ಅಖಿಲ ಭಾರತೀಯ ಗ್ರಾಹಕ ಪಂಚಾಯತಿ ಮೈಸೂರು ಘಟಕದ ವತಿಯಿಂದ ಮೈಸೂರು ಮಹಾನಗರ ಪಾಲಿಕೆಗೆ ಭೇಟಿ ನೀಡಿ ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್ ಅವರಿಗೆ ಸಾವಿನಲ್ಲೂ ಸಂಪನ್ಮೂಲ ಕ್ರೂಡೀಕರಣ ಮಾಡುವುದನ್ನು ಕೈ ಬಿಟ್ಟು ಜನರ ಹಿತ ಕಾಪಾಡುವಂತೆ ಮನವಿ ಪತ್ರ ಸಲ್ಲಿಸಿದರು.
ಮೈಸೂರು ಬಡಾವಣೆಯ ನಾಗರೀಕರಿಗೆ ಮೂಲಭೂತ ಸೌಲಭ್ಯ ಜೊತೆಯಲ್ಲೆ ಜನನ ಮತ್ತು ಮರಣ ಸಂಧರ್ಭದಲ್ಲಿ ಅವಶ್ಯಕ ವ್ಯವಸ್ಥೆಯನ್ನ ಒದಗಿಸುವುದು ತೆರಿಗೆ ಸಂಗ್ರಹಿಸಿಸುವ ಮೈಸೂರು ಮಹಾನಗರ ಪಾಲಿಕೆ ಕರ್ತವ್ಯ. ಈಗಾಗಲೇ ಪ್ರತಿಯೊಂದು ಮನೆಯಿಂದ ವಾರ್ಷಿಕ ತೆರಿಗೆಯಲ್ಲಿ ₹150 ರೂಪಾಯಿಗಳ ಸೆಸ್ ಸ್ಮಶಾನ ನಿರ್ವಹಣೆಗೆಂದು ಸಂದಾಯ ಮಾಡಿಕೊಳ್ಳುತ್ತಿದೆ.
ನಗರಪಾಲಿಕೆ ಸ್ಮಶಾನದಲ್ಲಿ ನೀರಿನ ವ್ಯವಸ್ಥೆ, ವಿದ್ಯುತ್ ದೀಪ ಮತ್ತು ಸ್ವಚ್ಛತೆಯ ಬಗ್ಗೆ ಅಧಿಕಾರಿಗಳು ಭೇಟಿ ಮಾಡಿ ವರದಿ ಪಡೆದು ಅಭಿವೃದ್ಧಿಯ ಕೆಲಸಗಳು ಮಾಡದಿರುವುದು ಜನ ಸಾಮನ್ಯರ ಹಿಡಿ ಶಾಪಕ್ಕೆ ಕಾರಣವಾಗುತ್ತಿದೆ. ಸ್ಮಶಾನ ಅಭಿವೃದ್ಧಿ ಬಗ್ಗೆ ಚಿಂತಿಸದ ನಗರ ಪಾಲಿಕೆ ಜನನ, ಮರಣ ವಿಭಾಗದಲ್ಲಿ ಚಿತೆಯಲ್ಲಿ ಕಂತೆ ಕಂತೆ ಹೇಗೆ ಕಿತ್ತುಕೊಳ್ಳಬಹುದು ಎಂದು ಎಬಿಜಿಪಿ ಮುಖಂಡರು ಪ್ರಶ್ನಿಸಿದ್ದಾರೆ.
ಸ್ಮಶಾನಗಳಲ್ಲಿ ಹೆಣ ಸುಡಲು ( ಅಂತ್ಯ ಸಂಸ್ಕಾರ ) ಮಾಡಲು ₹500 ರೂಪಾಯಿಗಳನ್ನು ನಿಗಧಿಪಡಿಸಿರುವುದು ಮೈಸೂರಿಗರಿಗೆ ಆಗುತ್ತಿರುವ ಅನ್ಯಾಯ. ಸತ್ತವರ ಕುಟುಂಬದಿಂದಲೂ ಹಣ ಕೀಳುವ ಪರಿಸ್ಥಿತಿ ಪಾಲಿಕೆಯದ್ದು. ಯಾವ ಸೌಕರ್ಯ ಒದಗಿಸಲು ಸಾಧ್ಯ ಇಲ್ಲದೆ ಇದ್ದರು ವಸೂಲಿ ಮಾತ್ರ ನಿಲ್ಲುವುದಿಲ್ಲ.
ಜನ ಪ್ರತಿನಿಧಿಗಳೇ ಇಲ್ಲದ ನಗರಪಾಲಿಕೆಯಲ್ಲಿ ಅಧಿಕಾರಿಗಳ ದುರಾಲೋಚನೆ ಒಬ್ಬ ಬಡ ಸಾಮಾನ್ಯ ಕುಟುಂಬದ ಮೇಲೆ ಬರೆ ಹಾಕುವಂತಾಗಿದೆ. ಸಾವಿನಲ್ಲೂ ಸಂಪನ್ಮೂಲ ತೆಗೆದುಕೊಳ್ಳುತ್ತಿರುವುದು ನಗರ ಪಾಲಿಕೆಯ ಮಾನವೀಯತೆ ಹೀನ, ದುರಾಡಳಿತ, ಭ್ರಷ್ಟಾಚಾರದ ಕೈಗನ್ನಡಿಯಾಗಿದೆ. ಹಾಗಾಗಿ, ಈ ಕೂಡಲೇ ಮೈಸೂರು ಮಹಾನಗರಪಾಲಿಕೆಯ ಆಯುಕ್ತರು, ಜನನ ಮರಣ ವಿಭಾಗದ ಅಧಿಕಾರಿಗಳು ಇದರ ಬಗ್ಗೆ ಪರಿಶೀಲಿಸಿ, ಪರಿಗಣಿಸಿ ಜನರ ಹಿತಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತೀಯ ಪಂಚಾಯತ್ ಮೈಸೂರು ಘಟಕದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?ಮೈಸೂರು | ಅಂಬೇಡ್ಕರ್ ಭಾವಚಿತ್ರಕ್ಕೆ ಕೆಸರೆರಚಿ ಅವಮಾನಿಸಿದ ಕಿಡಿಗೇಡಿಗಳು
ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ಚಂದ್ರಶೇಖರ್, ಮಾಜಿ ನಗರ ಪಾಲಿಕೆ ಸದಸ್ಯ ಎಂ.ಡಿ. ಪಾರ್ಥಸಾರಥಿ, ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಎಸ್. ಎನ್. ರಾಜೇಶ್, ರವಿಚಂದ್ರ, ಶ್ರೀಧರ್ ಹಾಗೂ ಇನ್ನಿತರರು ಮನವಿ ಸಲ್ಲಿಸುವಾಗ ಇದ್ದರು.