ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಮಿಕ ವಿಭಾಗದ ಅಧ್ಯಕ್ಷರ ಪೋಸ್ಟ್ಗೆ ಅವಹೇಳನಕಾರಿ ಕಾಮೆಂಟ್ ನೀಡಿದವರ ವಿರುದ್ಧ ಶಿವಮೊಗ್ಗ ಜಿಲ್ಲೆಯ ತೀರ್ಥಹಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸಾರ್ವಜನಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ತೀರ್ಥಹಳ್ಳಿ ತಾಲೂಕಿನ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಮಿಕ ವಿಭಾಗದ ಅಧ್ಯಕ್ಷ ವಿನಾಯಕ ಎಂಬುವರು ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ನಲ್ಲಿ ಕೇಂದ್ರ ಸರ್ಕಾರದ ರೈಲು ವ್ಯವಸ್ಥೆಯ ಬಗ್ಗೆ ಅದಾನಿ ಎಂಬ ಹೆಸರನ್ನು ನಮೂದಿಸಿ ಪೋಸ್ಟ್ ಹಾಕಿದ್ದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಎಲ್ಲೆಂದರಲ್ಲಿ ಕಸದ ರಾಶಿ; ಸ್ಥಳೀಯರು, ಪಾಲಿಕೆ ಅಧಿಕಾರಿಗಳ ಅಭಿಪ್ರಾಯಗಳೇನು?
ಅದಾನಿ ಎಂಬ ಹೆಸರನ್ನು ನಮೂದಿಸಿ ಹಾಕಿದ್ದ ಪೋಸ್ಟ್ಗೆ ಅನಂತ್ ಮಾಲೋಡ್ ಎಂಬ ವ್ಯಕ್ತಿಯು, ʼಈ ಮೊದಲು ಇಟಲಿಗೆ ಮಾರಿದ್ರಲ್ಲ, ಇಟಲಿಯಿಂದ ವಾಪಾಸ್ ಬರಲ್ಲʼ ಎಂದು ಫೇಸ್ಬುಕ್ನಲ್ಲಿ ಅವ್ಯಾಚ್ಯ ಶಬ್ದಗಳನ್ನು ಬಳಸಿ ಪ್ರತಿಕ್ರಿಯಿಸಿದ್ದರು. ಪೋಸ್ಟ್ಗೆ ಪ್ರತಿಕ್ರಿಯೆ ನೀಡಿ ಪರೋಕ್ಷವಾಗಿ ವಿನಾಯಕರ ತಂದೆ ತಾಯಿಯರಿಗೆ ಸಾರ್ವಜನಿಕವಾಗಿ ಅವಾಚ್ಯವಾಗಿ ಬೈದು ನಿಂದಿಸಿರುವುದರಿಂದ ಅವರ ವಿರುದ್ಧ ದೂರು ದಾಖಲಾಗಿದೆ.