ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ಹಂಚಿಕೆಯಾಗಿರುವ ನಿವೇಶನ ಕುರಿತು ನಡೆದಿರುವ ಆಡಳಿತಾತ್ಮಕ ಕ್ರಮಗಳ ಕುರಿತು ಲೋಕಾಯುಕ್ತ ವಿಚಾರಣೆಯಲ್ಲಿ ಮಾಹಿತಿ ನೀಡಿದ್ದೇನೆ. ಆದರೂ ಕರ್ತವ್ಯ ಲೋಪವೆಂದು ಗುರುತಿಸಿದರೆ ಎದುರಿಸಲು ಸಿದ್ದ ಎಂದು ರಾಯಚೂರು ಸಂಸದ ಜಿ ಕುಮಾರ್ ನಾಯಕ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರಿಗೆ ಮಾಹಿತಿ ನೀಡಿರುವ ವರದಿ ನೋಡಿಲ್ಲ. ನಾವು ಯಾವುದೇ ನಿಯಮಗಳನ್ನು ಕಾನೂನು ಬಾಹಿರವಾಗಿ ಕೆಲಸ ಮಾಡಿಲ್ಲ” ಎಂದು ಹೇಳಿದರು.

“ಇನ್ನೂ ಡಿನೋಟಿಫಿಕೇಷನ್ ಕ್ಯಾನ್ಸಲ್ ಆಗಿಲ್ಲ. ಕಡತ ಪರಿಶೀಲನೆ ಮಾಡಿಯೇ ಪ್ರಕ್ರಿಯೆ ಮಾಡಿದ್ದೇವೆ. ಕರ್ತವ್ಯ ಲೋಪವಿದೆ ಅಂತ ವರದಿಯಲ್ಲಿದ್ದರೆ ಅದನ್ನು ನಾವು ಎದುರಿಸುತ್ತೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕನಾಯಕನಹಳ್ಳಿ | ಸರ್ಕಾರಿ ಶಾಲೆ ಎಂದರೆ ಬಹುತ್ವದ ಪ್ರತೀಕ ;ಡಾ ಸತೀಶ್ ಸಾಸಲು
“ಭೂಪರಿವರ್ತನೆ, ಎಲಿಯೇಷನ್ ಸಂದರ್ಭದಲ್ಲಿ ಭೂಮಿ ಅವರಿಗೆ ಸಂಬಂಧಪಟ್ಟಿದ್ದ ಇಲ್ವಾ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತೇವೆ. ಅದು ಬಿಟ್ಟು ಬೇರೆ ಅಂಶಗಳ ಬಗ್ಗೆ ಹೆಚ್ಚು ಗಮನ ಹರಿಸಲ್ಲ. 2015ರಲ್ಲಿ ನಡೆದಿರುವ ಪ್ರಕರಣದಲ್ಲಿ ಜಿಲ್ಲಾಧಿಕಾರಿಯಾಗಿ ಕ್ರಮವಹಿಸಿದ್ದೆ ಯಾವುದೇ ಪ್ರಭಾವ ಪ್ರಶ್ನೆಯೇ ಇಲ್ಲ. ವರದಿ ನೋಡಿ ಪ್ರತಿಕ್ರಿಯೆ ನೀಡುವೆ. ಲೋಕಾಯುಕ್ತರ ವಿಚಾರಣೆಯಲ್ಲಿ ಆಡಳಿತಾತ್ಮಕ ಕ್ರಮಗಳ ಕುರಿತು ಮಾಹಿತಿ ನೀಡಲಾಗಿದೆ” ಎಂದು ಹೇಳಿದರು.
