ಸೋಲಾರ ಯೋಜನೆಯಡಿಯಲ್ಲಿ ರೈತರ ಖಾಸಗಿ ಜಮೀನಿನಲ್ಲಿ ಕಂಬಗಳು ಸ್ಥಾಪಿಸಲಾಗುತ್ತಿದ್ದು ರೈತರು ತಮ್ಮ ಜಮೀನಿಗೆ ನಿಷ್ಠುರವಾಗಿ ಕಡಿಮೆ ಮೊತ್ತದ ಪರಿಹಾರ ನಿಗದಿಯಾಗಿರುವುದನ್ನು ವಿರೋಧಿಸಿ ರೈತರ ಪಟ್ಟು ಹಿಡಿದಾಗ ರೈತರು ಹಾಗೂ ಪೊಲೀಸರ ಮಧ್ಯೆ ಕೆಲಕಾಲ ವಾಗ್ವಾದ ನಡೆದು ರೈತರನ್ನು ಬಂಧಿಸಿದ ಘಟನೆ ಸಿಂಧನೂರು ತಾಲ್ಲೂಕು ಜವಳಗೇರಾ ವ್ಯಾಪ್ತಿಯ ಸುಲ್ತಾನಪುರದಲ್ಲಿ ನಡೆದಿದೆ.
ಸೋಲಾರ್ ಕಂಬಗಳನ್ನು ಒಂದೊಂದಾಗಿ ಜೋಡಿಸುವ ಸಂದರ್ಭದಲ್ಲಿ ರೈತರ ಖಾಸಗಿ ಜಮೀನುಗಳಲ್ಲಿ ರಸ್ತೆ ಅಥವಾ ಹಾದಿ ನಿರ್ಮಾಣವಾಗುತ್ತಿದ್ದು, ಇದರಿಂದ ಜಮೀನಿಗೆ ಬಹಳಷ್ಟು ಹಾನಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಕೃಷಿಕರು ಪ್ರತಿ ಚದರ ಅಡಿ (Sq.ft)ಗೆ ₹2500 ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಈ ಬಗ್ಗೆ ರೈತ ಮುಖಂಡ ಬಸವರಾಜ ಗೋಡಿಹಾಳ ಮಾತನಾಡಿ, ಹಾಳೂರು ಸೋಲಾರ ಪವರ್ ಪ್ರವೇಟ್ ಕಂಪನಿಯವರು ರೈತರ ಖಾಸಗಿ ಜಮೀನಿನಲ್ಲಿ ಕಂಬಗಳು ಅಳವಡಿಸಿದ್ದು ಕಂಬದಿಂದ ಕಂಬಕ್ಕೆ ಹೋಗುವ ಲೈನ್ ಕೆಳಗಡೆ ಬರುವ ರೈತರ ಜಮೀನಿಗೆ ಯಾವುದೇ ರೀತಿ ಪರಿಹಾರ ನೀಡದೆ ಹಾಗೆ ಲೈನ್ ಎಳೆದುಕೊಂಡು ಹೋಗುತ್ತಿದ್ದು ರೈತರು ಆ ಲೈನ್ ಕೆಳಗಡೆ ಮನೆ ಕಟ್ಟಲಾಗಲಿ, ಮರ ಬೆಳೆಸುವುದಾಗಲಿ ಇನ್ನಿತರ ವೈಯಕ್ತಿಕ ಚಟುವಟಿಕೆ ಮಾಡಲು ಬಾರದ ಕಾರಣ ರೈತರು ತಮ್ಮ ಜಮೀನಿಗೆ ನಿಷ್ಠುರವಾಗಿ ಕಡಿಮೆ ಮೊತ್ತದ ಪರಿಹಾರ ನಿಗದಿಯಾಗಿರುವುದನ್ನು ವಿರೋಧಿಸಿ ರೈತರ ಪಟ್ಟು ಹಿಡಿದಾಗ ರೈತರು ಹಾಗೂ ಪೊಲೀಸರ ಮಧ್ಯೆ ಕೆಲಕಾಲ ವಾಗ್ವಾದ ನಡೆದು ರೈತರನ್ನು ಬಂಧಿಸಿದ್ದಾರೆ.

ಸೋಲಾರ್ ಕಂಬಗಳನ್ನು ಒಂದರಿಂದ ಮತ್ತೊಂದಕ್ಕೆ ಸಂಪರ್ಕಿಸಲು ಜಮೀನಿನಲ್ಲಿ ತಾತ್ಕಾಲಿಕವಾಗಿ ರಸ್ತೆ ನಿರ್ಮಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಕೃಷಿಭೂಮಿಯ ಪೆಳಕಿಗೆ ಹಾಗೂ ಉತ್ಪಾದನೆಗೆ ಭಾರೀ ನಷ್ಟವಾಗುತ್ತಿದೆ. ಹೀಗಾಗಿ ಈ ನಷ್ಟಕ್ಕೆ ತಕ್ಕಂತೆ ಪರಿಹಾರ ನೀಡಬೇಕು ಎಂದು ರೈತರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ರಸಗೊಬ್ಬರ ಪೂರೈಕೆ ಮಾಡುವಂತೆ ರೈತ ಸಂಘಟನೆ ಒತ್ತಾಯ
ಅಧಿಕಾರಿಗಳು ಈ ಕುರಿತು ಗಮನ ಹರಿಸಬೇಕೆಂದು ಮತ್ತು ರೈತರ ಬದುಕು ಹಾಳಾಗದಂತೆ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು. ನಂತರ ಪೊಲೀಸರು ಬಿಡುಗಡೆಗೊಳಿಸಿದರು.

