ಶಿವಮೊಗ್ಗ | ಸೂಳೆಬೈಲ್ ನಲ್ಲಿ ಮೂಲಭೂತ ಸೌಕರ್ಯಕ್ಕಾಗಿ ಆಯುಕ್ತರಿಗೆ ಮನವಿ

Date:

Advertisements

ಶಿವಮೊಗ್ಗ ಸೂಳೆಬೈಲ್ ಅಬ್ದುಲ್ ಕಲಂ ನಗರ ಬಲ ಭಾಗದ ಬಾಡಾವಣೆಗೆ ಜರೂರಾಗಿ ಮೂಲ ಭೂತ ಸೌಲಭ್ಯ ಕಲ್ಪಿಸಿಕೊಡುವಂತೆ,ಶಿವಮೊಗ್ಗ ನಗರದ ವಾರ್ಡ್ ನಂ.35. ಸೂಳೆಬೈಲ್ ಅಬ್ದುಲ್ ಕಲಂ ನಗರ, ಬಲಭಾಗದಲ್ಲಿ ಸುಮಾರು 600 ರಿಂದ 800 ಕುಟುಂಬಗಳು ವಾಸವಾಗಿದ್ದು,

ಇಲ್ಲಿ ವಾಸವಾಗಿರುವ ಕುಟುಂಬಗಳು ಮಧ್ಯಮ ಮತ್ತು ಬಡ ಕುಟುಂಬಕ್ಕೆ ಸೇರಿದವರಾಗಿದ್ದು ಇವರುಗಳು ಓಡಾಡಲು ಸರಿಯಾದ ರಸ್ತೆ ಇರುವುದಿಲ್ಲ ಅಂದರೆ ಮಣ್ಣು ರಸ್ತೆಯಾಗಿದ್ದು, ಕೆಸರಿನಿಂದ ಕೂಡಿರುತ್ತದೆ.

1001910286

ಸದರಿ ಬಡಾವಣೆಯ ನಿವಾಸಿಗಳು ಸುಮಾರು 20-30 ವರ್ಷಗಳಿಂದ ವಾಸವಾಗಿದ್ದರು ಸಹ ಯಾವುದೇ ಭೂಲಭೂತ ಸೌಲಭ್ಯ ಹೊಂದಿರುವುದಿಲ್ಲ. ಇದರಿಂದ ಮಕ್ಕಳು, ಮಹಿಳೆಯರು, ವೃದ್ಧರು ಪ್ರತಿನಿತ್ಯ ಈ ರಸ್ತೆಯಲ್ಲಿ ಓಡಾಡಲು ತುಂಬಾ ತೊಂದರೆ ಆಗಿರುತ್ತದೆ. ಹಾಗೂ ಚರಂಡಿಯ ನೀರು ಹರಿಯಲು ಸೂಕ್ತ ವ್ಯವಸ್ಥೆ ಇಲ್ಲದೆ ಪ್ರಯುಕ್ತ ಚರಂಡಿಯಲ್ಲಿ ನೀರು ನಿಂತು ಕ್ರಿಮಿ ಕೀಟಗಳು ಉಂಟಾಗುತ್ತಿದ್ದು ಮಾರಣಾಂತಿಕ ಖಾಯಿಲೆ ಬರುವ ಸಾಧ್ಯತೆ ಇರುತ್ತದೆ.

Advertisements

ಹೀಗಾಗಿ ಮಹಾನಗರ ಪಾಲಿಕೆಯಲ್ಲಿ ಸಂಪರ್ಕ ಇದ್ದರು ಸಹ ಪ್ರತಿನಿತ್ಯ ನೀರು ಬಾರದ ಕಾರಣ ನೀರಿನ ಕೊರತೆ ಸಹ ಉಂಟಾಗಿರುತ್ತದೆ.ಆದ್ದರಿಂದ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾದ ತಾವು ನೇರವಾಗಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಸೂಳೆಬೈಲ್ ಅಬ್ದುಲ್ ಕಲಂ ನಗರ ಬಲ ಭಾಗದ ಬಡಾವಣೆಗೆ ತಮ್ಮ ಇಲಾಖೆಯಿಂದ ಜರೂರಾಗಿ ರಸ್ತೆಯನ್ನು ಹಾಗೂ ಎರಡು ಬದಿ ಬಾಕ್ಸ್ ಚರಂಡಿ ವ್ಯವಸ್ಥೆ ಹಾಗೂ 24×7 ಯೋಜನೆಯಡಿ ನೀರಿನ ಸೌಲಭ್ಯ ಹಾಗೂ ಯು.ಜಿ.ಡಿ ಸೌಲಭ್ಯವನ್ನು ಕಲ್ಪಿಸಿಕೊಡಬೇಕಾಗಿದೆ ಎಂದು,

ಈ ಮೂಲಕ ಅಬ್ದುಲ್ ಮುಜೀಬ್ ಕಾಂಗ್ರೇಸ್ ಅಧ್ಯಕ್ಷರು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಬೀದರ್‌ | ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ : ಎರಡು ದಿನ ರಾಷ್ಟ್ರೀಯ ವಿಚಾರ ಸಂಕಿರಣ

ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ...

ಶಿರಸಿ | NWKRTC ವತಿಯಿಂದ ಅಪ್ರೆಂಟಿಸ್ ಹುದ್ದೆಗಳಿಗೆ WALK-IN-INTERVIEW

ಕರ್ನಾಟಕ ರಾಜ್ಯ ವಾಯುವ್ಯ ಸಾರಿಗೆ ಸಂಸ್ಥೆ, ಶಿರಸಿ ವಿಭಾಗದಲ್ಲಿ ವಿವಿಧ ಅಪ್ರೆಂಟಿಸ್...

Download Eedina App Android / iOS

X