ರಾಯಚೂರು | ನೆಪ ಮಾತ್ರಕ್ಕೆ ಶೌಚಾಲಯ; ಐದು ವರ್ಷದಿಂದ ಬಾಗಿಲು ಮಾತ್ರ, ಸೇವೆ ಸಿಕ್ಕಿಲ್ಲ!

Date:

Advertisements

ಸೌಕರ್ಯಗಳಿಲ್ಲದೆ ಸಾರ್ವಜನಿಕರನ್ನು ತೊಂದರೆಗೆ ಸಿಲುಕಿಸುತ್ತಿರುವ ರಾಯಚೂರು ಜಿಲ್ಲೆ ಅರಕೇರಾ ತಾಲೂಕಿನ ಸರ್ಕಾರಿ ಬಸ್ ನಿಲ್ದಾಣ, ಇಂದು ಅವ್ಯವಸ್ಥೆಯ ಸಂಕೇತವಾಗಿದೆ. ಬಸ್‌ ನಿಲ್ದಾಣ ಉದ್ಘಾಟನೆಯಾಗಿ ಐದು ವರ್ಷ ಕಳೆದರೂ ನಿಲ್ದಾಣದ ಶೌಚಾಲಯ ಮಾತ್ರ ಇನ್ನೂ ಬಾಗಿಲು ತೆರೆಯದಿರುವುದೇ ಇದಕ್ಕೆ ಪ್ರಮುಖ ಉದಾಹರಣೆ.

ಪ್ರತಿ ದಿನ ನೂರಾರು ಪ್ರಯಾಣಿಕರು ಸಂಚರಿಸುವ ಬಸ್ ನಿಲ್ದಾಣದಲ್ಲಿ ಅತೀ ಅವಶ್ಯಕ ಸೌಕರ್ಯವಾಗಿರುವ ಶೌಚಾಲಯವೇ ಇಲ್ಲ. ಪ್ರತಿ ನಿತ್ಯ ನೂರಾರು ಬಸ್‌ಗಳ ಓಡಾಟ, ಸದಾ ಜನಸಂದಣಿಯಿಂದ ತುಂಬಿ ತುಳುಕುವ ಸಾರ್ವಜನಿಕ ಸ್ಥಳದಲ್ಲಿ ಸರಿಯಾಗಿ ಮೂಲಸೌಕರ್ಯಗಳ ನಿರ್ವಹಣೆ ಇಲ್ಲದೇ ಜನರು ಬಯಲು ಶೌಚಕ್ಕೆ ಮುಂದಾಗಿರುವುದು ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿ.

ಬಸ್ ನಿಲ್ದಾಣದಲ್ಲಿ ಬೆಳಗ್ಗೆಯಿಂದಲೇ ಸಾವಿರಾರು ಜನರು ಬರುತ್ತಾರೆ. ಮಹಿಳೆಯರು, ಹಿರಿಯ ನಾಗರಿಕರು ಮತ್ತು ಮಕ್ಕಳಿಗೆ ಶೌಚಾಲಯದ ಅನುಪಸ್ಥಿತಿ ತೀವ್ರ ತೊಂದರೆಯ ಮೂಲವಾಗಿದೆ. “ಶೌಚಾಲಯ ನೋಡ್ತಿವಿ, ಆದರೆ ಒಳ ಹೋಗೋಕೆ ಸಾಧ್ಯವಿಲ್ಲ. ಇದು ನಗುವಿಗೆ ಕಾರಣವಲ್ಲ, ನೋವಿಗೆ ಕಾರಣ” ಎಂಬುದು ಸ್ಥಳೀಯರ ಆಕ್ರೋಶ.

WhatsApp Image 2025 04 22 at 11.04.21 AM 1

ಶೌಚಾಲಯದ ಈ ದುರವಸ್ಥೆಯಿಂದ ಬೇಸತ್ತ ಪ್ರಯಾಣಿಕರು ಬಯಲು ಶೌಚ ಆಶ್ರಯಸಿದ್ದಾರೆ. ಬಸ್‌ ನಿಲ್ದಾಣದ ಕಾಂಪೌಂಡ್‌ಗಳು ಶೌಚಾಲಯಗಳಾಗಿ ಮಾರ್ಪಟ್ಟಿವೆ. ಇದರಿಂದ ಬಸ್‌ ನಿಲ್ದಾಣದ ಆವರಣ ಗಬ್ಬೆದ್ದು ನಾರುವಂತಾಗಿದೆ. ಮಹಿಳೆಯರು ಮತ್ತು ಮಕ್ಕಳು ನಿಲ್ದಾಣದ ಆವರಣದಲ್ಲಿ ಸಂಚರಿಸದಂತ ವಾತಾವರಣ ನಿರ್ಮಾಣವಾಗಿದೆ.

ಬಸ್ ನಿಲ್ದಾಣದ ಬಗ್ಗೆ ಕಾಲೇಜು ವಿದ್ಯಾರ್ಥಿಯೊಬ್ಬರು ಮಾತನಾಡಿ, “ಬಸ್‌ಗಾಗಿ ಗಂಟೆಗಟ್ಟಲೆ ಕಾಯಬೇಕು ಅದರ ಮಧ್ಯೆ ಮೂತ್ರ ವಿಸರ್ಜನೆಗೆ ತೆರಳಬೇಕಾದರೆ ಶೌಚಾಲಯವಿಲ್ಲದೆ ಬಯಲು ಶೌಚಾಲಯಕ್ಕೆ ಹೋಗಬೇಕಾಗಿದೆ. ಬಸ್ ನಿಲ್ದಾಣದಲ್ಲಿ ಮೂತ್ರ ವಿಸರ್ಜನೆ ವಾಸನೆಯಿಂದ ಗಬ್ಬು ನಾರುತ್ತಿದೆ. ಬಸ್ ಬರಲು ತಡವಾದರೆ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲೇ ಊಟ ಸೇವಿಸುತ್ತೇವೆ. ದುರ್ವಾಸನೆಯಿಂದ ಸೊಳ್ಳೆಗಳು ಹೆಚ್ಚಾಗಿ ಬಸ್ ನಿಲ್ದಾಣದ ಹೊರಗಡೆ ನಿಲ್ಲುವಂತಾಗಿದೆ” ಎಂದರು.

“ಅದೇನೋ ಬಸ್ ಬರುವವರೆಗೂ ಎರಡು ಗಂಟೆ ಕಾಯಬೇಕಾಯಿತು. ಈ ವೇಳೆ ಬರುವ ನೈಸರ್ಗಿಕ ಕರೆಗೆ ಪಕ್ಕದ ಬೇಸಾಯದ ಜಮೀನಿಗೋ ಹತ್ತಿರದ ಬಡಾವಣೆಗೋ ಓಡಬೇಕಾಗಿದೆ. ಇದು ಮಹಿಳೆಯರಿಗೆ ಅತ್ಯಂತ ಅವಮಾನಕಾರಿಯಾಗಿದೆ. ಶೌಚಾಲಯ ಇಲ್ಲದಿದ್ದರೆ ಏನೋ ಬೇರೆ ವ್ಯವಸ್ಥೆ ಅಥವಾ ಸಿದ್ದತೆ ಮಾಡಿಕೊಳ್ಳಬಹುದು. ಆದರೆ ಇದ್ದೂ ಇಲ್ಲದಂತಿರುವ ಈ ವ್ಯವಸ್ಥೆಗೆ ಏನು ಹೇಳುವುದು? ಇದ್ಯಾವುದೂ ಅಧಿಕಾರಿಗಳ ಗಮನಕ್ಕೆ ಬರದೇ ಇರುವುದು ವಿಪರ್ಯಾಸ” ಎನ್ನುತ್ತಾರೆ ದಿನನಿತ್ಯ ಪ್ರಯಾಣಿಸುವ ಮಹಿಳೆ ಸವಿತಾ.

WhatsApp Image 2025 04 22 at 11.04.12 AM

ಸ್ಥಳೀಯ ಹಿರಿಯ ಹೋರಾಟಗಾರ ಭೀಮರಾಯ ನಾಯ್ಕ್ ಮಾತನಾಡಿ,‌ “ತಾಲ್ಲೂಕು ಘೋಷಣೆಯಾಗಿ ಸುಮಾರು 5 ವರ್ಷ ಕಳೆದಿದೆ. ಬಸ್ ನಿಲ್ದಾಣ ಉದ್ಘಾಟನೆಯಾದಾಗ ಶೌಚಾಲಯ ನಿರ್ಮಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಬಳಕೆಯಿಲ್ಲದೇ ಹಾಳು ಬಿದಿದ್ದೆ. ನೂರಾರು ಮಹಿಳೆಯರಿಗೆ ತುಂಬಾ ಸಮಸ್ಯೆಯಾಗಿದೆ. ಬಸ್ ನಿಲ್ದಾಣ ಅವ್ಯವಸ್ಥೆಯಿಂದ ಗಬ್ಬು ನಾರುತ್ತಿದೆ. ಇದರಿಂದ ಬಸ್ ನಿಲ್ದಾಣದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ” ಎಂದರು.

ಇದನ್ನೂ ಓದಿ: ರಾಯಚೂರು | ಅಮೆರಿಕ ಉಪಾಧ್ಯಕ್ಷರ ಭಾರತ ಭೇಟಿ; ಕೆಪಿಆರ್‌ಎಸ್‌ ಖಂಡನೆ

ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಸರ್ಕಾರ ಲಕ್ಷಾಂತರ ರೂ ವ್ಯಯ ಮಾಡುತ್ತಿದೆ. ಈ ಬಸ್ ನಿಲ್ದಾಣ ಯಾಕೋ ಸ್ವಚ್ಛತೆಯಿಂದ ವಂಚಿತಗೊಂಡಿದೆ. ಇದರ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಬೇಗನೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅರಕೇರಾ ಬಂದ್ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ತಿಳಿಸಿದರು.

“ಇದು ಕೇವಲ ಶೌಚಾಲಯದ ಬಗ್ಗೆ ಅಲ್ಲ. ಇದು ಗೌರವದ, ಆರೋಗ್ಯದ ಮತ್ತು ಮಾನವೀಯ ಹಕ್ಕಿನ ಪ್ರಶ್ನೆ. ಅರಕೇರಾ ಬಸ್ ನಿಲ್ದಾಣದ ಸ್ಥಿತಿ ಕಡೆಗೆ ಸಂಬಂಧಪಟ್ಟವರು ಕಣ್ಣು ಹಾಯಿಸಬೇಕು. ಕೂಡಲೇ ಸಂಬಂಧಿತ ಇಲಾಖೆ ಕ್ರಮ ಕೈಗೊಂಡು, ಶೌಚಾಲಯವನ್ನು ಸಾರ್ವಜನಿಕ ಬಳಕೆಗೆ ತೆರೆದುಕೊಳ್ಳಲು ಕ್ರಮ ಕೈಗೊಳ್ಳಬೇಕು. ಶೌಚಾಲಯದ ಬಾಗಿಲು ತೆರೆಯುವುದು ಅಷ್ಟೇನೂ ದೊಡ್ಡ ಕಾರ್ಯವಲ್ಲ; ಆದರೆ ಅದನ್ನು ತೆರೆಯುವ ನಿರ್ಧಾರವು ನೂರಾರು ಜನರ ಗೌರವವನ್ನು ಉಳಿಸುವ ಮಹಾ ಕಾರ್ಯವಾಗಲಿದೆ ಎಂಬುದು ಪ್ರತಿ ನಾಗರಿಕನ ಆಗ್ರಹ!”




mdrafi
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

ಶಿವಮೊಗ್ಗ | ಪಾಲಿಕೆಗೆ 19 ಗ್ರಾಮಗಳ ಸೇರ್ಪಡೆಗೆ ಸಿದ್ಧತೆ

ಶಿವಮೊಗ್ಗ, ನಿರೀಕ್ಷೆಯಂತೆಯೇ ತುಮಕೂರು ಮತ್ತು ಶಿವಮೊಗ್ಗ ನಗರ ಪಾಲಿಕೆಗಳ ವ್ಯಾಪ್ತಿ ವಿಸ್ತರಣೆಗೆ...

ಶಿವಮೊಗ್ಗ | ಅಂಬೇಡ್ಕರ್ ಓದು ; ಭಾರತವನ್ನು ಅರಿಯುವ ದಾರಿ : ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯ

ಶಿವಮೊಗ್ಗ ಮಾನವತಾವಾದಿ ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಭಾರತವನ್ನು ನೈಜವಾಗಿ ಅರಿಯುವುದು,...

Download Eedina App Android / iOS

X