ರಾಯಚೂರು | ಮಾವಿನಕೆರೆ ಅಭಿವೃದ್ಧಿ ಸಭೆ; ಕೆರೆಗೆ ಜಾಗ ಬಿಟ್ಟುಕೊಡಲು ಒಪ್ಪದ ಮಾಲೀಕರು

Date:

Advertisements

ರಾಯಚೂರು ಮಾವಿನಕೆರೆ ಅಭಿವೃದ್ಧಿ ಕುರಿತು, ಕೆರೆಯ ಒಳಗೆ ಇರುವ ಜಮೀನು ಮಾಲೀಕರೊಂದಿಗೆ ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸಭೆ ನಡೆಸಲಾಯಿತು.

ಕೆರೆಗೆ ಒಳಪಡುವ ಖಾಸಗಿ ಜಮೀನುಗಳ ಮಾಲೀಕರು ಜಮೀನು ಬಿಟ್ಟು ಕೊಡದೇ ಇರುವುದರಿಂದ ಸಭೆ ಯಾವುದೇ ಫಲಪ್ರದವಾಗಲಿಲ್ಲ. ಮಾವಿನ ಕೆರೆ ಅಭಿವೃದ್ಧಿಗೆ ಸಹಕರಿಸುತ್ತೇವೆ. ಆದರೆ, ಜಮೀನು ಬಿಡಲು ಸಾಧ್ಯವಿಲ್ಲ ಎಂದು ಮಾಲೀಕರು ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಮಾವಿನಕೆರೆ ಅತ್ಯಂತ ಹಳೆದ ಕೆರೆಯಾಗಿದ್ದು, ಜನರು ಇಲ್ಲಿಗೆ ಬೆಳಗ್ಗೆ ಮತ್ತು ಸಂಜೆ ವಿಶ್ರಾಂತಿಗಾಗಿ ಆಗಮಿಸುತ್ತಾರೆ. ಮಾವಿನ ಕೆರೆ ಅಭಿವೃದ್ಧಿ ಪಡೆಸಲು ಸಿದ್ದತೆ ನಡೆಸಲಾಗುತ್ತಿದೆ, ಸುತ್ತಲೂ ಒತ್ತುವರಿಯಾಗುತ್ತಿದ್ದು, ಅದನ್ನು ತೆರವುಗೊಳಿಸುವುದರ ಜೊತೆಗೆ ಮಾವಿನ ಕೆರೆಯಲ್ಲಿ ಖಾಸಗಿ ಜಮೀನುಗಳಿದ್ದು, ಅಭಿವೃದ್ಧಿಗೆ ಬಿಟ್ಟು ಕೊಡಲು ಜಿಲ್ಲಾಧಿಕಾರಿ ಸೂಚಿಸಿದರು. ಮಾವಿನ ಕೆರೆಯ ಒಟ್ಟು ವಿಸ್ತೀರ್ಣದಲ್ಲಿ ಹತ್ತು ಎಕರೆ ಒಂದು ಗುಂಟೆ ಖಾಸಗಿ ಜಮೀನು ಇದೆ, ಸರ್ಕಾರದ ಯಾವುದೇ ಅಭಿವೃದ್ಧಿಗೆ ಅಡ್ಡಿಪಡಿಸದೇ ಬಿಟ್ಟಕೊಡಬೇಕು ಎಂದರು.

Advertisements

ಈ ವೇಳೆ ಮಾಲೀಕರು, ಮಾವಿನಕೆರೆಯಲ್ಲಿ ಇರುವ ಆಸ್ತಿಯು ಸುಮಾರು ಹಿಂದಿನಿಂದಲೂ ಉಳಿಸಿಕೊಂಡು ನಮ್ಮ ಕುಟುಂಬಗಳಿಗೆ ಸ್ವಂತ ಮನೆ ನಿರ್ಮಿಸಿಕೊಂಡು ಇಲ್ಲಿಯೇ ವಾಸ ಮಾಡಲು ಮುಂದಾಗಿದ್ದೇವೆ. ಸುಮಾರು 60 ಕುಟುಂಬಗಳು ಬೇರೆ ಬೇರೆ ಕಡೆವಾಸವಿದ್ದು, ಸ್ವಂತ ಮನೆಗಳಿಲ್ಲ, ಎಲ್ಲರೂ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಸ್ವಂತ ಆಸ್ತಿ ಎಂದು ಇರುವದು ಇದು ಒಂದೆ. ಎಲ್ಲಾ ಕುಟುಂಬಗಳು ಸ್ವಂತ ಮನೆ ನಿರ್ಮಿಸಿ ಇಲ್ಲಿಯೇ ವಾಸ ಮಾಡಲು ಸಿದ್ಧರಿದ್ದೇವೆ. ಮಾವಿನ ಕೆರೆ ಅಭಿವೃದ್ಧಿಗೆ ಸಹಕಾರ ನೀಡುತ್ತೇವೆ. ಆದರೆ, 10 ಎಕರೆ 1 ಗುಂಟೆ ಬಿಟ್ಟು ಅಭಿವೃದ್ಧಿ ಕೆಲಸ ಮಾಡಿ ಎಂದರು.

ಸರ್ಕಾರದ ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಪಡಿಸುವುದಿಲ್ಲ, ನಮ್ಮ ಎಲ್ಲರ ಕುಟುಂಬಗಳು ಸಹಕಾರ ನೀಡಲು ಸಿದ್ದ, ಅಭಿವೃದ್ಧಿ ಕೆಲಸಗಳು ನಮಗೂ ಬೇಕಾಗಿದೆ. ಆದರೆ, ನಮ್ಮ ಜಮೀನು ಬಿಟ್ಟು ಅಭಿವೃದ್ಧಿ ಕೆಲಸ ಮಾಡಿ ಎಂದು ಕೇಳಿಕೊಂಡರು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತೆ ಮಹೆಬೂಬಿ, ನಗರಾಭಿವೃದ್ಧಿ ಕೊಶ ಅಧಿಕಾರಿ ಜಗದೀಶ ರಂಗಣ್ಣನವರ, ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ, ಐಎಎಸ್ ಅಧಿಕಾರಿ ಸಾಹಿತ್ಯ ಸೇರಿದಂತೆ ಅಧಿಕಾರಿಗಳು, ಜಮೀನು ಮಾಲೀಕರು ಸಭೆಯಲ್ಲಿ ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

Download Eedina App Android / iOS

X