ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಬಲವರ್ಧನೆಗೆ ಸದಸ್ಯರ ಸಹಕಾರ ಅಗತ್ಯ ಎಂದು ಪದಾಧಿಕಾರಿಗಳು ಮತ್ತು ನಿರ್ದೆಶಕರ ಸಭೆಯ ಶಿವಮೊಗ್ಗ ಜಿಲ್ಲಾಧ್ಯಕ್ಷ ಡಿ ಜಿ ನಾಗರಾಜ್ ಹೇಳಿದರು.
ಶಿವಮೊಗ್ಗ ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳಿಗೆ ಗುರುತಿನ ಚೀಟಿ ವಿತರಣೆ ನಿರ್ದೇಶಕರ ಅಂತಿಮ ಆಯ್ಕೆಪಟ್ಟಿ ಅನುಮೋದನೆ ಮಾಡಿ, ಸಭೆಯ ಒಪ್ಪಿಗೆಯ ಮೇರೆಗೆ 2025ರ ನೂತನ ವರ್ಷದಲ್ಲಿ ಸಂಘದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಲು ಮತ್ತು ಪತ್ರಿಕಾ ಹೇಳಿಕೆ ಸ್ವೀಕರಿಸಲು ಒಪ್ಪಿಗೆ ಪಡೆದ ವೇಳೆ ಮಾತನಾಡಿದರು.
“ಸಂಘದ ಬಲವರ್ಧನೆಗೆ ಮತ್ತು ಅಭಿವೃದ್ಧಿಗೆ ಮುಂದಿನ ಕಾರ್ಯ ಚಟುವಟಿಕೆಗಳಿಗೆ ಸಲಹೆಗಳನ್ನು ನೀಡಿ ಸಹಕರಿಸಬೇಕು” ಎಂದು ಕೋರಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ದೇವದಾಸಿ ಪುನರ್ವಸತಿ ಯೋಜನೆಯ ಅನುದಾನ ವಾಪಸ್; ಕರ್ತವ್ಯ ಲೋಪದ ಕುರಿತು ನಿಂಗು ಬೆಣಕಲ್ ಆರೋಪ
ಈಗಾಗಲೇ ಹಲವು ಸದಸ್ಯರಿಗೆ ಗುರುತಿನ ಚೀಟಿ ನೀಡಲಾಗಿದೆ. ಹೊಸದಾಗಿ 50ಕ್ಕೂ ಹೆಚ್ಚು ಸದಸ್ಯರು ನೋಂದಣಿಗೆ ಅರ್ಜಿ ಸಲ್ಲಿಸಿದ್ದು, ಪರಿಶೀಲಿಸಿ ಗುರುತಿನ ಚೀಟಿ ನೀಡಲು ಒಪ್ಪಿಗೆ ಪಡೆಯಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಚಿತ್ರಪ್ಪ ಯರಬಾಳ, ಪ್ರಧಾನ ಕಾರ್ಯದರ್ಶಿ ಡಿ ಪಿ ಅರವಿಂದ್, ಕಾರ್ಯದರ್ಶಿ ಆರ್ ವಿ ಕೃಷ್ಣ, ಸಹಕಾರ್ಯದರ್ಶಿ ಶಿವರಾಜ್ ಬಿ ಸಿ, ಸಂಘಟನಾ ಕಾರ್ಯದರ್ಶಿ ಅಣ್ಣಪ್ಪ ಎಂ, ಖಜಾಂಚಿ ಸತೀಶ್ ಗೌಡ ಕೆ ಎಂ, ನಿರ್ದೇಶಕ ನಂದನ್ ಕುಮಾರ್ ಸಿಂಗ್, ಲಕ್ಷ್ಮಣಕುಮಾರ್ ಉದಾವತ್, ಭರದ್ವಾಜ್ ಯು ಎಸ್, ಸುರೇಶ್ ಬಿ ಎ, ಗಿರೀಶ್ ಬಿ ಎಸ್ ಷಡಾಕ್ಷರಪ್ಪ ಜಿ ಆರ್ ಇದ್ದರು.