ಒಳ ಮೀಸಲಾತಿಯನ್ನು ಎಥವತ್ತಾಗಿ ಜಾರಿ ಮಾಡಬೇಕೆಂದು ಒತ್ತಾಯಿಸಿ ಶಿರಾ ನಗರದ ಡಾ. ಬಿಆರ್ ಅಂಬೇಡ್ಕರ್ ಅವರ ಪ್ರತಿಮೆಯಿಂದ ಹೊರಟ ಕಾಲ್ನಡಿಗೆ ಜಾಥಾದ ತಂಡ ದೊಡ್ಡಆಲದ ಮರದ ಬಳಿ ವಾಸ್ತವ್ಯ ಹೂಡಿ ಸೋಮವಾರ ಎರಡನೇ ದಿನದ ಕಾಲ್ನಡಿಗೆ ಜಾಥಾ ಪ್ರಾರಂಭವಾಯಿತು.
ಜಾಥಾದಲ್ಲಿ ಭಾಗವಹಿಸಿ ಮಾತನಾಡಿದ ಮಾದಿಗ ಮಾಸದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್ ಆರ್ ರಂಗನಾಥ್, ಒಳ ಮೀಸಲಾತಿಯ ಬಗ್ಗೆ ಶಿರಾ ಕ್ಷೇತ್ರದ ಶಾಸಕರಾದ ಟಿಬಿ ಜಯಚಂದ್ರ ಅವರಾಗಲಿ ಮತ್ತು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಗೋವಿಂದ ಕಾರಜೋಳರವರಾಗಲಿ ಈವರೆಗೂ ಕಾಲ್ನಡಿಗೆ ಜಾಥಾದ ತಂಡವನ್ನು ಸಂಪರ್ಕಿಸುವುದಾಗಲಿ ಅಥವಾ ನಿಮ್ಮ ಪರ ಇದ್ದೇವೆ ಎಂದು ಹೇಳುವುದಾಗಲಿ ಮಾಡಿಲ್ಲ ಎಂದರು.
ಶಿರಾ ವಿಧಾನಸಭಾ ಕ್ಷೇತ್ರದ ಮತದಾರರ ಪೈಕಿ ಮಾದಿಗ ಸಮುದಾಯದ ಮತಗಳ ನಿರ್ಣಾಯಕ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷದ ನಾಯಕರುಗಳು ಒಳ ಮೀಸಲಾತಿ ಹೋರಾಟಗಾರರಿಗೆ ಈವರೆಗೂ ಬೆಂಬಲ ಸೂಚಿಸಿಲ್ಲ. ಇವರೆಲ್ಲರೂ ಮಾದಿಗ ಸಮುದಾಯದ ಹೋರಾಟಗಾರರ ಕೆಂಗಣ್ಣಿಗೆ ಮೂರು ಪಕ್ಷಗಳು ಗುರಿಯಾಗುತ್ತಾರೆ. ಮುಂದೆ ಬರುವ ಉಪಚುನಾವಣೆಯಲ್ಲಿ ಚನ್ನಪಟ್ಟಣ, ಸಂಡೂರು, ಶಿಗ್ಗಾವಿ ಹಾಗೂ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ರಾಜ್ಯ ವ್ಯಾಪ್ತಿ ಮೂರು ಪಕ್ಷಗಳ ವಿರುದ್ಧ ತಿರುಗಿ ಬೀಳುವುದು ನಿಶ್ಚಿತ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ದಲಿತಪರ ಹೋರಾಟಗಾರ ಜಿ ಎಸ್ ಮಂಜುನಾಥ್, ಮಾಜಿ ನಗರಸಭಾ ಸದಸ್ಯ ಕೆ ಮಂಜುನಾಥ್, ಎನ್ ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.
