ರಾಯಚೂರು | ಮಸೀದಿ ಆವರಣದಲ್ಲಿದ್ದ ಅನಧಿಕೃತ ಮನೆ, ಅಂಗಡಿ ತೆರವು

Date:

Advertisements

ನಗರದ ಅಂಬೇಡ್ಕರ್ ವೃತ್ತದ ಹತ್ತಿರ ಹಾಷ್ಮೀಯಾ ಮಸೀದಿಯ ಆವರಣದಲ್ಲಿ ಅನಧಿಕೃತವಾಗಿ ವಾಸವಿದ್ದ ನಿವಾಸಿಗಳನ್ನು ಹಾಗೂ ವ್ಯಾಪಾರ ಮಳಿಗೆಗಳನ್ನು ಬುಧುವಾರ ಕೋರ್ಟ್ ಆದೇಶದಂತೆ ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.

ಮೇ.13 ರಂದು ವಕ್ಫ್ ನ್ಯಾಯಾಲಯದಿಂದ ಕರ್ನಾಟಕ ಸಾರ್ವಜನಿಕ ಆಸ್ತಿ(ಅನಧೀಕೃತ ನಿವಾಸಿಗಳ ತೆರವು) ಅಧಿನಿಯಮ 1974ರ ಸೆಕ್ಷನ್ 5(2) ರನ್ವಯ ಹಾಷ್ಮೀಯಾ ಮಸೀದಿಯ ಆವರಣದಲ್ಲಿ ಅಥವಾ ಆಸ್ತಿಯಲ್ಲಿ ವಾಸವಿರುವ ಅಥವಾ ವ್ಯಾಪಾರ ಮಾಡುತ್ತಿರುವ ಅನಧಿಕೃತ ಮನೆಗಳು ಹಾಗೂ ಅಂಗಡಿಗಳನ್ನು ತೆರವುಗೊಳಿಸಿ ಎಂದು ಆದೇಶ ಹೊರಡಿಸಿದ್ದರು.

1000124545

ಆದೇಶದನ್ವಯ ಸಹಾಯಕ ಆಯುಕ್ತ ಗಜಾನನ ಬಾಲೆ, ತಹಸೀಲ್ದಾರ್ ಸುರೇಶ ವರ್ಮಾ, ಜಿಲ್ಲಾ ವಕ್ಫ್ ಅಧಿಕಾರಿಗಳು ಹಾಗೂ ವಕ್ಫ ಬೋರ್ಡ ಅಧ್ಯಕ್ಷ ಮೌಲಾನಾ ಪರೀದ್ ಖಾನ್ ನೇತೃತ್ವದಲ್ಲಿ ತೆರೆವು ಪ್ರಕ್ರಿಯೆ ಆರಂಭವಾಗಿ ಅನಧೀಕೃತವಾಗಿ ನಿರ್ಮಿಸಲಾಗಿದ್ದ 31 ಕ್ಕೂ ಹೆಚ್ಚಿನ ಮನೆಗಳಲ್ಲಿ 8 ಮನೆಗಳಲ್ಲಿ ಜನರು ವಾಸವಿದ್ದರು. ಇದಲ್ಲದೇ 25 ಕ್ಕೂ ಹೆಚ್ಚಿನ ಅಂಗಡಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.

15 ಕ್ಕೂ ಹೆಚ್ಚು ಜೆಸಿಬಿಗಳನ್ನು ತೆರವು ಕಾರ್ಯಾಚರಣೆಗೆ ಬಳಸಿಕೊಳ್ಳಲಾಯಿತು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ತೆರವು ಕಾರ್ಯಾಚರಣೆ ವೇಳೆ ಕೆಲವು ನಿವಾಸಿಗಳು ಹಾಗೂ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿಯೂ ಕೂಡ ನಡೆಯಿತು. ತೆರವುಗೊಳಿಸುವ ಬಗ್ಗೆ ಮೊದಲು ನೋಟಿಸ್ ನೀಡಿಲ್ಲ ಎಂಬುದು ಅಲ್ಲಿನ ನಿವಾಸಿಗಳು ಮತ್ತು ವ್ಯಾಪಾರಸ್ಥರ ವಾದವಾದರೆ, ನೋಟಿಸ್ ನೀಡಲಾಗಿದೆ ಎಂಬುದು ಅಧಿಕಾರಿಗಳ ಪ್ರತಿವಾದವಾಗಿತ್ತು.

ಈ ಸುದ್ದಿ ಓದಿದ್ದೀರಾ? ರಾಯಚೂರು |ಕೆಸರಲ್ಲಿ ಬಸ್ ಸಿಲುಕಿ ; ಪ್ರಯಾಣಿಕರ ಪರದಾಟ

Advertisements

ಹಿನ್ನಲೆ
1989 ರ ಹಿಂದಿನಿಂದಲೂ ಹಾಷ್ಮೀಯಾ ಮಸೀದಿಗೆ ಸೇರಿದ ಆಸ್ತಿಯಲ್ಲಿ ನಿವಾಸಿಗಳು ವಾಸವಿದ್ದರು. ಅದಾದ ನಂತರ ಹಾಷ್ಮೀಯಾ ಮಸೀದಿಯಿಂದ ಅನಧಿಕೃತ ನಿವಾಸಿಗಳನ್ನು ತೆರವುಗೊಳಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು.ಅಂದಿನ ನ್ಯಾಯಾಧೀಶರು 1989 ರಲ್ಲಿ ತೆರವುಗೊಳಿಸುವ ಆದೇಶವನ್ನು ನೀಡಿತ್ತು. ಇದನ್ನು ವಿರೋಧಿಸಿ ಅನಧಿಕೃತವಾಗಿ ವಾಸವಿದ್ದ ನಿವಾಸಿಗಳಿಂದ ಜಿಲ್ಲಾ ನ್ಯಾಯಾಲಯಕ್ಕೆ ತಡೆಯಾಜ್ಞೆಗಾಗಿ ಅಪೀಲ್ ಮಾಡಲಾಗಿತ್ತು. ಆದರೆ 1992 ರಲ್ಲಿ ಜಿಲ್ಲಾ ನ್ಯಾಯಾಲಯ ತಡೆಯಾಜ್ಞೆಯನ್ನು ರದ್ದುಗೊಳಿಸಿ ತೆರವುಗೊಳಿಸುವ ಆದೇಶ ಸರಿಯಿದೆ ತೆರವುಗೊಳಿಸಿ ಎಂದು ಮರು ಆದೇಶಿಸಿತು.

ಅದಾದ ನಂತರ 1997 ರಲ್ಲಿ ಜಿಲ್ಲಾ ನ್ಯಾಯಾಲಯದಿಂದ ಹೈಕೋರ್ಟ್ಗೆ ತಡೆಯಾಜ್ಞೆಗಾಗಿ ಮನವಿ ಮಾಡಿದ್ದರು. ಹೈಕೋರ್ಟ್ ಕೂಡ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದು. ತೆರವಿಗೆ ಆದೇಶಿಸಿತ್ತು. 1997 ರಲ್ಲಿಯೇ ಮತ್ತೆ ಈ ಪ್ರಕರಣ ದ್ವಿಪೀಠ ಉಚ್ಛನ್ಯಾಯಾಲಯದ ಮೊರೆ ಹೋಗಿದ್ದರು. ಅಲ್ಲಿಯೂ ಕೂಡ ಈ ಪ್ರಕರಣ ರದ್ದಾಗಿತ್ತು.ತೆರವುಗೊಳಿಸುವ ಬಗ್ಗೆ 2016 ರಲ್ಲಿ ಈ ಪ್ರಕರಣ ವಕ್ಫ್ ನ್ಯಾಯಾಲಯದ ಮುಂದೆ ಇತ್ತು.ಹೀಗೆ ಪ್ರಕರಣ ಮುಂದುವರೆಯುತ್ತಾ ವಕ್ಫ್ ನ್ಯಾಯಾಲಯದಿಂದ ಮೇ 13 ರಂದು ಅನಧಿಕೃತವಾಗಿ ವಾಸವಿದ್ದಾರೆ ಎಂದು ಆದೇಶ ಹೊರಡಿಸಿದರು.

1000124539





ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

Download Eedina App Android / iOS

X