ಶಿವಮೊಗ್ಗ | ಮನಸ್ಥಿತಿ ಬದಲಾಗದ ಹೊರತು ಕನ್ನಡ ಅನುಷ್ಠಾನ ಕಷ್ಟ: ಡಾ ಪುರುಷೋತ್ತಮ ಬಿಳಿಮಲೆ

Date:

Advertisements

ಕನ್ನಡ ಮನಸ್ಥಿತಿಯಲ್ಲಿ ಬದಲಾಗಬೇಕಿದೆ. ಮನಸ್ಥಿತಿ ಬದಲಾಗದ ಹೊರತು ಕನ್ನಡ ಅನುಷ್ಠಾನ ಕಷ್ಟ. ಬೆಂಗಳೂರಿನಲ್ಲಿ 30 ಕನ್ನಡ ಕಲಿಕಾ ಕೇಂದ್ರ ಆರಂಭಿಸಲಾಗಿದೆ. ಹೊರ ರಾಜ್ಯದವರಿಗೆ ಕನ್ನಡ ಕಲಿಕೆ ಹೊಸ ಪಠ್ಯಗಳು ಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ಪುರುಷೋತ್ತಮ ಬಿಳಿಮಲೆರವರು ಅಭಿಪ್ರಾಯಪಟ್ಟರು.

ಶಿವಮೊಗ್ಗ ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, “ಕಳೆದ 30 ವರ್ಷದಿಂದ ಕನ್ನಡ ಅನುಷ್ಠಾನದ ಬಗ್ಗೆ ಚರ್ಚೆ ನಡೆದಿತ್ತು. ಈ ಕುರಿತು ಈಗ ವಿಭಾಗ, ಜಿಲ್ಲಾಮಟ್ಟ ಮತ್ತು ಗ್ರಾಮಗಳಲ್ಲಿ ಮಾಹಿತಿ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಕನ್ನಡ ಅನುಷ್ಠಾನಕ್ಕಾಗಿ ನಾವು ಬೀದರ್‌ನಿಂದ ಪ್ರವಾಸ ಆರಂಭಿಸಿದ್ದು, ಇಂದು ಶಿವಮೊಗ್ಗಕ್ಕೆ ಬರಲಾಗಿದೆ. ರಾಷ್ಟಕವಿ, ಸಮಾಜದ ಧುರೀಣರು ಈ ಪ್ರದೇಶದಿಂದ ಬಂದಿದ್ದಾರೆ. ಈ ಹಿನ್ನಲೆಯಲ್ಲಿ ಎಲ್ಲಿ ಕನ್ನಡ ವಿಫಲವಾಗಿದೆಯೆಂದು ನೋಡಲು ಬಂದಿದ್ದೇವೆ” ಎಂದರು.

“ಶಿವಮೊಗ್ಗದಲ್ಲಿ ಅಧಿಕಾರಿಗಳ ಜತೆಗೆ ಸಭೆ ನಡೆಸಲಾಗಿದೆ. ಸಭೆಯಲ್ಲಿ ಭಾಗಿಯಾದ ಅನೇಕ ಅಧಿಕಾರಿಗಳು ಕನ್ನಡವನ್ನು ಅನುಷ್ಠಾನಕ್ಕೆ ತರುವಲ್ಲಿ ವಿಫಲವಾಗಿದ್ದಾರೆ” ಎಂದು ಪರೋಕ್ಷವಾಗಿ ಹೇಳಿದ ಬಿಳಿಮಲೆ.

Advertisements

“ಶೇ.66ರಷ್ಟು ಕನ್ನಡ ಅನುಷ್ಠಾನಕ್ಜೆ ಸರ್ಕಾರ ಆದೇಶ ಹೊರಡಿಸಿದೆ. ಶಿವಮೊಗ್ಗ ನಗರದ ನಾಮಫಲಕಗಳಲ್ಲಿ ಆದೇಶದಷ್ಟು ಕನ್ನಡ ಕಾಣಿಸುತ್ತಿಲ್ಲ. ಇನ್ನೊಂದು ವರ್ಷದಲ್ಲಿ ಕನ್ನಡದ ನಾಮಫಲಕ ಅಳವಡಿಸುವುದು ಹೆಚ್ಚಿದರೆ ಕನ್ನಡ ಅನುಷ್ಠಾನ ಯಶಸ್ವಿಯಾಗಲಿದೆ. ಕೈಗಾರಿಕೆ ಕ್ಷೇತ್ರಗಳಿಗೆ ಇಲ್ಲಿಯ ನೀರು, ಭೂಮಿಗಳು ಬೇಕು. ಆದರೆ ಕನ್ನಡ ಭಾಷೆ ಬೇಡವಾಗಿದೆ. ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳನ್ನು ಕನ್ನಡಿಗರಿಗೆ ನೀಡಲಾಗುತ್ತಿದೆಯೇ ಎಂಬ ಚರ್ಚೆ ಮಾಡಿದಾಗ ಅದೂ ಕೂಡಾ ಅನುಷ್ಠಾನವಾಗಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ಅನೇಕ ಹೋಟೆಲ್‌ಗಳಲ್ಲಿ ಕನ್ನಡಿಗರ ಹೊರತಾಗಿ ಅನ್ಯರೂ ಇದ್ದಾರೆ. ಸಂವಿಧಾನದ ಪ್ರಕಾರ ಇದು ತಪ್ಪಲ್ಲ. ಆದರೆ ಸ್ಥಳೀಯ ಭಾಷೆ ಅನ್ಯ ಭಾಷಿಗರ ಹಾವಳಿಯಲ್ಲಿ ಕುಸಿಯದಂತೆ ಕಾಯಬೇಕಿದೆ. ಇಲ್ಲಿನ ಸಂಖ್ಯೆಗೆ ಅನುಗುಣವಾಗಿ ಕನ್ನಡಿಗರು ಎಷ್ಟು ಮಂದಿ ಇರಬೇಕು ಎಂಬುದನ್ನು ಪರಿಗಣಿಸುವುದು ಅನಿವಾರ್ಯವಾಗಿದೆ” ಎಂದರು. 

“ಸರೋಜಿನಿ ಮಹಿಷಿಯ ವರದಿಯಂತೆ ಖಾಸಗಿಯ ಕನ್ನಡಿಗರನ್ನು ಹೊರಗುತ್ತಿಗೆಯಾಗಿ ನೇಮಕ ಮಾಡಬೇಕಿದೆ. ಇದು ಸವಾಲಾಗಿದೆ. ಹೊರಗುತ್ತಿಗೆ ಮತ್ತು ಕನ್ನಡ ಸಂಖ್ಯೆ ಬಗ್ಗೆ ಚರ್ಚೆಯಾಗಬೇಕಿದೆ. ಸಾಮಾಜಿಕ ಸಾಮರಸ್ಯ ಕೆಡುವುತ್ತಿರುವ ಕ್ಷೇತ್ರ ಬ್ಯಾಂಕ್‌ ಕ್ಷೇತ್ರವಾಗಿದೆ. ಪ್ರಾಂತೀಯ ಹುದ್ದೆ ನೇಮಕಾತಿ ಇಲ್ಲವಾದ್ದರಿಂದ, ಇದು ರಾಷ್ಟ್ರೀಕೃತವಾದ ಕಾರಣ ಕನ್ನಡಿಗರ ಸಂಖ್ಯೆ ಕಡಿಮೆಯಾಗಿದೆ. ಬ್ಯಾಂಕ್‌ಗಳಲ್ಲಿ ಪ್ರಾದೇಶಿಕ ಫಲಕವನ್ನು ಪುನರ್ ಪರಿಶೀಲಿಸಬೇಕಿದೆ” ಎಂದು ಹೇಳಿದರು.

“ಬ್ಯಾಂಕ್‌ನಲ್ಲಿ ಕನ್ನಡಿಗರು ಬೇಕು ಎಂಬುದಲ್ಲ, ಸ್ಥಳೀಯರಿರಬೇಕು ಎಂಬುದಾಗಿದ್ದು, ಸಚಿವ  ಧರ್ಮೇಂದ್ರ ಪ್ರಸಾದ್, ಹೆಚ್ ಡಿ ದೇವೇಗೌಡ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕುಮಾರಸ್ವಾಮಿ ಅವರ ಜತೆಗೆ ಮಾತನಾಡಲಾಗಿದ್ದು, ಇದರ ಬಗ್ಗೆ ಒಪ್ಪಿದ್ದಾರೆ” ಎಂದರು. 

“ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಸ್ಥಳೀಯ ಊರಿನ ಹೆಸರು ಬರೆಯುವುದೂ ಕೂಡಾ ತಪ್ಪಾಗುತ್ತಿದೆ. ಫಲಕ ಬರೆಯುವ ಪೇಂಟರ್‌ಗಳು ಕನ್ನಡಿಗರು ಇಲ್ಲದಿರುವುದು ಶೋಚನೀಯ. ಕನ್ನಡ ಮನಸ್ಥಿತಿಯಲ್ಲಿ ಬದಲಾಗಬೇಕಿದೆ. 3000 ಸರ್ಕಾರಿ ಆದೇಶಗಳಿವೆ. ಆದರೆ ಮನಸ್ಥಿತಿ ಬದಲಾಗದ ಹೊರತು ಕನ್ನಡ ಅನುಷ್ಠಾನ ಕಷ್ಟ” ಎಂದರು. 

“ಅನೇಕ ವರ್ಷಗಳಿಂದ ಸಹ್ಯಾದ್ರಿ ಉತ್ಸವ ನಡೆದಿಲ್ಲ. ಡಿಸಿಗೆ ಮನವಿ ಕಳುಹಿಸಲು ಸೂಚಿಸಲಾಗುತ್ತದೆ. ಸ್ಥಳೀಯ ಉತ್ಸವಗಳನ್ನು ಸಂಭ್ರಮಿಸದಿದ್ದರೆ ಹೃದಯ ಭಾಷೆಯಾಗದು. ಮನವಿ ಸಲ್ಲಿಸಿದರೆ ಮುಂದಿನ ವರ್ಷದಿಂದ ಆಚರಣೆಯಾಗುವಂತೆ ಪ್ರಯತ್ನಿಸಲಾಗುವುದು” ಎಂದರು. 

ಈ ಸುದ್ದಿ ಓದಿದ್ದೀರ ? ಉಡುಪಿ | ಟೋಲ್ ಗೇಟ್ ಒಳಗೆ ನುಗ್ಗಿದ ಟಿಪ್ಪರ್ ಲಾರಿ

ಶಿವಮೊಗ್ಗವನ್ನು ಕನ್ನಡ ಚಟುವಟಿಕೆಗಳ ಮುಖ್ಯ ಕೇಂದ್ರವನ್ನಾಗಿ ಮಾಡುವ ಪ್ರಯತ್ನ ನಡೆದಿದೆ. ಜೆಎನ್‌ಯುನಲ್ಲಿ ಜೂನ್‌ನಿಂದ ಕನ್ನಡ ಪೀಠ ಆರಂಭಿಸಲಾಗುವುದು. ಬನಾರಸ್‌ನಲ್ಲಿ ಕನ್ನಡ ಪೀಠಗಳಿಲ್ಲ. ಹೊರ ಕನ್ನಡಿಗ ಪೀಠಗಳಿಗೆ ಒಂದು ಬಾರಿ ಹಿಡಿಗಂಟು ನೀಡಿ ₹10 ಕೋಟಿ ಬಿಡುಗಡೆ ಮಾಡಬೇಕು. ಅದನ್ನು ಫಿಕ್ಸೆಡ್‌ ಡೆಪಾಸಿಟ್‌ನಲ್ಲಿ ನಡೆಸಬೇಕಿದೆ” ಎಂದರು. 

“ದ್ವಿಭಾಷ ಸೂತ್ರವನ್ನು ತಮಿಳುನಾಡು ಅಳವಡಿಸಿದೆ. ಆದರೆ ನಾವು ಯಾಕೆ ಬಳಸಿಕೊಳ್ಳಲಿಲ್ಲ. ಕರ್ನಾಟಕವೂ ದ್ವಿಭಾಷ ಸೂತ್ರವನ್ನು ಅಳವಡಿಸಿಕೊಳ್ಳಬೇಕಿದೆ. ಭಾಷೆ ಬೆಂಕಿ ಇದ್ದಂತೆ. ಇದರ ಜತೆಗೆ ಆಟವಾಡಬಾರದು. ಅಖಿಲ ಭಾರತ ಮಟ್ಟದಲ್ಲಿ ಭಾಷಾನೀತಿ ಬೇಕಿದೆ. ಕರ್ನಾಟಕದ ಒಳಗಡೆ ಕನ್ನಡ ಬಿಟ್ಟು 350 ಭಾಷೆಗಳಿವೆ. ರಾಜ್ಯದಲ್ಲಿ ಕನ್ನಡ ಭಾಷಿಗರು ಎಷ್ಟು ಜನರಿದ್ದಾರೆ ಎಂಬುದೂ ಕೂಡಾ ಸರಿಯಾದ ಅಂಕಿ ಅಂಶವಿಲ್ಲ” ಎಂದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X