ಶಿವಮೊಗ್ಗ | ಸ್ಮಾರ್ಟ್ ಫೋನಿನ ದುರ್ಬಳಕೆ ಅನಾಹುತಕ್ಕೆ ದಾರಿ;ಅನಿಲ್ ಭೂಮರೆಡ್ಡಿ

Date:

Advertisements

ಪ್ರತಿ ದಿನ ಸ್ಮಾರ್ಟ್ ಫೋನಿನ ದುರ್ಗ್ಬಳಕೆ ಹೆಚ್ಚುತ್ತಿದೆ. ತಂತ್ರಜ್ಞಾನ ಮುಂದುವರೆದ ಹಾಗೆ ಆಕರ್ಷಣೆಗೆ ಒಳಗಾಗಿ ಬೇಡವಾದ ವೆಬ್ ಸೈಟ್ಗಳನ್ನು ಓಪನ್ ಮಾಡಿ ನಾವಾಗಿಯೇ ಸಿಕ್ಕಿಹಾಕಿಕೊಳ್ಳುತ್ತೇವೆ,ಇತ್ತೀಚಿಗೆ ತುಂಬಾ ಹೆಚ್ಚಾಗುತ್ತಿದೆ ಪ್ರತಿದಿನ ಶಿವಮೊಗ್ಗ ಜಿಲ್ಲೆಯಲ್ಲಿ ನಾಲಕ್ಕರಿಂದ ಐದು ಕೇಸುಗಳು ದಾಖಲಾಗುತ್ತಿವೆ ಎಂದು ಆಡಿಷನಲ್ ಎಸ್ಪಿ ಭೂಮ್ ರೆಡ್ಡಿ ಹೇಳಿದರು.

ಕಾಯ್ದೆ ದಾಖಲಾಗುವಲ್ಲಿ ಶಿವಮೊಗ್ಗ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳಾದ ಅನಿಲ್ ಬೊಮರೆಡ್ಡಿ ಅವರು ನುಡಿದರು ರಾಷ್ಟ್ರೀಯ ಶಿಕ್ಷಣ ಸಮಿತಿಯ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಹೆನ್ರಿ ಡುನಂಟ್ ಹುಟ್ಟುಹಬ್ಬ ಹಾಗು ವಿಶ್ವ ರೆಡ್ ಕ್ರಾಸ್ ದಿನಾಚರಣೆ ಅಂಗವಾಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ನಾವು ಮೊಬೈಲ್ ಮುಖಾಂತರ ಒಟಿಪಿ ಗಳನ್ನು ಹಾಗೂ ಫೇಸ್ಬುಕ್ ಇನ್ಸ್ಟಾಗ್ರಾಮ್ ನಲ್ಲಿ ನಮ್ಮ ಖಾಸಗಿ ಮಾಹಿತಿಗಳನ್ನು ಹಂಚಿಕೊಳ್ಳುವುದರಿಂದ ಸಾಕಷ್ಟು ಅನಾಹುತಗಳು ಇಂದಿಗೂ ನಡೆಯುತ್ತಾ ಇವೆ ಆದ್ದರಿಂದ ಆದಷ್ಟು ವಾಟ್ಸಪ್ ಸಂದೇಶಗಳನ್ನು ಮೊಬೈಲ್ ಮಾಹಿತಿಗಳನ್ನು ಪರಾಮರ್ಶಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನುಡಿದರು.

Advertisements

ಇದೇ ಸಂದರ್ಭದಲ್ಲಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ಎಫ್ ಪಿ ದಿನೇಶ್ ಮಾತನಾಡುತ್ತ ಮನು ಕುಲದ ಸೇವೆಯಲ್ಲಿ ರೆಡ್ ಕ್ರಾಸಿನ ಕೊಡುಗೆ ತುಂಬಾ ಅಪಾರವಾಗಿದೆ ಹೆನ್ರಿ ಡುನಂಟ್ ರವರು ಸ್ಥಾಪಿಸಿದ ರೆಡ್ ಕ್ರಾಸ್ ಪ್ರಪಂಚಾದ್ಯಂತ ಮಾನವೀಯ ಸೇವೆಗಳ ಮುಖಾಂತರ ತನ್ನದೇ ಆದ ಛಾಪು ಮೂಡಿಸಿದ ಯುದ್ಧ ಹಾಗೂ ಪ್ರಕೃತಿ ವಿಕೋಪ. ಕರೋನದಂತ ಸಂದರ್ಭದಲ್ಲಿ ಸಹಾಯ ಹಸ್ತ ನೀಡುವುದರ ಜೊತೆಗೆ ಯುವ ಜನರಿಗೆ ಜೀವನ ಕೌಶಲ್ಯ ತರಬೇತಿ ನೀಡುವುದರ ಮುಖಾಂತರ ಅವರಿಗೆ ಬದುಕನ್ನು ಕಟ್ಟಿಕೊಡುತ್ತದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಎರಡು ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ!ದಿನೇಶ್ ರೆಡ್ ಕ್ರಾಸ್ ಸಂಸ್ಥೆ ನಡೆದು ಬಂದ ದಾರಿ ಹಾಗೂ ಸಮುದಾಯದಲ್ಲಿ ಈಗಾಗಲೇ ಸಲ್ಲಿಸಿರುವ ಸೇವೆಗಳ ಬಗ್ಗೆ ವಿವರ ನೀಡಿದರು, ಮುಖ್ಯ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಿದರು. ವೇದಿಕೆಯಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿಯ ನಿರ್ದೇಶಕರಾದ ಅಶ್ವತ್ ನಾರಾಯಣ್ ಶೆಟ್ಟಿ ಅವರು ಮಾತನಾಡಿ ಶುಭಾಶಯ ತಿಳಿಸಿದರು.

ರೆಡ್ ಕ್ರಾಸ್ ನಿರ್ದೇಶಕ ವಸಂತ್ ಹೋಬಳಿದಾರ್ ಮಾತನಾಡುತ್ತಾ ರೆಡ್ ಕ್ರಾಸ್ ಸಂಸ್ಥೆಯ ಈ ವರ್ಷದ ಧ್ಯೇಯ ಮಾನವೀಯತೆಯ ನೆಲೆಯಲ್ಲಿ ಸೇವೆ ಮಾಡುವ ಏಕೈಕ ಸಂಸ್ಥೆ ರೆಡ್ ಕ್ರಾಸ್ ಎಂದು ನುಡಿದರು ವೇದಿಕೆಯಲ್ಲಿ ರೆಡ್ ಕ್ರಾಸ್ ಅಜೀವ ಸದಸ್ಯರಾದ ಶ್ರೀ ಜಿ ವಿಜಯಕುಮರ್, ಎನ್ ಗೋಪಿನಾಥ, ಪ್ರೊಫೆಸರ್ ಕೆ ಎಂ ನಾಗರಾಜ್, ರೆಡ್ ಕ್ರಾಸ್ ನಿರ್ದೇಶಕ ನವೀನ್. ಸೌಪರ್ಣಿಕಾ, ಉಮೇಶ್, ಶೃತಿ ಕೆ. ಹಾಗೂ ವಿವಿಧ ಕಾಲೇಜುಗಳಿಂದ ರೆಡ್ ಕ್ರಾಸ್ . ಎನ್ಎಸ್ಎಸ್. ವಿದ್ಯಾರ್ಥಿಗಳು ಉಪಸ್ಥಿತರಿದ್ದರು

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X