ರಾಯಚೂರು | ಎಚ್. ಕಾಂತರಾಜ್ ಆಯೋಗದ ವರದಿ ಜಾರಿಗೆ ಹಿಂದುಳಿದ ಜಾತಿಗಳ ಒಕ್ಕೂಟದ ಆಗ್ರಹ

Date:

Advertisements

ಹಿಂದುಳಿದ ವರ್ಗಗಳ ಗಣತಿ ನಡೆಸಿ ಸಲ್ಲಿಸಲಾಗಿರುವ ಎಚ್ ಕಾಂತರಾಜ್ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕು. ಏನೇ ವಿರೋಧಗಳಿದ್ದರೂ ವರದಿ ಮಂಡನೆ ನಂತರ ಪರಿಶೀಲಸಬೇಕೆಂದು ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ ಆಗ್ರಹಿಸಿದ್ದಾರೆ.

ಮಾದ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 168ಕೋಟಿ ರೂ. ಖರ್ಚು ಮಾಡಿ ಸಿದ್ಧಪಡಿಸಲಾಗಿರುವ ವರದಿಯನ್ನು ಸರ್ಕಾರ ಅಂಗೀಕಾರಗೊಳಿಸುವ ಮುನ್ನವೇ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ವರದಿಯ ಜಾತಿವಾರು ಅಂಕಿ ಅಂಶಗಳೇ ಬಹಿರಂಗಗೊಂಡಿಲ್ಲ. ಆಯೋಗದ ಕಾರ್ಯದರ್ಶಿ ಸಹಿಯಿಲ್ಲ. ವರದಿಯೇ ಇಲ್ಲ ಎಂದು ಆರೋಪಿಸಲಾಗುತ್ತಿದೆ.

ಆದರೆ, ಶಾಶ್ವತ ಹಿಂದುಳಿದ ಆಯೋಗದ ಆಧ್ಯಕ್ಷರಾದ ಜಯಪ್ರಕಾಶ ಹೆಗ್ಡೆಯವರು ಪೂರ್ಣ ವರದಿ ನೀಡಲು ಸಿದ್ದತೆಯಲ್ಲಿದ್ದಾರೆ. ಆದರೆ, ಬಲಾಡ್ಯ ಸಮುದಾಯಗಳು ವಿರೋಧ ವ್ಯಕ್ತಪಡಿಸುತ್ತಿವೆ. ವಿರೋಧ ಏನಿದ್ದರೂ ಮೊದಲು ಆಯೋಗ ವರದಿ ಮಂಡಿಸಿ ಬಹಿರಂಗಪಡಿಸಬೇಕೆಂದರು.

Advertisements

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಂದು ಲಕ್ಷ 13ಸಾವಿರ ನೌಕರರು ನಡೆಸಿರುವ ಸಮೀಕ್ಷಾ ವರದಿಯನ್ನು ಯಾರದೋ ಒತ್ತಡಕ್ಕೆ ಮಣಿಯದೇ ಹಿಂದುಳಿದ, ಅಲ್ಪಸಂಖ್ಯಾತರ, ದಲಿತರು ಸೇರಿದಂತೆ ಸಮುದಾಯ ನಿಖರ ಅಂಕಿ-ಅಂಶಗಳನ್ನು ಪಡೆಯಲು ಆಯೋಗ ವರದಿ ಮಂಡಿಸಬೇಕು ಎಂದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವುಕುಮಾರ ಸೇರಿದಂತೆ ಅನೇಕ ಸಚಿವರುಗಳು, ಶಾಸಕರುಗಳು ವಿರೋಧಿಸುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯಸಭೆಯಲ್ಲಿಯೇ ಹೇಳಿರುವದು ಸ್ವಾಗತಾರ್ಹವಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಪ್ರವರ್ಗ 1 ಮತ್ತು 2ಎನಲ್ಲಿ ಬರುವ ಹಿಂದುಳಿದ ಜಾತಿಗಳಿಗೆ ಸರ್ಕಾರ ಕಾಮಗಾರಿಗಳಲ್ಲಿ ಒಂದು ಕೋಟಿ ರೂ. ಕಾಮಗಾರಿ ಶೇ.19 ಮೀಸಲಾತಿ ನೀಡಲು ನಿರ್ಧರಿಸಿರುವುದನ್ನು ಅವರು ಸ್ವಾಗತಿಸಿದರು.

ಈ ಕುರಿತು ಬೆಂಗಳೂರಿಗೆ ನಿಯೋಗ ತೆರಳಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ. ಹಿಂದುಳಿದ ವರ್ಗಗಳ ಅನೇಕ ನಿಗಮಗಳನ್ನು ಸರ್ಕಾರ ಘೋಷಣೆ ಮಾಡಿದೆ. ಆದರೆ, ಯಾವುದೇ ಅನುದಾನ ನಿಡಿಲ್ಲ. ಬಲಿಷ್ಠ ಸಮುದಾಯಗಳಿಗೆ 500ಕೋಟಿ ಅನುದಾನ ನೀಡಲಾಗಿತ್ತು. ಜನಸಂಖ್ಯೆಯಲ್ಲಿ ಅತಿ ಹೆಚ್ಚು ಇರುವ ಹಿಂದುಳಿದ ಸಮೂದಾಯಗಳ ನಿಗಮಕ್ಕೆ 120ಕೋಟಿ ರೂ. ಅನುದಾನ ನೀಡಲು ಮನವಿ ಸಲ್ಲಿಸುತ್ತೇವೆ ಎಂದರು.

ವಕೀಲ ಶ್ರೀಕಾಂತ ಮಾತನಾಡಿ 2015ರಿಂದ 2018ರವರೆಗೆ ನಡೆದಿರುವ ಕಾಂತರಾಜ ಆಯೋಗ ಜಾರಿಗೆ ಬಲಿಷ್ಠ ಸಮುದಾಯಗಳು ವಿರೋಧ ವ್ಯಕ್ತಪಡಿಸುತ್ತಿರುವದು ಕಳವಳಕಾರಿಯಾಗಿದೆ. ಆಯೋಗ ವರದಿಯಲ್ಲಿ ಏನಿದೆ ಎಂದು ಗೋತ್ತಿಲ್ಲ. ಮಂಡನೆಗೆ ಸುಖಾಸುಮ್ಮನೆ ವಿರೋಧಿಸಲಾಗುತ್ತದೆ. ಆಯೋಗ ವರದಿಯಿಂದ ಅನೇಕ ಸಮುದಾಯಗಳ ಮಾಹಿತಿ ದೊರೆಯಲಿದೆ. ಜನಗಣತಿಯೂ ನಡೆಯದೇ ಇರುವಾಗ ಜಾತಿಗಣತಿಯಿಂದ ದೊರೆಯುವ ಮಾಹಿತಿ ಆಧಾರಿಸಿ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗುತ್ತದೆ. ವಿರೋಧಿಸುವವರು ವರದಿ ಮಂಡನೆಗೆ ಅವಕಾಶ ನೀಡಬೇಕೆಂದರು.

ಈ ಸಂದರ್ಭದಲ್ಲಿ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಹನುಮಂತಪ್ಪ, ಜಂಬಣ್ಣ ಯಕ್ಲಾಸಪುರು, ಭಾಸ್ಕರ ಇಟಗಿ, ಬಿ.ಬಸವರಾಜ, ಆಂಜಿನೇಯ್ಯ ಸೇರಿ ಅನೇಕರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಬಸವಾದಿ ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಎಸ್. ವಿ. ಸಂಕನೂರು

"12ಣೆ ಶತಮಾನದಲ್ಲಿ ಶರಣೆಯರು ಮಹಿಳೆಯರಿಗೆ ಸ್ವತಂತ್ರವಾಗಿ ಬದುಕಬೇಕು ಎಂಬ ಆಶಯವನ್ನು ಹೊಂದಿದ್ದರು....

ಶ್ರೀರಂಗಪಟ್ಟಣ | ಪರಿಸರಸ್ನೇಹಿ ಗಣಪನ ಪ್ರತಿಷ್ಠಾಪನೆಗಾಗಿ ಜಾಗೃತಿ ಜಾಥಾ

ಗೌರಿ ಗಣೇಶನ ಹಬ್ಬದ ಪ್ರಯುಕ್ತ ರೋಟರಿ ಶ್ರೀರಂಗಪಟ್ಟಣ ಹಾಗೂ ಅಚೀವರ್ಸ್ ಅಕಾಡೆಮಿ...

ಬೆಂಗಳೂರು | ನವರಂಗ ಸರ್ಕಲ್‌ನಲ್ಲಿ ಸಂಚಾರ ದಟ್ಟಣೆ: ಹೈರಾಣಾದ ವಾಹನ ಸವಾರರು, ಪ್ರಯಾಣಿಕರು

ಬೆಂಗಳೂರು ನಗರದ ನವರಂಗ ಸರ್ಕಲ್‌ನಲ್ಲಿ ಬೆಳಿಗ್ಗೆ 11ರಿಂದಲೂ ವಾಹನ ಸಂಚಾರ ದಟ್ಟಣೆ...

ಡಿ ಕೆ ಶಿವಕುಮಾರ್ ಬಳಿಕ ಕಾಂಗ್ರೆಸ್ ಶಾಸಕ ರಂಗನಾಥ್‌ರಿಂದ ಆರ್‌ಎಸ್‌ಎಸ್ ಗೀತೆ ಗುಣಗಾನ!

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬಳಿಕ ಇದೀಗ ಕಾಂಗ್ರೆಸ್ ಶಾಸಕ...

Download Eedina App Android / iOS

X