ರಾಯಚೂರು |ಶಿಕ್ಷಕರಿಗೆ ಸರಳತೆ ಮುಖ್ಯ; ತಾಯರಾಜ್

Date:

Advertisements

ಮಕ್ಕಳಿಗೆ ಶಿಕ್ಷಣವನ್ನು ಕಲಿಸುವುದರ ಜೊತೆಯಲ್ಲಿ ಸಂಸ್ಕಾರವನ್ನು ಕಲಿಸುವ ಹಾಗೂ ಸರಳತೆಯಿಂದ ಕಾರ್ಯ ನಿರ್ವಹಿಸುವ ಶಿಕ್ಷಕನು ಉತ್ತಮ ಶಿಕ್ಷಕವೆನೆಸಿಕೊಳ್ಳುತ್ತಾನೆ ಎಂದು ರಾಯಚೂರು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು ಅದ್ಯಕ್ಷರು ಹಾಗೂ ಸಹ ಶಿಕ್ಷಕರಾದ ತಾಯರಾಜ್ ಮರ್ಚಟ್ಹಾಳ್ ಹೇಳಿದರು .

ಅವರು ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ಯಾದೊಡ್ಡಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಖಾಜಾ ಹುಸೇನ ಅವರ ವಯೋನಿವೃತ್ತಿ ನಿಮಿತ್ಯ ಹಮ್ಮಿಕೊಂಡ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿದರು.

ಶಿಕ್ಷಕರಿಗೆ ಸಹನೆ ,ಸರಳತೆ ಮತ್ತು ತಾಳ್ಮೆ ಮುಖ್ಯವಾಗಿವೆ.ಮಕ್ಕಳಿಗೆ ಕಲಿಕಾಂಶಗಳ ಜೊತೆಗೆ ನೈತಿಕ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಶಿಕ್ಷಕರು ಕರ್ತವ್ಯ ನಿರ್ವಹಿಸಬೇಕು ಎಂದರು.

ತಾಲ್ಲೂಕಿನ ವಿವಿಧ ಭಾಗಗಳ ಶಾಲೆಯ ಶಿಕ್ಷಕರು ಇಡಪನೂರು ವಲಯದ ಸಿಆರ್ ಪಿ ಭೀಮ ನಾಯಕ್ ,ರಾಯಚೂರು ಬಸವನಗರ ಶಾಲೆಯ ಮುಖ್ಯ ಗುರುಗಳು ವೆಂಕಟೇಶ ಹಾಗೂ ಹೊಸ ಗೋನವಾರ ಶಾಲೆಯ ಸಹ ಶಿಕ್ಷಕ ಸುರೇಶ್ ಭಾಗವಹಿಸಿ ನಿವೃತ್ತಿ ಶಿಕ್ಷಕನ ಕುರಿತು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಸ್ವಚ್ಚತಾ ಅಭಿಯಾನಕ್ಕೆ, ಸಾರ್ವಜನಿಕರ ಅಗತ್ಯದಿಂದ ನಗರ ಸ್ವಚ್ಛವಾಗಿರುತ್ತದೆ ; ಜಯಣ್ಣ

ವೇದಿಕೆಯ ಮೇಲೆ ನಿವೃತ್ತಿ ಶಿಕ್ಷಕ ಖಾಜಾ ಹುಸೇನ,ಎಸ್ ಡಿ ಎಂ ಸಿ ಅಧ್ಯಕ್ಷ ಭೀಮಣ್ಣ , ಉಡುಮಗಲ್ ಶಾಲೆಯ ಸಹ ಶಿಕ್ಷಕಿ ಶೀಲಾದೇವಿ, ಮೋಹಿನುದ್ದೀನ್, ಮಹೇಬೂಬ ಪಾಷಾ,ಅಬ್ಬಾಸ್ ಹುಸೇನ್,ಯರಗೇರ ಈಶ್ವರ ಗುಡಿ ಶಾಲೆಯ ಸಹ ಶಿಕ್ಷಕರಾದ ತಿಮ್ಮಪ್ಪ,ಲಿಂಗನ ಖಾನ್ ದೊಡ್ಡಿ ಗ್ರಾಮ ಲೆಕ್ಕಾಧಿಕಾರಿ ಗುರುನಾಥ್, ಶಿಕ್ಷಣ ಪ್ರೇಮಿ ಲಕ್ಷ್ಮಣ,ವೆಂಕಟೇಶ್,ಮುದ್ದುಕೃಷ್ಣ,ಶಿಕ್ಷಕ ಶಹಾಬುದ್ದೀನ್,ಕೊತ್ತದೊಡ್ಡಿ ಶಾಲೆಯ ಶಿಕ್ಷಕ ಚಂದ್ರಶೇಖರ್,ಭೀರಪ್ಪ, ಮಾಲದೊಡ್ಡಿ ಶಾಲೆಯ ಸಹ ಶಿಕ್ಷಕ ವಿರುಪಾಕ್ಷಿ,ಜಂಬಲ ದಿನ್ನಿ ಶಾಲೆಯ ಸಹ ಶಿಕ್ಷಕಿ ದಾನಕ್ಕ,ಮಿಡಗಲದಿನ್ನಿ ಶಾಲೆಯ ಸಹ ಶಿಕ್ಷಕ ಹಸನ್ ಅಂಗನವಾಡಿ ಕಾರ್ಯಕರ್ತೆ ಮಂಜಮ್ಮ,ಬಿಸಿಯೂಟ ಮುಖ್ಯ ಅಡುಗೆಯವರಾದ ಲಕ್ಷ್ಮೀ,ಆಯಾ ಬಡೆಮ್ಮ,ತಿಮಲಮ್ಮ,ಹಾಗು ಗ್ರಾಮದ ಮುಖಂಡರು, ಶಾಲಾ ಎಸ್ಡಿಎಂಸಿ ಸದಸ್ಯರು ವಿದ್ಯಾರ್ಥಿಗಳು,ಮತ್ತು ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisements
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X