪ್ರಥಮ, ಕಳೆದ ಎರಡು ವರ್ಷ ದಿಂದ ಉಡುಪಿ ಕ್ಷೇತ್ರದ ಅಭಿವೃದ್ಧಿ ಶೂನ್ಯ, ಇನ್ನು ಆರು ತಿಂಗಳು ಶಾಸಕರಿಗೆ ಪುರುಸೊತ್ತು ಇದ್ದು ಕೋಳಿ ಪಡಿಯಲ್ಲಿ ಸಮಯ ಕಳೆಯಲಿ, ನಿಮ್ಮಂತ ಶಾಸಕ ರನ್ನು ಪಡೆದ ಉಡುಪಿ ಕ್ಷೇತ್ರದ ಜನತೆಯ ಪುಣ್ಯ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಉಡುಪಿ ಶಾಸಕ ಯಶ್ಫಾಲ್ ಸುವರ್ಣ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕರಾವಳಿ ಇತಿಹಾಸದಲ್ಲಿ ಮೀನುಗಾರ ಮಹಿಳೆಯರು ಜೈಲು ಶಿಕ್ಷೆ ಅನುಭವಿಸಿದ್ದು ಇದೆ ಮೊದಲು, ಇದು ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರ ಆಡಳಿತ ವೈಫಲ್ಯತೆಗೆ ಹಿಡಿದ ಕನ್ನಡಿ, ಮುಂದಿನ ದಿನಗಳಲ್ಲಿ ಉಡುಪಿ ಜನತೆ ಏನೇನು ನೋಡಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯದ ವಿಧಾನಸಭಾ ಪೀಠದ ಮೇಲೆ ಹತ್ತಿ ರಾಜ್ಯದ ಘನವೆತ್ತ ಪೀಠದ ಗೌರವ ಹಾಳು ಮಾಡಲು ಹೊರಟಿರುವ ಶಾಸಕರನ್ನ ಆರು ತಿಂಗಳು ಅಲ್ಲ, ಅವರ ಮೇಲೆ ಕಾನೂನಿನ ಅಡಿಯಲ್ಲಿ ಬಂಧಿಸಿ ಜೈಲಿಗೆ ಹಾಕಬೇಕು. ಈ ಉಡುಪಿ ಶಾಸಕರು ಅಭಿವೃದ್ಧಿ ಮಾತನಾಡಲು ವಿಧಾನಸಭೆಗೆ ಬರುವುದಲ್ಲ, ಬದಲಾಗಿ ಉಡುಪಿಯ ಮರ್ಯಾದೆ ತೆಗೆಯಲು ವಿಧಾನಸಭಗೆ ಹೋಗೋದು ಎಂದು ಹೇಳಿದ್ದಾರೆ.

Advertisements
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X