ದ್ರೋಹ, ವಂಚನೆ ಪ್ರಕರಣದಲ್ಲಿ ಆರೋಪಿತರಾಗಿದ್ದ ಬೊಮ್ಮನಕಟ್ಟೆಯ ಜಯಮ್ಮ ಮತ್ತು ವಂದನಾ ಟಾಕೀಸ್ ಕೆ.ಆರ್.ಪುರಂ ರಸ್ತೆ ವಾಸಿ ಮಾರುತಿಯನ್ನು ನ್ಯಾಯಾಲಯ 2 ವರ್ಷದ ಸಾದಾ ಕಾರಾಗೃಹ ವಾಸ ಹಾಗೂ ತಲಾ 22 ಸಾವಿರ ₹ ಗಳ ದಂಡ ವಿಧಿಸಿ ಆದೇಶಿಸಿದೆ.
2018 ನೇ ಸಾಲಿನಲ್ಲಿ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದ್ರೋಹ, ವಂಚನೆ ಗೆ ಸಂಬಂಧಿಸಿದಂತೆ ಗುನ್ನೆ ಸಂಖ್ಯೆ 0079/2018 406, 420, 323, 342,504, 506, 114 ಸಹಿತ 34 ಐಪಿಸಿ ಪ್ರಕರಣ ದಾಖಲಾಗಿರುತ್ತದೆ.
ಆಗಿನ ತನಿಖಾಧಿಕಾರಿ ಗಳಾದ ದೇವರಾಜ ಜಿ. ಪೊಲೀಸ್ ಇನ್ಸಪೆಕ್ಟರ್, ಮಹಿಳಾ ಠಾಣೆ* ರವರು ತನಿಖೆಯನ್ನು ಪೂರ್ಣಗೊಳಿಸಿ ಘನ 2 ನೇ ಜೆ.ಎಂ.ಎಫ್.ಸಿ ನ್ಯಾಯಾಲಯ, ಶಿವಮೊಗ್ಗಕ್ಕೆ ಆರೋಪಿತರ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿರುತ್ತಾರೆ.

ಘನ ಸರ್ಕಾರದ ಪರವಾಗಿ ಕಿರಣ್ ಕುಮಾರ್ ಸರ್ಕಾರಿ ಅಭಿಯೋಜಕರು ಪ್ರಕರಣದ ವಾದವನ್ನು ಮಂಡಿಸಿದ್ದು ಘನ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪಿತರಾದ ಶ್ರೀಮತಿ ಜಯಮ್ಮ, 67 ವರ್ಷ, ಬೊಮ್ಮನಕಟ್ಟೆ, ಶಿವಮೊಗ್ಗ ಮತ್ತು ಮಾರುತಿ, 49 ವರ್ಷ, ವಂದನಾ ಟಾಕೀಸ್, ಕೆ. ಆರ್. ಪುರಂ, ಶಿವಮೊಗ್ಗ ಇವರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ದಿನಾಂಕ 22 ಏಪ್ರಿಲ್ 2025 ನ್ಯಾಯಾಧೀಶರಾದ ಶ್ರೀಮತಿ ಶಾರದಾ ಕೊಪ್ಪದರವರು ಆರೋಪಿತರಿಗೆ ತಲಾ 02 ವರ್ಷ ಸಾದಾ ಕಾರವಾಸ ಹಾಗೂ ತಲಾ 22,000/- ರೂ ದಂಡ ದಂಡ ಕಟ್ಟಲು ವಿಫಲವಾದಲ್ಲಿ 06 ತಿಂಗಳ ಸಾದಾ ಕಾರವಾಸ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ.