ಗಿಡ ಮೂಲಿಕೆಯಿಂದ ಔಷಧಿ ಅಯುರ್ವೇದದ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ರೈತರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡಬೇಕು. ಇದರಿಂದ ಸಾಕಷ್ಟು ಅನುಕೂಲಗಳಿವೆ ಎಂದು ರಾಯಚೂರು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪುರೆ ಹೇಳಿದರು.
ನಗರದ ಆರೋಗ್ಯ ಇಲಾಖೆ ಸಭಾಂಗಣದಲ್ಲಿ ಜಿಲ್ಲಾ ಅಯುಷ್ ಇಲಾಖೆ ಬೆಂಗಳೂರು, ಅಯುಷ್ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಅಯುಷ್ ಇಲಾಖೆ ಧನ್ವಂತರಿ ಜಯಂತಿ ಅಂಗವಾಗಿ 8ನೇ ರಾಷ್ಟ್ರೀಯ ಅಯುರ್ವೇದ ದಿನಾಚಾರಣೆ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಆಯುರ್ವೇದದಿಂದ ಸಾಕಷ್ಟು ರೋಗಿಗಳು ಗುಣಮುಖರಾಗುತ್ತಿದ್ದಾರೆ. ಹಾಗಾಗಿ ಆಯುರ್ವೇದಕ್ಕೆ ಹೆಚ್ಚಿನ ಅಧ್ಯತೆ ನೀಡಬೇಕಾಗಿದೆ. ಗಿಡ ಮೂಲಕೆಗಳಿಂದ ತಯಾರಿಸುವ ಔಷಧಿಗಳಿಂದ ಗುಣಮುಖರಾಗುತ್ತಿದ್ದಾರೆ. ಇದಕ್ಕೆ ಮಹತ್ವ ನೀಡಬೇಕಿದೆ” ಎಂದರು.
“ತಮ್ಮ ಮನೆ ಮುಂದಿನ ಅಂಗಳದಲ್ಲಿ ಗಿಡಮೂಲಕೆ ಗಿಡಗಳನ್ನು ಬೆಳೆಸಬೇಕು. ಇದರಿಂದ ಉತ್ತಮ ಆರೋಗ್ಯದಿಂದ ಇರಲು ಸಾಧ್ಯ. ನಮ್ಮ ಆರೋಗ್ಯದ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸಬೇಕಿದೆ.
ಆಧುನಿಕತೆ ಬೆಳೆದಂತೆ ಎಲ್ಲವೂ ಬದಲಾವಣೆಯಾಗುತ್ತಿದೆ. ಆದರೆ ನಾವು ಹಿಂದಿನ ಕಾಲಕ್ಕೆ ಹೋಗುವ ಪರಸ್ಥಿತಿ ನಿರ್ಮಾಣವಾಗಿದೆ. ಗಿಡಮೂಲಿಕೆಗಳಿಂದ ಮಾಡುವ ಔಷಧಿ ಪಡೆಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪದವಿ ಪರೀಕ್ಷಾ ಫಲಿತಾಂಶ ಪ್ರಕಟಿಸುವಂತೆ ಆಗ್ರಹ
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಸುರೇಂದ್ರ ಬಾಬು, ಜಿಲ್ಲಾ ಅಯುಷ್ ಅಧಿಕಾರಿ ಶಂಕರಗೌಡ ಐ ಪಾಟೀಲ್, ಡಾ ಅಂಜಾದ್, ಡಾ.ವೆಂಕಟೇಶ ದೇಸಾಯಿ, ಡಾ.ಶಕೀಲ್, ಶಂಕರ ನಾರಾಯಣ ಎಂ ಎ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಸ್ಲಾಂ ಸೇರಿದಂತೆ ಅನೇಕರ ಭಾಗವಹಿಸಿದರು.
ವರದಿ : ಹಫೀಜುಲ್ಲ