ಶಿವಮೊಗ್ಗ | ಲಗಾನ್ ಸ್ಕೈಲೇನ್ ಸಂಸ್ಥೆಯ ಅಕ್ರಮ ಕಟ್ಟಡ ನಿರ್ಮಾಣ ಆರೋಪ : ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪರಿಶೀಲನೆ

Date:

Advertisements

ಶಿವಮೊಗ್ಗ ನಗರದ ಗೋಪಾಳದಲ್ಲಿರುವ ಲಗಾನ್ ಸ್ಕೈಲೇನ್ ಸಂಸ್ಥೆಯು ನಡೆಸುತ್ತಿರುವ ಕಟ್ಟಡ ನಿರ್ಮಾಣ ಗೊಂದಲದಿಂದ ಕೂಡಿದೆ. ಇಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಿಯಾ ದೊಡ್ಡಗೌಡರು ಮತ್ತು ಆರ್ ಐ ಅವರ ಸಮ್ಮುಖದಲ್ಲಿ ಅಳತೆ ನಡೆದಿದೆ. ಅಳತೆ ನಡೆದ ವೇಳೆ ಲಗಾನ್ ಸ್ಕೈಲೈನ್ ಮಾಲೀಕರಾಗಲಿ, ಪಾರ್ಟರ್ನ್ ಆಗಲಿ ಅಥವಾ ಜಿಪಿಎ ಹೋಲ್ಡರ್ ಆಗಲಿ ಜಾಗದಲ್ಲಿ ಹಾಜರಾಗದೆ ಇರುವುದು ಪ್ರಕರಣ ಕುತೂಹಲಕ್ಕೆ ಕಾರಣವಾಗಿದೆ.

ಲಗಾನ ಸ್ಕೈಲೈನ್ ಸಂಸ್ಥೆಯು ಕೆರೆ ಬಫರ್ ಜೋನ್ ನನ್ನ ಒತ್ತುವರಿ ಮಾಡಿಕೊಂಡು ಸುಮಾರು 26 ಅಡಿ ಆಳ ಗುಂಡಿ ತೋಡಿ ಮಣ್ಣನ್ನ ಮಾರಾಟ ಮಾಡಿರುವ ಬಗ್ಗೆ ಮತ್ತು ಅಲ್ಲಿ ಪತ್ತೆಯಾದ ಕಲ್ಲು ಪತ್ತೆಯಾದರೂ ಸಂಬಂಧಪಟ್ಟ ಇಲಾಖೆಗೆ ಮಾಹಿತಿಯೂ ತಿಳಿಸಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.

1001958359

ಈ ಆರೋಪದ ಹಿನ್ನಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಇಂದು ಅಳತೆ ನಡೆದಿದೆ. ಅಳತೆ ನಡೆದ ವೇಳೆ ದೂರುದಾರರು, ಸಂಸ್ಥೆಯ ಇಂಜಿನಿಯರ್ ಹಾಜರಿದ್ದಿದ್ದು ಕಂಡು ಬಂದರೆ ಮಾಲೀಕರಾಗಲಿ, ಪಾಲುದಾರರಾಗಲಿ ಅಥವಾ ಜಿಪಿಎ ಹೋಲ್ಡರ್ ಆಗಲಿ ಹಾಜರಿರಲಿಲ್ಲ. ಸಂಸ್ಥೆಯ ಮಾಲೀಕರಿಗೆ 15 ದಿನಗಳ ಹಿಂದೆ ನೋಟೀಸ್ ನೀಡಿ ಸರ್ವೆಗೆ ಹಾಜರಾಗುವಂತೆ ಸೂಚಿಸಿದರೂ ಮಾಲೀಕರು ಹಾಜರಾಗದಿರುವುದು ಕುತೂಹಲ ಮೂಡಿಸಿದೆ.

Advertisements

ಇದು ಒಂದು ರೀತಿಯ ಮಾಲೀಕರ ನಿರ್ಲಕ್ಷತನವೇ ಎಂದು ಹೇಳಬಹುದಾಗಿದೆ. ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಏನು ಮಾಡಲಿದೆ ಕಾದು ನೋಡಬೇಕಿದೆ. ಮಾಲೀಕರ ನಿರ್ಲಕ್ಷತನವನ್ನ ಮಾಫಿ ಮಾಡಿ ಕಾನೂನು ಉಲ್ಲಂಘಿಸಿ ನಿರ್ಮಿಸಲಾಗುತ್ತಿರುವ ಕಟ್ಟಡಕ್ಕೆ ಮಣೆ ಹಾಕುತ್ತಾರೋ ಅಥವಾ ಕಾನೂನು ಉಲ್ಲಂಘಿಸಿ ನಿರ್ಮಿಸುವವರಿಗೆ ಖಡಕ್ ವಾರ್ನಿಂಗ್ ನೀಡುತ್ತದೋ ಕಾದು ನೋಡಬೇಕಿದೆ.

ಸರ್ವೆ ನಂಬರ್ 15 ರಲ್ಲಿ ಕೆರೆ ಬರಲಿದ್ದು ಈ ಕೆರೆಯನ್ನ 2004 ರಲ್ಲಿ ಡಿಸಿ ನೋಟಿಫಿಕೇಷನ್ ಹಾಕಿ ಕೆರೆಯ ಜಾಗವನ್ನ ಕ್ಲಬ್ ವೊಂದಕ್ಕೆ, ಸಾರ್ವಜನಿಕ ರಸ್ತೆಗೆ ಅನುಕೂಲವಾಗುವಂತೆ ಕೆರೆ ಜಾಗವನ್ನ ಒತ್ತುವರಿ ಮಾಡಿಕೊಳ್ಳಲಾಗಿದೆ. ಆದರೆ ಅದರ ಬಫರ್ ಜೋನ್ ಕಬಳಿಸುವಂತಿಲ್ಲ ಎಂಬ ನಿಯಮವಿದೆ. ದಿಶಾಂಕ್ ನ್ನ ನಿರ್ಮಾಣಗೊಳ್ಳುತ್ತಿರುವ ಕಟ್ಟಡದಲ್ಲಿ ನಿಂತು ಒಪನ್ ಮಾಡಿದರೆ ಸುಮಾರು 10 ಅಡಿ ಕೆರೆ ದಂಡೆಯ ಜಾಗವೇ ಒತ್ತುವರಿಯಾಗಿದೆ. ಇನ್ನು ಬಫರ್ ಜೋನ್ ಬಿಟ್ಟಿಲ್ಲವೆಂಬುದು ದೂರುದಾರರ ಆರೋಪವಾಗಿದೆ.

ಇಲ್ಲಿನ ಮಣ್ಣನ್ನ ಪಕ್ಕದಲ್ಲಿ ಹಾಕಲಾಗಿವೆ ಎಂದು ಅಲ್ಲಿನ ಇಂಜಿನಿಯರ್ ತೋರಿಸುತ್ತಾನೆ. ಜಾಗದಲ್ಲಿ ತೋಡಲಾದ ಗುಂಡಿಗೂ ಅದರ ಪಕ್ಕದಲ್ಲಿಯ ಮಣ್ಣು ಸಂಗ್ರಹಕ್ಕೂ ಅಜಗಜಾಂತರ ವ್ಯತ್ಯಾಸ ಕಂಡುಬರುತ್ತಿದೆ. ಒಟ್ಟಿನಲ್ಲಿ ಕಾನೂನು ಬಾಹಿರ ಕಟ್ಟಡ ನಿರ್ಮಾಣವಾಗುತ್ತಿದೆ ಎಂಬುದು ದೂರುದಾರರ ಆರೋಪವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X