ಬೈಕ್ಗೆ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡಿದಿದ್ದು ಇಬ್ಬರ ಕಾಲು ಮುರಿದ ಘಟನೆ ರಾಯಚೂರು ನಗರದ ಹೊರವಲಯದ ಬೈಪಾಸ್ನಲ್ಲಿ ಘಟನೆ ಜರುಗಿದೆ.
ಬೈಕ್ ಸವಾರ ಸಿದ್ದರಾಮಪ್ಪ ಗೌಡ ಮತ್ತು ಮಗಳು ಇಬ್ಬರು ಗಂಭೀರ ಗಾಯಗೊಂಡಿದ್ದು, ಪತ್ನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಇವರು ರಾಯಚೂರು ತಾಲೂಕಿನ ಮನ್ಸಲಾಪುರ ಗ್ರಾಮದವರು ಎನ್ನಲಾಗಿದೆ.
ಲಾರಿ ಚಾಲಕ ಬೈಕ್ಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಆಗಿಯೇ ಹೋಗಿದ್ದಾನೆ. ಬೆಳಗ್ಗೆ ಮನ್ಸಲಾಪೂರ ಗ್ರಾಮದಿಂದ ದೇವಸೂಗುರು ಸೂಗುರೇಶ್ವರ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯ ಬೈಪಾಸ್ನಲ್ಲಿ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಬೈಕ್ಗೆ ಡಿಕ್ಕಿ ಹೊಡೆದಿದೆ.
ಇದನ್ನು ಓದಿದ್ದೀರಾ? ರಾಯಚೂರು | ಆರ್ಡಿಸಿಸಿ ಬ್ಯಾಂಕ್ನಲ್ಲಿ ಹಗಲು ದರೋಡೆ; ಖಾತೆಗಳ ದುರ್ಬಳಕೆ ಆರೋಪ
ಪರಿಣಾಮ ಇಬ್ಬರಿಗೆ ಕಾಲು ಮುರಿದು ಹೋಗಿದ್ದು, ಮತ್ತೋರ್ವರಿಗೆ ಗಾಯಗಳಾಗಿವೆ. ಗ್ರಾಮೀಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
