ಶಿವಮೊಗ್ಗ | ಸೊರಬದಲ್ಲಿ ಅಂಬೇಡ್ಕರ ಉತ್ಸವ ಹಾಗೂ “ಅರಿವೇ ಅಂಬೇಡ್ಕರ” ವಿಶೇಷ ಸಂಚಿಕೆ ಬಿಡುಗಡೆ

Date:

Advertisements

ಸೊರಬ ತಾಲೂಕಿನ ಹೊಳೆಮರೂರಿನಲ್ಲಿ ಅಂಬೇಡ್ಕರ್ ಉತ್ಸವ ಮತ್ತು ಅಂಬೇಡ್ಕರ್ ಪ್ರತಿಮೆ ಅನಾವರಣ ಹಾಗೂ ಈದಿನ ಡಾಟ್ ಕಾಮ್ ಹೊರ ತಂದಿರುವ “ಅರಿವೇ ಅಂಬೇಡ್ಕರ” ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಹೊರಾಟಗಾರರು, ಪ್ರಗತಿಪರ ಸಂಘಟನೆಗಳ ತಾಲೂಕ್ ಸಂಚಾಲಕರಾದ ರಾಜಪ್ಪ ಮಾಸ್ಟರ್ ಅಂಬೇಡ್ಕರ್ ಪ್ರತಿಮೆ ಅನಾವರಣ ಮಾಡುವ ಮೂಲಕ ಕಾರ್ಯಕ್ರಮದ ಉದ್ಘಾಟನೆಗೆ ಚಾಲನೆ ನೀಡಿದರು.

1001535388

ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ, ನವದೆಹಲಿ ಮತ್ತು ನಿವೃತ್ತ ಜನಸಂಪರ್ಕ ಅಧಿಕಾರಿ, ಕೈಗಾ, ಸಂಚಾಲಕರಾದ ಸುಭಾಷ್ ಕಾನಡೆ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಕಾರ್ಯಕ್ರಮದ ಪ್ರಾಸ್ತವಿಕ ನುಡಿಗಳನ್ನು ಪರಮೇಶ್ವರ್ ಕೆ ಆಲಳ್ಳಿ ನೆರವೇರಿಸಿದರು.

Advertisements

ಲೇಖಕರು, ನಿವೃತ್ತ ಉಪನ್ಯಾಸಕರು. ಸಹಯಾನದ ಮಾಧವಿ ಭಂಡಾರಿ ಕೆರೆಕೋಣರಿಂದ ಅಂಬೇಡ್ಕರ್ ಕುರಿತಾದ ಉಪನ್ಯಾಸ ವಹಿಸಿಕೊಂಡು ಅಂಬೇಡ್ಕರವರ ವಿಚಾರ ಧಾರೆ, ಸಂವಿಧಾನದ ಮಹತ್ವ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದ್ದು ನೆರದಿದ್ದವರ ಮನ ಮಿಡಿವಂತೆ ಅಂಬೇಡ್ಕರರವರ ಕುರಿತಾಗಿ ಮಾಹಿತಿ ನೀಡಿದರು.

ಇದೆ ಸಂದರ್ಭದಲ್ಲಿ ಈದಿನ ಡಾಟ್ ಕಾಮ್ ಹೊರ ತಂದಿರುವ “ಅರಿವೇ ಅಂಬೇಡ್ಕರ” ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಳೆಮೂರೂರಿನ ಹಿರಿಯ ಮಹಿಳೆಯಾದ ಶ್ರೀಮತಿ ಕೆರಿಯಮ್ಮ ಬೋರ್ಕರ್ ವಹಿಸಿದ್ದರು.ಈ ಒಂದು ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಮುಖ್ಯರುವಾರಿಯಾಗಿ ಚಂದ್ರಪ್ಪ ಹೊಳೆಮರೂರು, ಮೋಹನ್ ಕಾನಡೆ,ˌ ದಿಲೀಪ್,ˌ ಶಶಾಂಕ,ˌ ಅಖಿಲೇಶ ಮುಂತಾದವರು ಸಕ್ರಿಯವಾಗಿ ಪಾಲ್ಗೊಂಡರು. ಅವಿನಾಶ್ ಹೊಳೆಮರೂರು ಕಾರ್ಯಕ್ರಮ ನಿರ್ವಹಿಸಿದರು.

ನಂದನ್ ಬೋರ್ಕರ್ˌ ಲಕ್ಷ್ಮಣ್ ಬೋರ್ಕರ್ˌ ಹರ್ಷ ಐಗೋಡು. ಕೇಶವ್ ಕಾನಡೆˌ ಚಂದನ್ ನಾಯ್ಕˌ ಮುಮತಿ ಕಿರಣ್ ಕುಮಾರ್ ದಂಪತಿಗಳು ಹಾಗೂ ಮತ್ತಿತರ ವಿವಿಧ ಸಂಘಟನೆಗಳ ಪದಾದಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X