ಸುರತ್ಕಲ್ನ ಕರ್ನಾಟಕ ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜು (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ) ತನ್ನ 1965ರ ಬಿಇ ಬ್ಯಾಚ್ನ ವಜ್ರ ಮಹೋತ್ಸವವನ್ನು ನಿನ್ನೆ (ಫೆ.18) ಆಚರಿಸಿತು. ಈ ಮಹತ್ವದ ಮೈಲಿಗಲ್ಲನ್ನು ಗೌರವಿಸಲು ಎನ್ಐಟಿಕೆ ಕ್ಯಾಂಪಸ್ನಲ್ಲಿ ಜಮಾಯಿಸಿದ್ದ ವಿವಿಧ ಶೈಕ್ಷಣಿಕ ವಿಭಾಗಗಳ 18 ಹಳೆಯ ವಿದ್ಯಾರ್ಥಿಗಳ ಉಪಸ್ಥಿತಿ ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಬಿ ರವಿ ಅವರು ಮಾತನಾಡಿ, “ಹಳೆಯ ವಿದ್ಯಾರ್ಥಿಗಳ ಉಪಸ್ಥಿತಿಗೆ ಮೆಚ್ಚುಗೆ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಸಂಸ್ಥೆ ಮತ್ತು ಅದರ ಹಳೆಯ ವಿದ್ಯಾರ್ಥಿಗಳ ನಡುವಿನ ನಿರಂತರ ಬಂಧವನ್ನು ಸ್ಮರಿಸಿದರು. ಬೋಧಕರು ಮತ್ತು ಸಿಬ್ಬಂದಿಯ ವಿಸ್ತರಣೆ, ಮೂಲಸೌಕರ್ಯ ನವೀಕರಣಗಳು, ಪಿಐಸಿಗಳ ನೇಮಕಾತಿ ಮತ್ತು ಸಮುದಾಯ ತೊಡಗಿಸಿಕೊಳ್ಳುವಿಕೆ ಉಪಕ್ರಮಗಳು ಸೇರಿದಂತೆ ಎನ್ಐಟಿಕೆಯಲ್ಲಿ ಇತ್ತೀಚಿನ ಪ್ರಗತಿಯ ಕುರಿತು ಮೆಚ್ಚುಗೆ ಸೂಚಿಸಿದರು. ಹಳೆಯ ವಿದ್ಯಾರ್ಥಿಗಳು ತಮ್ಮ ನವೀನ ಆಲೋಚನೆಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳಲು ಮತ್ತು ಸಹಯೋಗದ ಉದ್ಯಮಗಳಲ್ಲಿ ತೊಡಗಿಸಿಕೊಳ್ಳಬೇಕು. ಅವರ ಕೊಡುಗೆಗಳು ಸಂಸ್ಥೆಯಲ್ಲಿ ನಡೆಯುತ್ತಿರುವ ಉಪಕ್ರಮಗಳನ್ನು ಹೆಚ್ಚಿಸುತ್ತವೆ ಮತ್ತು ಸಂಸ್ಥೆಯ ಶಾಶ್ವತ ಪರಂಪರೆಯ ಭಾಗವಾಗುತ್ತವೆ” ಎಂದರು.
ಇದೇ ಸಂದರ್ಭದಲ್ಲಿ ಎನ್.ಆರ್.ಶೆಟ್ಟಿ ಅವರು 1965ರ ವಜ್ರಮಹೋತ್ಸವದ ಸ್ಮರಣಿಕೆಯನ್ನು ಬಿಡುಗಡೆ ಮಾಡಿದರು. ಅಸೋಸಿಯೇಟ್ ಡೀನ್ ಡಾ.ಸೌಮ್ಯ ಕಾಮತ್, “ನಾಸ್ಟಾಲ್ಜಿಕ್ ಕ್ಷಣಗಳು: ಕೆಆರ್ಸಿಯಿಂದ ಎನ್ಐಟಿಕೆಗೆ ಪ್ರಯಾಣ” ಎಂಬ ಶೀರ್ಷಿಕೆಯಡಿ ವಿಡಿಯೋ ಪ್ರಸ್ತುತಿ ನೀಡಿದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಹಳೆಯ ವಿದ್ಯಾರ್ಥಿಗಳಿಗೆ ಜೀವನಪರ್ಯಂತ ಮಾನ್ಯವಾದ ಎನ್ಐಟಿಕೆ ಹಳೆಯ ವಿದ್ಯಾರ್ಥಿಗಳ ಗುರುತಿನ ಚೀಟಿಗಳನ್ನು ವಿತರಿಸಲಾಯಿತು. ಸಂಪರ್ಕವನ್ನು ಹೆಚ್ಚಿಸಲು ಇದೇ ರೀತಿಯ ಗುರುತಿನ ಚೀಟಿಗಳನ್ನು ಎಲ್ಲಾ ಹಳೆಯ ವಿದ್ಯಾರ್ಥಿಗಳ ಬ್ಯಾಚ್ಗಳಿಗೆ ವಿಸ್ತರಿಸಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದರು.
ಹಳೆಯ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳು ಹಾಸ್ಟೆಲ್, ಉಪನ್ಯಾಸ ಸಭಾಂಗಣಗಳು, ಸಂಶೋಧನಾ ಕೇಂದ್ರಗಳು ಮತ್ತು ಬೀಚ್ ಗೆ ಭೇಟಿ ನೀಡಿದರು. ಇದು ಹಳೆಯ ನೆನಪುಗಳನ್ನು ಮರಳಿ ತಂದಿತ್ತು. ಸಾಕಷ್ಟು ಬದಲಾಗಿರುವ ಕ್ಯಾಂಪಸ್ನಲ್ಲಿ ಕಾಲ ಕಳೆದು ಹಳೆಯ ವಿದ್ಯಾರ್ಥಿಗಳು ಧನ್ಯರಾದರು.
ಈ ಸುದ್ದಿ ಓದಿದ್ದೀರಾ?: ಮಂಗಳೂರು | ಎನ್ಐಟಿಕೆ ಸುರತ್ಕಲ್-ಸಿಎಂಟಿಐ ಬೆಂಗಳೂರು ಸಹಯೋಗದ ಸಂಶೋಧನೆಗೆ ಸಹಿ
ಸಮಾರಂಭದಲ್ಲಿ ಹಳೆಯ ವಿದ್ಯಾರ್ಥಿ ಕೆ ಎಂ ನಿರ್ಮಲ್ ಕುಮಾರ್, ಕೆಆರ್ಇಸಿಯ ಮಾಜಿ ಪ್ರಾಂಶುಪಾಲ ಮತ್ತು ಕೆಆರ್ಸಿಇಯ ಎನ್ಸಿಸಿ ಪ್ರವರ್ತಕ ಎನ್.ಆರ್.ಶೆಟ್ಟಿ, ಹಳೆಯ ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಸಂಬಂಧಗಳ ಡೀನ್ ಪ್ರೊ. ಶ್ರೀಕಂಠ ಎಸ್.ರಾವ್, ಎ.ಎಸ್.ಕಾರಂತ, ಆರ್.ಕೃಷ್ಣಮೂರ್ತಿ, ಎನ್ಐಟಿಕೆ ಹಳೆಯ ವಿದ್ಯಾರ್ಥಿಗಳ ಸಂಘದ ಬೆಂಗಳೂರು ಘಟಕದ ಅಧ್ಯಕ್ಷ ನಿರಂಜನ್ ಬಹಬಳ್ಳಪ್ಪ ಮತ್ತು ಎನ್ಐಟಿಕೆಯ ಇತರ ಪ್ರಮುಖ ಗಣ್ಯರು, ಬೋಧಕರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
