ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಡಿಎಚ್ಒ ಕಚೇರಿ ಹಾಗೂ ಉಗ್ರಾಣಕ್ಕೆ ಲೋಕಾಯುಕ್ತ ಎಸ್ಪಿ ಮಂಜುನಾಥ್ ಚೌಧರಿ ಭೇಟಿ ನೀಡಿದ್ದು, ತಪಾಸಣೆ ನಡೆಸುವ ಮೂಲಕ ಸಂಚಲನ ಮೂಡಿಸಿದ್ದಾರೆ.
ಸರ್ಕಾರದ ಆದೇಶದ ಹಿನ್ನಲೆಯಲ್ಲಿ ಮೆಗ್ಗಾನ್ ಆಸ್ಪತ್ರೆಯ ಔಷಧ ಉಪ ಉಗ್ರಾಣ, ಮುಖ್ಯ ಉಗ್ರಾಣ ಮತ್ತು ಡಿಎಚ್ಒ ಕಚೇರಿಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.
ಬಳ್ಳಾರಿಯ ಸಾರ್ವಜನಿಕ ಆಸ್ಪತ್ರೆಗಳಲ್ಲಿ 12 ಮಂದಿ ಬಾಣಂತಿಯರು ಮರಣ ಹೊಂದಿದ ಬೆನ್ನಲ್ಲೇ ಸರ್ಕಾರದ ಆದೇಶದ ಮೇರೆಗೆ ಗ್ಲುಕೋಸ್ ರದ್ದುಗೊಳಿಸಿದೆ. ರದ್ದು ಆದೇಶ ಸರಿಯಾಗಿ ಪಾಲಿಸಲಾಗುತ್ತಿದೆಯೇ ಎಂಬ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿಯವರ ತಂಡ ಖುದ್ಧು ಮೂರು ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.
ಆದೇಶ ಬಂದ ಹಿನ್ನಲೆಯಲ್ಲಿ ಮೆಗ್ಗಾನಲ್ಲೂ ಔಷಧಗಳನ್ನು ಬಳಸದೆ ತೆಗೆದಿಡಲಾಗಿದೆ. ₹1,10,000 ಮೌಲ್ಯದ ರಿಂಗಲ್ ಲ್ಯಾಕ್ಟೆಡ್ ಫ್ಲೂಯಿಡ್ ತಯಾರಿಸಲಾಗಿತ್ತು. ಅದರಲ್ಲಿ ಸರ್ಕಾರದ ಆದೇಶ ಬಂದ ನಂತರ ₹48,000 ಫ್ಲೂಯಿಡ್ಗಳನ್ನು ಬಳಸದೆ ತೆಗೆದಿಡಲಾಗಿದೆ ಎಂಬ ಸತ್ಯಾಂಶ ಲೋಕಾಯುಕ್ತ ತಪಾಸಣೆಯಿಂದ ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಹದಡಿ ರಸ್ತೆ ದುರಸ್ತಿಗೆ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹ
ಅದೂ ಅಲ್ಲದೆ ವೆಸ್ಟ್ ಬೆಂಗಾಲ್ನಿಂದ ಸರಬರಾಜಾಗುವ ಮೆಡಿಸಿನ್ಗಳೂ ಕೂಡಾ ಬಳಕೆ ಮಾಡದಂತೆ ಲೋಕಾಯುಕ್ತ ಈ ವೇಳೆ ಮೆಗ್ಗಾನ್ಗೆ ಸೂಚಿಸಿರುವುದಾಗಿ ತಿಳಿದುಬಂದಿದೆ.
ತಪಾಸಣೆ ವೇಳೆ ಲೋಕಾಯುಕ್ತ ಡಿವೈಎಸ್ಪಿ ಮೃತ್ಯುಂಜಯ, ಇನ್ಸ್ಪೆಕ್ಟರ್ ವೀರಬಸಪ್ಪ ಕುಸ್ಲಾಪುರ, ಹೆಡ್ ಕಾನ್ಸ್ಟೆಬಲ್ ಸುರೇಂದ್ರ, ಮಂಜುನಾಥ್, ಪ್ರಶಾಂತ್, ಪ್ರದೀಪ್, ಗಂಗಾಧರ್ ಇದ್ದರು.