ಶಿವಮೊಗ್ಗ | ರೈತ ಸಂಘದ ಸಂಸ್ಥಾಪಕ ಎನ್ ಡಿ ಸುಂದರೇಶ್ ನೆನೆಪಿನ ಸಭೆ

Date:

Advertisements

ರೈತರು ಈ ದೇಶದ ಮಾಲೀಕರು. ಈ ದೇಶಕ್ಕೆ ಅನ್ನ ಕೊಟ್ಟು ಎಲ್ಲರನ್ನೂ ಸಾಕಿ ಸಲಹಿದವರು. ರೈತ ಸಂಘ ಮೊದಲಿನಿಂದಲೂ ತತ್ವ ಸಿದ್ಧಾಂತವನ್ನು ಮೈಗೂಡಿಸಿಕೊಂಡು ಬಂದಿದೆ. ರೈತ ಸಂಘದಲ್ಲಿ ಜಾತಿ ಸಂಘರ್ಷವಿಲ್ಲ. ರೈತರೆಂದರೆ ಒಂದೇ ಕುಲ. ಆ ನಿಟ್ಟಿನಲ್ಲಿ ನಾವೆಲ್ಲರೂ ನಡೆದು ಬಂದಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಹೆಚ್ ಆರ್ ಬಸವರಾಜಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಶಿವಮೊಗ್ಗ ನಗರದ ಪತ್ರಿಕಾಭವನದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಆಯೋಜಿಸಿದ್ದ ಕೆಚ್ಚೆದೆಯ ನಾಯಕ, ಧೀಮಂತ ಹೋರಾಟಗಾರ, ರೈತ ಕಣ್ಮಣಿ, ರೈತ ಸಂಘದ ಸಂಸ್ಥಾಪಕ ಎನ್ ಡಿ ಸುಂದರೇಶ್ ನೆನೆಪಿನ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಎನ್ ಡಿ ಸುಂದರೇಶ್ ಅವರ 32ನೇ ನೆನೆಪಿನ ಸಭೆಯನ್ನು ಪ್ರತಿವರ್ಷದಂತೆ ಈ ವರ್ಷವೂ ಮಾಡುತ್ತಿದ್ದೇವೆ. 1980ರಲ್ಲಿ ರೈತ ಚಳವಳಿ ಪ್ರಾರಂಭವಾಯಿತು. ಅಂದಿನಿಂದ ದಿಟ್ಟ ಹೋರಾಟಗಳೊಂದಿಗೆ ಇವತ್ತು ಕರ್ನಾಟಕದ ಮೂಲೆ ಮೂಲೆಗಳಲ್ಲಿ ರೈತರನ್ನು ಸಂಘಟನೆ ಮಾಡುವ ಕೆಲಸ ಮಾಡುತ್ತಿದ್ದೇವೆ” ಎಂದರು.

Advertisements

“ಅವತ್ತಿನ ಕಾಂಗ್ರೆಸ್ ಸರ್ಕಾರ ರೈತರ ಮೇಲೆ ಸಾಲ ವಸೂಲಿಗಾಗಿ ಜಪ್ತಿ ಮಾಡುವುದು, ತೆರಿಗೆ, ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವುದರ ಜತೆಗೆ ಖಾಸಗೀಕರಣ ಮಾಡಿತು. ಕೃಷಿಯನ್ನು ಹೊರಗಿಡಬೇಕೆಂದು ದೊಡ್ಡ ಚಳವಳಿಯನ್ನೇ ಮಾಡಿ ಸರ್ಕಾರ ವೇಗವಾಗಿ ಜಾರಿಗೆ ತಂದಿದೆ. ಬಿಜೆಪಿ ಸರ್ಕಾರವೂ ಕೂಡಾ ಆದನ್ನೇ ಮುಂದುವರೆಸಿಕೊಂಡು ಬಂದಿದೆ. ನಲುಗುಂದದಲ್ಲಿ ಗೋಲಿಬಾರ್ ಮಾಡಿ ಅವತ್ತು ಅತ್ತಿದ ಕಿಡಿ ಇವತ್ತು ರಾಜ್ಯಾದ್ಯಂತ ಹರಡಿದೆ” ಎಂದರು.

“ಕೇಂದ್ರದಲ್ಲಿ 3 ರೈತ ವಿರೋಧಿ ಕೃಷಿ ಕಾಯಿದೆಗಳನ್ನು ಜಾರಿಗೆ ತಂದರು. ಅದಕ್ಕೆ ಪೂರಕವಾಗಿ ಕರ್ನಾಟಕ ತಂಡ ಕೃಷಿ ಕಾಯಿದೆಗಳನ್ನು ಇವತ್ತಿಗೂ ವಾಪಾಸ್ ತೆಗೆದಿಲ್ಲ. 3 ರೈತ ವಿರೋಧಿ ಕೃಷಿ ಕಾಯಿದೆಯನ್ನು ತಕ್ಷಣ ವಾಪಸ್ ತಗೆಯಬೇಕು. ರೈತರ ವಿರುದ್ಧದ ಕಾಯಿದೆಗಳನ್ನು ಈ ಸಮಾವೇಶ ಖಂಡಿಸುತ್ತದೆ. ಕೇಂದ್ರ ಸರ್ಕಾರವು ಕಾನೂನು ಪ್ರಕಾರವಾಗಿ ಕೂಡಲೇ ಎಂಎಸ್‌ಪಿ ಜಾರಿ ಮಾಡಬೇಕು. ವಿದ್ಯುಚ್ಛಕ್ತಿ ಖಾಸಗೀಕರಣ ಮಾಡಬಾರದು. ಮೂರು ರೈತ ವಿರೋಧಿ ಕಾಯಿದೆಗಳನ್ನು ಹಿಂಪಡೆಯಬೇಕು” ಎಂದು ಎಂದು ಒತ್ತಾಯಿಸಿದರು.

“ಕೇಂದ್ರ ಸರ್ಕಾರಕ್ಕಾಗಲಿ, ರಾಜ್ಯ ಸರ್ಕಾರಕ್ಕಾಗಲಿ ಬಡವರು, ರೈತರು, ಜನ ಸಾಮಾನ್ಯರ ಸಮಸ್ಯೆ ಕಾಣುತ್ತಿಲ್ಲ. ಇಷ್ಟೆಲ್ಲ ತೊಂದರೆ ಇದ್ದರೂ ಯಾವುದೂ ಕ್ಷುಲ್ಲಕ ಕಾರಣಕ್ಕೆ ಲೋಕಸಭೆ, ವಿಧಾನಸಭೆಯಲ್ಲಿ ಗಲಾಟೆ ಮಾಡುತ್ತಾರೆ” ಎಂದು ದೂರಿದರು.

“ವಿಧಾನ ಪರಿಷತ್ ಚಾವಡಿ ಒಳಗಡೆ ಒಬ್ಬ ಮಹಿಳೆಯ ಬಗ್ಗೆ ಅಸಭ್ಯವಾಗಿ ಮಾತನಾಡುತ್ತಾರೆ. ಹಳ್ಳಿಯಲ್ಲಿ ಹೆಬ್ಬೆಟ್ಟು ಒತ್ತುವ ರೈತರೂ ಕೂಡಾ ಬಳಸದ ಪದವನ್ನು ಬಳಸುತ್ತಾರೆಂದರೆ ಇವರಿಗೆ ಶಾಸಕ, ಮಂತ್ರಿಯಾಗುವಾ ಯೋಗ್ಯತೆ ಇದೆಯಾ? ಯಾವ ರೀತಿ ಕೆಲಸ ಮಾಡಬೇಕೆಂದು ಬಹಿರಂಗ ಸಭೆಯಲ್ಲಿ ಪಾಠ ಮಾಡಬೇಕಾಗಿದೆ. ಸದಸ್ಯರನ್ನು ತರಬೇತಿ ಮಾಡಿ, ಅವರ ಹಕ್ಕು, ವ್ಯಾಪ್ತಿಯ ಬಗ್ಗೆ ಜನಪ್ರತಿನಿಧಿಗಳಿಗೆ ತರಬೇತಿ ನೀಡಬೇಕಿದೆ. ಇವತ್ತು ಎಲ್ಲ ರಾಜಕಾರಣಿಗಳು ಸಭ್ಯತೆ ಮೀರಿ ವರ್ತನೆ ನಡೆಸುತ್ತಿದ್ದಾರೆ. ನಾಗರಿಕರಾದ ನಾವೆಲ್ಲರೂ ತಲೆ ತಗ್ಗಿಸುವ ರೀತಿಯಲ್ಲೇ ನಡೆದುಕೊಳ್ಳುತ್ತಿದ್ದಾರೆ” ಎಂದರು.

“ಮಲೆನಾಡಿನ ಮುಳುಗಡೆ ರೈತರ ಸಮಸ್ಯೆ ಇದೆ, ಬಗರ್ ಹುಕುಂ ಸಮಸ್ಯೆ ಇದೆ, ಕುಡಿಯುವ ನೀರಿನ ಸಮಸ್ಯೆ ಇದೆ. ಇಷ್ಟೆಲ್ಲ ಸಮಸ್ಯೆ ಇದ್ದರೂ ಕೂಡ ಸಮಸ್ಯೆಯ ಬಗ್ಗೆ ಚರ್ಚೆ ಮಾಡಿಲ್ಲ. ಜವಾಬ್ದಾರಿಯಿಂದ ವರ್ತನೆ ಮಾಡುತ್ತಿಲ್ಲ. ಕುಡಿಯುವ ನೀರಿನ ಯೋಜನೆ ಕುರಿತು ಪ್ರಭಾವಿ ಮಂತ್ರಿ ಪ್ರಹ್ಲಾದ್ ಜೋಶಿ ಮನೆ ಎದುರು ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

“ಮತದಾರರು ಎಚ್ಚೆತ್ತುಕೊಂಡು ಆಮಿಷಗಳಿಗೆ ಒಳಗಾಗದಿದ್ದರೆ ಮಾತ್ರ, ಸರ್ಕಾರಕ್ಕೆ ಬುದ್ಧಿ ಕಲಿಸುವಂತಹ ಕೆಲಸವನ್ನು ನಾವು ಮಾಡಬಹುದು. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ವಿರೋಧ ಪಕ್ಷದವರಿಗೂ ಜನರ ಬಗ್ಗೆ, ಜನರ ಸಮಸ್ಯೆಯ ಬಗ್ಗೆ ಚಿಂತೆಯಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ನಮ್ಮ ಹಣದಲ್ಲಿ ಸಂಬಳ ತೆಗೆದುಕೊಂಡು ಸೇವೆ ಮಾಡುವ ಎಲ್ಲರೂ ಸೇವಕರು. ನಾವು ರೈತರು ಮಾಲೀಕರೆಂದು ಹೆಮ್ಮೆಯಿಂದ ಹೇಳುವುದನ್ನು ಕಲಿಯಿರಿ. ಸುಂದರೇಶ್ ಅವರು ಗುಡುಗಿದರೆ ವಿಧಾನಸೌಧ ನಡುಗಬೇಕು ಆ ರೀತಿ ಗುಡುಗುತ್ತಿದ್ದರು. ಇವತ್ತಿನ ಸಂಘಟನೆಗೆ ಹಿರಿಯರ ಬಹಳ ದೊಡ್ಡ ಕೊಡುಗೆ ಇದೆ. ಅವರ ಆಶೋತ್ತರಗಳನ್ನು ಕಾರ್ಯಗತ ಮಾಡುವುದಿದೆ. ಬಿಡುವಿನ ಎರಡು ಮೂರು ದಿನಗಳನ್ನಾದರೂ ಸಂಘಟನೆ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ ಎಂದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಮಿತ್‌ ಶಾ ರಾಜೀನಾಮೆಗೆ ದಲಿತಪರ ಸಂಘಟನೆಗಳ ಆಗ್ರಹ

ರಾಜ್ಯ ಗೌರವಾಧ್ಯಕ್ಷ ಕುರುವ ಗಣೇಶ್ ಮಾತನಾಡಿ, “ಎನ್ ಡಿ ಸುಂದರೇಶ್ ಅವರನ್ನು ಕಳೆದುಕೊಂಡು ಇವತ್ತಿಗೆ 32 ವರ್ಷವಾಯಿತು. ಎನ್ ಡಿ ಸುಂದರೇಶ್ ಅವರ ಹೋರಾಟ, ರೈತ ಚಳವಳಿಯಲ್ಲಿ ಅವರು ಕಟ್ಟಿರುವಂತಹ ರೈತ ಸಂಘ ಅದಕ್ಕಿಂತ ಮೊದಲು ಅವರು ನಡೆದು ಬಂದ ಹಾದಿಯನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕು” ಎಂದರು.

ಇದೇ ಸಂದರ್ಭದಲ್ಲಿ ಎನ್ ಡಿ ಸುಂದರೇಶ್ ಅವರ ಪತ್ನಿ ಶೋಭಾ ಸುಂದರೇಶ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ರೈತ ಸಂಘದ ಪ್ರಮುಖರಾದ ಹೊನ್ನೂರು ಮುನಿಯಪ್ಪ, ತರೀಕೆರೆ ಮಹೇಶ್, ಹುಟ್ಟೂರು ರಾಜು, ಟಿ ಎಂ ಚಂದ್ರಪ್ಪ, ಕೊಟ್ಟೂರು ಭರ್ಮಣ್ಣ, ನಜೀರ್ ಸಾಬ್ ಮೂಲಿಮನಿ, ಅಮೀನ್ ಪಾಷಾ ದಿದ್ಗಿ, ಉತ್ತರ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಮಲ್ಲನಗೌಡ ಪಾಟೀಲ್ ರಾಮಪುರ, ಲಿಂಗಸೂರು, ಶಂಕರಮ್ಮ, ರಾಧಮ್ಮ, ವೀರಮ್ಮ, ರಾಘವೇಂದ್ರ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

Download Eedina App Android / iOS

X