ಪುಂಜಾಲಕಟ್ಟೆ | ‘ವಿಧವೆಗೊಂದು ಆಸರೆ’ ತಂಡದಿಂದ ಬಡ ಕುಟುಂಬಗಳಿಗೆ ರೇಷನ್ ಕಿಟ್ ವಿತರಣೆ

Date:

Advertisements

ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ, ಮೂಡಬಿದ್ರೆ, ಬಂಟ್ವಾಳ, ವೇಣೂರು, ಕಾರ್ಕಳ ಪ್ರದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಯುವಕರೇ ಕಟ್ಟಿಕೊಂಡ ‘ವಿಧವೆಗೊಂದು ಆಸರೆ’ ತಂಡದಿಂದ ಬಡ ಕುಟುಂಬಗಳಿಗೆ ರೇಷನ್ ಕಿಟ್ ವಿತರಣೆ ಮಾಡಲಾಯಿತು.

ಈ ಬಾರಿ ವಿಧವೆಗೊಂದು ಆಸರೆ ಇದರ ಎರಡನೇ ವಾರ್ಷಿಕ ಹಾಗೂ ರಮಝಾನ್ ತಿಂಗಳ ಪ್ರಯುಕ್ತ ಗ್ರಾಮಾಂತರ ಪ್ರೇಶಗಳಲ್ಲಿ ವಾಸಿಸುತ್ತಿರುವ ವಿಧವೆ, ಅನಾಥ ಹಾಗೂ ಬಡ ಕುಟುಂಬಗಳಿಗೆ ಸುಮಾರು 123 ಕುಟುಂಬಗಳಿಗೆ ರೇಷನ್ ಕಿಟ್ ವಿತರಿಸಲಾಯಿತು.

WhatsApp Image 2025 03 13 at 7.19.56 AM

“ಇಸ್ಲಾಮಿನಲ್ಲಿ ಕಲ್ಪಿಸಿದ ಅತ್ಯಂತ ಶ್ರೇಷ್ಠವಾದ ದಾನ ಅನ್ನದಾನ. ಯಾರ ಸಹಾಯ ಇಲ್ಲದೆ ತನ್ನ ಅನಾಥ ಮಕ್ಕಳನ್ನು ಸಾಕಲು ಕಷ್ಟಪಡುವ ಕುಟುಂಬಿಕರಿಗೆ ಹಾಗೂ ಪುರುಷರಿಲ್ಲದ ಬಡಕುಟುಂಬಗಳಿಗೆ ರೇಷನ್ ನೀಡುತ್ತಿದ್ದೇವೆ. ಜನರು ತಮ್ಮ ಕೈಲಾದಷ್ಟು ನೆರವು ನೀಡುತ್ತಿದ್ದು, ನಾವು ಅದನ್ನು ಅರ್ಹ ಕುಟುಂಬಗಳಿಗೆ ತಲುಪಿಸುತ್ತಿದ್ದೇವೆ” ಎಂದು ‘ವಿಧವೆಗೊಂದು ಆಸರೆ’ ತಂಡದ ಸದಸ್ಯ ಅಶ್ರಫ್ ವೇಣೂರು ತಿಳಿಸಿದ್ದಾರೆ.

Advertisements
WhatsApp Image 2025 03 13 at 12.36.42 PM

“ಸೋಷಿಯಲ್ ಮೀಡಿಯಾ ದುರ್ಬಳಕೆಯಾಗುತ್ತಿದೆ. ಅದರ ಮಧ್ಯೆಯೂ ಒಳ್ಳೆಯ ಕೆಲಸ ಮಾಡಬಹುದು ಎಂದು ನಮ್ಮ ತಂಡದ ಸದಸ್ಯರು ತೋರಿಸಿಕೊಟ್ಟಿದ್ದಾರೆ. 8 ಮಂದಿ ಅಡ್ಮಿನ್‌ಗಳನ್ನು ಹೊಂದಿರುವ ವಿಧವೆಗೊಂದು ಆಸರೆ ಗ್ರೂಪ್ ಮೂಲಕ ಪ್ರತಿ ತಿಂಗಳು ರೇಷನ್ ಕಿಟ್ ಸಂಗ್ರಹ ಮಾಡುತ್ತಿದ್ದೇವೆ. ನಮ್ಮ ಸಹಾಯವನ್ನು ಎದುರು ನೋಡುತ್ತ ಹಲವು ಕುಟುಂಬಗಳಿವೆ. ಅವರಿಗೂ ನೆರವು ನೀಡಲು ಇಚ್ಛಿಸುವವರು(9632035506) ನಮ್ಮ ಜೊತೆಗೆ ಕೈಜೋಡಿಸಬಹುದು” ಎಂದು ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಹಮೀದ್ ಪುಂಜಾಲಕಟ್ಟೆ, ಅಶ್ರಫ್ ವೇಣೂರು, ಸಾಜಿ ಪುಂಜಾಲಕಟ್ಟೆ, ಆಸಿಫ್ ಪುಂಜಾಲಕಟ್ಟೆ, ಹನೀಫ್ ಮೂರ್ಜೆ, ಅಬ್ದುಲ್ ಸಲಾಂ ಪುಂಜಾಲಕಟ್ಟೆ, ಬಶೀರ್ ಕೆ.ಬಿ.ವೇಣೂರು, ಅಶ್ರಫ್ ಪುಂಜಾಲಕಟ್ಟೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X