ರಾಯಚೂರು | ಅಶೋಕನ ನಾಡು ಮಸ್ಕಿ ತಾಲೂಕಿಗೆ ಉಪ ನೋಂದಣಿ ಕಚೇರಿಯೇ ಇಲ್ಲ!

Date:

Advertisements

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕು ಕೇಂದ್ರವಾಗಿ 7 ವರ್ಷ ಕಳೆದರೂ ಉಪ ನೋಂದಣಿ ಕಚೇರಿ ಇಲ್ಲದೆ ಸಾರ್ವಜನಿಕರು ಬೇರೆ ಬೇರೆ ರೀತಿಯ ಪ್ರಮಾಣ ಪತ್ರ ಮಾಡುವುದಕ್ಕೆ ಮೂರು ತಾಲೂಕಿಗೆ ತಿರುಗಾಡುವ ಸ್ಥಿತಿ ನಿರ್ಮಾಣವಾಗಿದೆ.

2018ರಲ್ಲಿ ಮಸ್ಕಿ ತಾಲೂಕು ಕೇಂದ್ರವೆಂದು ಘೋಷಣೆಯಾಗಿದೆ. ಮಸ್ಕಿ ನಗರದಲ್ಲಿ ತಹಶೀಲ್ದಾರ್ ಕಚೇರಿ, ನ್ಯಾಯಾಲಯ ಕಚೇರಿಗಳ ಕಟ್ಟಡಗಳು ನಿರ್ಮಾಣವಾಗಿವೆ. ಆದರೆ ಸುಮಾರು 7 ವರ್ಷ ಕಳೆದರೂ ಮಸ್ಕಿಯಲ್ಲಿ ಉಪ ನೋಂದಣಿ ಕಚೇರಿ ತೆರೆದಿರುವುದಿಲ್ಲವೆಂದು ಜನ ಸಾಮಾನ್ಯರು ಚಿಂತೆಗೀಡಾಗಿದ್ದಾರೆ.

“ಮಸ್ಕಿ ತಾಲೂಕಿನಲ್ಲಿ 143 ಗ್ರಾಮಗಳು ಹಾಗೂ 20 ತಾಂಡಾಗಳು ಹಾಗೂ 6 ಹೋಬಳಿಗಳಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ತಾಲೂಕಿಗೆ ಅಲೆದಾಡುತ್ತಾರೆ. ಆದರೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕು ತೀರಾ ಹಿಂದುಳಿದ ಪ್ರದೇಶವಾಗಿದೆ. ಆದರೆ ಇಲ್ಲಿ ನೋಂದಣಿ ಕಚೇರಿಯಿಲ್ಲ. ಈ ಭಾಗದ ಜನರು ನೋಂದಣಿ ಕಾರ್ಯಗಳಿಗಾಗಿ ಅಕ್ಕಪಕ್ಕದ ತಾಲೂಕುಗಳಿಗೆ ಅಲೆದಾಡಬೇಕಿದೆ. ಇದರಿಂದ ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ” ಎಂದು ತಾಲೂಕಿನ ನಿವಾಸಿಗಳು ಅತಂತ್ರರಾಗಿದ್ದಾರೆ.

Advertisements
1000063880

ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಮಲ್ಲಿಕ್ ಮುರಾರಿ ಮಾತನಾಡಿ, “ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಸಿರಾವಾರ ಹಾಗೂ ಮಸ್ಕಿ ನೂತನ ತಾಲೂಕುಗಳಾಗಿ ಘೋಷಣೆ ಮಾಡಲಾಗಿತ್ತು. ಆದರೆ ಸಿರವಾರ ತಾಲೂಕಿನಲ್ಲಿ ಕಳೆದ ವರ್ಷ ಉಪ ನೋಂದಣಿ(ಸಬ್ ರಿಜಿಸ್ಟರ್) ಕಚೇರಿ ಪ್ರಾರಂಭಗೊಂಡಿದೆ. ಆದರೆ ಮಸ್ಕಿ ತಾಲೂಕಿನಲ್ಲಿ ಉಪ ನೋಂದಣಿ ಕಚೇರಿಯಾಗಿಲ್ಲ. ಇಲ್ಲಿನ ಜನರು ಬೇರೆ ಬೇರೆ ತಾಲೂಕಿಗೆ ಅಲೆದಾಡುವ ಪರಿಸ್ಥಿತಿಯಿದೆ. ನಮ್ಮ ತಾಲೂಕಿನ ಎಲ್ಲ ಜನರಿಗೆ ವಿವಾಹ, ಖರೀದಿ, ವಿಭಾಗ, ಮರಣ ಶಾಸನ ಇನ್ನು ಮುಂತಾದ ನೋಂದಣಿ ಕಾರ್ಯಕ್ಕೆ ಹಾಗೂ ತಾಲೂಕಿನ ಅಭಿವೃದ್ಧಿಗೆ ತಡೆಹಿಡಿದಂತಾಗಿದೆ” ಎಂದರು.

“ನೋಂದಣಿ ಕಚೇರಿ ಇಲ್ಲದಿರುವುದರಿಂದ ಮಾರಾಟ ವಹಿವಾಟುಗಳು ಕುಂಠಿತಗೊಂಡಿದ್ದು, ಜನರಿಗೆ ಮೂರು ತಾಲೂಕುಗಳಿಗೆ ಅಲೆದಾಡಿ ಸಾಕಾಗಿದೆ. ತಹಶೀಲ್ದಾರ್ ಕಚೇರಿ ಬಿಟ್ಟರೆ ಉಳಿದ ಕಚೇರಿಗಳಿಗೆ ಈ ಹಿಂದಿನ ತಾಲೂಕುಗಳಲ್ಲಿ ಇರುತ್ತವೆ. ಅಲ್ಲಿಗೆ ಹೋಗಿ ಅಲ್ಲಿಂದ ಇಲ್ಲಿಗೆ ಬರುವುದು ತುಂಬ ಹೈರಾಣದ ಕೆಲಸವಾಗಿರುತ್ತದೆ. ಮಸ್ಕಿ ವ್ಯಾಪ್ತಿಯಲ್ಲಿ ಬರುವ ಕೆಲವು ಗ್ರಾಮಗಳು ಸರ್ಕಾರಿ ಕಚೇರಿ ಕೆಲಸ ಕಾರ್ಯಗಳು ಚಟುವಟಿಕೆಗೆ ಹೋಗಬೇಕಾದರೆ ಮೂರು ತಾಲೂಕಿಗೆ ಸುತ್ತಬೇಕು. ಕೆಲವು ಗ್ರಾಮಗಳು ಮಾನ್ವಿ ತಾಲೂಕಿಗೆ ಸೇರ್ಪಡೆ, ಕೆಲವು ಲಿಂಗಸಗೂರು ತಾಲೂಕಿಗೆ ಹಾಗೂ ಇನ್ನೂ ಕೆಲವು ಸಿಂಧನೂರು ತಾಲೂಕಿಗೆ ಜನ ಸಾಮಾನ್ಯರು ತಿರುಗಾಡುತ್ತಿದ್ದಾರೆ” ಎಂದು ಹೇಳಿದರು.

“ಕೆಲವು ದಿನಗಳ ಹಿಂದೆಯು ಇದರ ಬಗ್ಗೆ ಶಾಸಕರಿಗೆ, ತಹಶೀಲ್ದಾರ್ ಅವರಿಗೆ ಸಲ್ಲಿಸಲಾಗಿದೆ. ಆದಷ್ಟು ಬೇಗೆನೆ ನಮ್ಮ ತಾಲೂಕಿಗೆ ನೋಂದಣಿ ಕಚೇರಿ ಪ್ರಾರಂಭಿಸಿ ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು” ಎಂದು ಹೇಳಿದರು.

1000062281
ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X