ಶಿವಮೊಗ್ಗ | ಮಲೆನಾಡ ಜನರ ಅಚ್ಚುಮೆಚ್ಚಿನ ಸಹಕಾರ ಸಾರಿಗೆ ಬಸ್ ಮತ್ತೊಮ್ಮೆ ರಸ್ತೆಗೆ

Date:

Advertisements

ಮಲೆನಾಡ ಜನರಿಗೆ ಅದೊಂದು ಹೆಸರು ಸಹಕಾರ ಸಾರಿಗೆ ಬಸ್ ಮರೆಯಲಾಗದ ಹೆಸರೆಂದರೆ ತಪ್ಪಾಗಲಾರದು. ಹೌದು ಪ್ರತಿನಿತ್ಯ ಮಲೆನಾಡಿನ ಬಹುತೇಕ ಹಳ್ಳಿಗಳಲ್ಲಿಯೂ ಓಡಾಟ ನಡೆಸಲು ಇದ್ದಂತಹ ಬಸ್‌ ಸಹಕಾರ ಸಾರಿಗೆ. ಈ ಹೆಸರಿಗೆ ಒಂದು ಗತ್ತು ಗಮ್ಮತ್ತು ಇತ್ತು. ಇದು ಓಡಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಇತರ ಬಸ್‌ಗಳ ಅವಶ್ಯಕತೆಯೇ ಬೇಡ ಎನ್ನುವಷ್ಟರ ಮಟ್ಟಿಗೆ ಜನರು ಇದನ್ನು ನಂಬಿಕೊಂಡಿದ್ದರು.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಟಿಸಿಎಸ್ ಎಂಬ ಸಂಸ್ಥೆಯ ಸಹಕಾರ ಸಾರಿಗೆ ಬಸ್, ಕೊಪ್ಪ, ಶೃಂಗೇರಿ, ಎನ್‌ ಆ‌ರ್ ಪುರ, ತೀರ್ಥಹಳ್ಳಿ, ಶಿವಮೊಗ್ಗ, ರಿಪ್ಪನ್‌ ಪೇಟೆ ಹೀಗೆ ಎಲ್ಲೆಡೆ ಸಂಚಾರ ಮಾಡುತ್ತಿದ್ದ ಸಾರಿಗೆ ಸಂಸ್ಥೆ ಹಲವಾರು ತೊಂದರೆಗಳಿಗೆ ಒಳಗಾಗಿ ಬಾಗಿಲು ಮುಚ್ಚುವ ಪರಿಸ್ಥಿತಿಗೆ ಬಂತು. ನಂತರ ಸಹಕಾರ ಸಾರಿಗೆಯ ಓಡಾಟ ನಿಲ್ಲಿಸಲಾಯಿತು. ಎಷ್ಟೋ ಜನರಿಗೆ ಓಡಾಟಕ್ಕೆ ಅನುಕೂಲವಾಗಿದ್ದ ಬಸ್ ಏಕಾಏಕಿ ಸ್ಥಗಿತವಾಯಿತು.

ಸಾರ್ವಜನಿಕರಿಗೆ, ಶಾಲೆ ಕಾಲೇಜು ವಿದ್ಯಾರ್ಥಿಗಳಿಗೆ ಇದೊಂದು ಬಸ್‌ ಎನ್ನುವಂತಾಗಿರದೆ ತಮ್ಮದೇ ವಾಹನ ಎಂಬಂತೆ ಓಡಾಟ ನಡೆಸುತ್ತಿದ್ದರು. ಶಾಲೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಬಸ್ ಪಾಸ್ ವಿತರಣೆ ಮಾಡಿದ ಮೊದಲ ಖಾಸಗಿ ಬಸ್ ಸಂಸ್ಥೆ ಸಹಕಾರ ಸಾರಿಗೆಗೆ ಸಲ್ಲುತ್ತದೆ. ಬಸ್‌ ಮಾತ್ರವಲ್ಲದೆ ಅದರಲ್ಲಿದ್ದ ಚಾಲಕರು, ನಿರ್ವಾಹಕರೂ ಕೂಡಾ ಜನರ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದ ಕಾರಣದಿಂದ ಅತ್ಯಂತ ಜನಪ್ರಿಯತೆ ಪಡೆದಿತ್ತು.

Advertisements

ಈಗ ಹಲವು ವರ್ಷಗಳ ನಂತರ ಮತ್ತೊಮ್ಮೆ ಸಹಕಾರ ಸಾರಿಗೆ ಬಸ್ ರಸ್ತೆಗೆ ಇಳಿದಿದೆ. ರಸ್ತೆಯಲ್ಲಿ ಓಡಾಟ ನಡೆಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹಲವು ವರ್ಷಗಳ ನಂತರವೂ ರಸ್ತೆಯಲ್ಲಿ ಈ ಬಸ್‌ ಓಡಾಟ ಆರಂಭಿಸಿದ್ದರೂ ಗಜ ಗಾಂಭೀರ್ಯ ನಡೆಯೆಂದರೆ ತಪ್ಪಾಗಲಾರದು. ಒಟ್ಟಿನಲ್ಲಿ ಹಲವು ವರ್ಷಗಳ ನಂತರ ಸಹಕಾರ ಸಾರಿಗೆ ತನ್ನ ಪುನರ್ಜನ್ಮ ಪಡೆದಿದೆ.

ಈ ಸುದ್ದಿ ಓದಿದ್ದೀರಾ? ತುಮಕೂರು | ಕೋಡಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವತಿ 12 ಗಂಟೆಯ ಬಳಿಕ ಜೀವಂತವಾಗಿ ಪತ್ತೆ!

ಸಹಕಾರ ಸಾರಿಗೆ ಇನ್ನುಮುಂದೆ ಶಿವಮೊಗ್ಗದಲ್ಲಿ ಹಾಗೂ ಚಿತ್ರದುರ್ಗದಲ್ಲಿ ತನ್ನ ಗಾಂಭೀರ್ಯ ನಡೆಯನ್ನು ಮುಂದುವರೆಸಲಿದೆ. ಸಹಕಾರ ಸಾರಿಗೆ ಎಂಬ ಹೆಸರಿನಲ್ಲಿಯೇ ಮುಂದುವರೆಸುವಂತೆ ಮಲೆನಾಡ ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಸುಳ್ಳು ಸುದ್ದಿ … ಯಾವುದೇ ಬಸ್ ಓಡಾಟ ನೆಡೆಸುತಿಲ್ಲ ಅದು ಬೇರೆ ಪ್ರೈವೇಟ್ ಕಂಪನಿ ಯವರು ಕೆಲವೊಂದು ಬಸ್ ಗಳನ್ನು ತಗೊಂಡಿದಾರೆ ಅಷ್ಟೇ…..

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

Download Eedina App Android / iOS

X