ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಲವು ಅರಣ್ಯ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಕಳೆದ ಮೂರು ವರ್ಷಗಳಿಂದ ಮಂಡಗದ್ದೆ ಮತ್ತು ಮೇಗರವಳ್ಳಿ (ಆಗುಂಬೆ) ವಲಯ ಅರಣ್ಯ ಅಧಿಕಾರಿಗಳಾಗಿ ಅರಣ್ಯ ರಕ್ಷಣೆ , ಅರಣ್ಯದಲ್ಲಿನ ಅಕ್ರಮಗಳ ನಿಯಂತ್ರಣ, ಮಣ್ಣು ಮಾಫಿಯಾ, ಮರಳು ಮಾಫಿಯಾದ ವಿಚಾರಗಳಲ್ಲಿ ಹದ್ದಿನ ಕಣ್ಣಿಟ್ಟು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದ ಮಂಡಗದ್ದೆ ವಲಯ ಅರಣ್ಯ ಅಧಿಕಾರಿ ಆದರ್ಶ.ಎಂ.ಪಿ. ಅವರನ್ನು ಕೊಪ್ಪ ವಿಭಾಗದ ಚಿಕ್ಕ ಅಗ್ರಹಾರ (ಎನ್ ಆರ್ ಪುರ) ವಲಯ ಅರಣ್ಯ ಅಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.
ಮಂಡಗದ್ದೆ ವಲಯ ಅರಣ್ಯ ಅಧಿಕಾರಿಯಾಗಿ ವಿನಯಕುಮಾರ್ ಆರ್ ಬೇಲೂರು ಹಾಸನ ಜಿಲ್ಲೆಯಿಂದ ಮಂಡಗದ್ದೆಗೆ ವರ್ಗಾವಣೆ ಮಾಡಲಾಗಿದೆ.
ಮಂಡಗದ್ದೆಯಲ್ಲಿ ಉತ್ತಮ ಕೆಲಸ ಮಾಡಿ ಜನರಿಂದ ಹೆಸರು ಗಳಿಸಿರುವ ಮೇಗರವಳ್ಳಿ (ಆಗುಂಬೆ) ಮಧುಕರ್ ಎನ್.ವಿ. ರವರನ್ನು ಶೃಂಗೇರಿ ವಲಯ ಅರಣ್ಯ ಅಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದ್ದು, ಅವರ ಜಾಗಕ್ಕೆ ಹೇಮಗಿರಿ ಅಂಗಡಿ ಅವರನ್ನು ಮಂಗಳೂರಿನಿಂದ ಮೇಗರವಳ್ಳಿಗೆ ವರ್ಗಾವಣೆ ಮಾಡಲಾಗಿದೆ.
ತೀರ್ಥಹಳ್ಳಿಯ ವಲಯ ಅರಣ್ಯ ಅಧಿಕಾರಿ ಡಾಕ್ಟರ್ ಲೋಕೇಶ್ ಎಸ್. ಎಲ್. ಅವರನ್ನು ಕೋಲಾರ ಜಿಲ್ಲೆಯ ಮುಳಬಾಗಿಲು ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ತೀರ್ಥಹಳ್ಳಿಗೆ ಸಂಜಯ್ .ಬಿ. ಎಸ್. ನಗರ ವಲಯದಿಂದ ವರ್ಗಾವಣೆ ಮಾಡಲಾಗಿದೆ.
ಇದನ್ನು ಓದಿದ್ದೀರಾ? ತುಮಕೂರು | ಸಿನಿಮೀಯ ರೀತಿ ಕುಖ್ಯಾತ ಆರೋಪಿಯನ್ನು ಬಂಧಿಸಿದ ಹೆಡ್ ಕಾನ್ಸ್ಟೇಬಲ್; ವ್ಯಾಪಕ ಶ್ಲಾಘನೆ
ತೀರ್ಥಹಳ್ಳಿಯಲ್ಲಿ ಈ ಹಿಂದೆ ವಲಯ ಅರಣ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ, ಅಂದಿನ ನ್ಯಾಯಾಧೀಶರಾದ ಸಂದೀಪ್ ಸಾಲಿಯಾನ ಅವರೊಂದಿಗೆ ಸೇರಿಕೊಂಡು ತುಂಗಾ ಕಾಲೇಜು ಆವರಣ, ಪ್ರವಾಸಿ ಮಂದಿರ, ಕುಶಾವತಿ ನೆಹರೂ ಪಾರ್ಕ್, ಎಡೇಹಳ್ಳಿ ಕೆರೆಯ ಮೇಲ್ಭಾಗದ ಅಬ್ದುಲ್ ಕಲಾಂ ಉದ್ಯಾನವನ ಮುಂತಾದ ಹತ್ತಾರು ಕಡೆಯಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಇಂದಿಗೂ ಗಿಡಗಳನ್ನು ಸಂರಕ್ಷಣೆಯಾಗಿ ಮಾದರಿಯಾಗಿದ್ದ ಮಧುಸೂದನ್ .ಎ .ರವರನ್ನು ತೀರ್ಥಹಳ್ಳಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸರ್ಕಾರ ವರ್ಗಾವಣೆ ಮಾಡಿ ಆದೇಶಿಸಿದೆ.
