ಸೊರಬ, ಯಾವುದೇ ಪಕ್ಷಕ್ಕೆ ಸೇರಿದರೂ, ತಾರತಮ್ಯ ಮಾಡದೇ ಅಭಿವೃದ್ದಿ ಕಾರ್ಯಗಳನ್ನು ಮಾಡುವುದು ನಮ್ಮ ಕರ್ತವ್ಯ. ಪಕ್ಷಾತೀತವಾಗಿ ಸಮಸ್ಯೆಳನಗಳನ್ನು ಯಾರೇ ಗಮನಕ್ಕೆ ತಂದರೂ ಬಗೆಹರಿಸಲಾಗುವುದು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.
ಸೋರಬ ಬೆಂಗಳೂರು ನಿವಾಸಿಗಳ ‘ಟೀಮ್ ಸಮ್ಮಿಲನ’ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಾನ್ಮಾನಿಸಿ ಅವರು ಮಾತನಾಡಿದರು.
‘ಸೋರಬ ಕ್ಷೇತ್ರದ ಅಭಿವೃದ್ದಿಗಾಗಿ ಅನೇಕ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ನಮ್ಮ ಕ್ಷೇತ್ರದ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸುವ ಉದ್ದೇಶದಿಂದ ಎಲ್ಲ ಕೆಲಸವನ್ನು ಬದಿಗೊತ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ಇದೊಂದು ಸ್ಮರಣೀಯ ಕಾರ್ಯಕ್ರಮ. ಇದನ್ನು ಹೀಗೆಯೇ ಮುಂದುವರಿಸಲಾಗುವುದು’ ಎಂದುರು.
‘ನಾವು ಎಷ್ಟು ಒಳ್ಳೆಯದನ್ನು ಮಾಡಿದರೂ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಬಿಂಬಿಸುತ್ತಾರೆ. ಇತ್ತೀಚೆಗೆ ಸಿಗಂದೂರು ವಿಚಾರದಲ್ಲೂ ಹಾಗೆ ಆಯಿತು. ನಮ್ಮ ಬಗ್ಗೆ ಕೆಟ್ಟದಾಗಿ ಮಾತಾಡುವವರಿಗೆ ಮುಂದೆ ಸಿಗಂದೂರು ಚೌಡೇಶ್ವರಿಯೇ ಬುದ್ದಿ ಕಲಿಸುತ್ತಾಳೆ’ ಎಂದರು.
ಕಾರ್ಯಕ್ರಮದಲ್ಲಿ 25 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ ₹15 ಸಾವಿರ ನಗದು, ಫಲಕ ನೀಡಿ ಗೌರವಿಸಲಾಯಿತು.ಸೊರಬ ನಿವಾಸಿಗಳ ಟೀಮ್ ಸಮ್ಮಿಲನದ ಮುಖ್ಯಸ್ಥ ಏಕಾಂತಪ್ಪ ಕುಮ್ಮೂರು, ವಕೀಲ ಕೇಶವಮೂರ್ತಿ ಹಾಳಗಲೆ, ದತ್ತಾತ್ರೇಯ ಬಿದರಗೆರೆ, ಕಲ್ಯಾಣ ಕುಮಾರ ತವನಂದಿ, ಶೇಖರಪ್ಪ ಹರೂರು, ಮುಕುಂದ ಹಿರೇಇಡಗೋಡು, ಗಣೇಶ್ ಹುಲ್ತಿಕೂಪ್ಪ, ಗಣಪತಿ ಹಳೆ ಸೋರಬ, ಪೀತಾಂಬರ ಕೆರೆಕೋಪ್ಪ ವಿನಾಯಕ ಗುಡ್ಡೆಮನೆ ಕೆ. ಸಿ. ಯಶವಂತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.