ಬೀದರ್‌ | ಪ್ರಗತಿಶೀಲ ಚಳುವಳಿಯ ಪ್ರಖರ ಧ್ವನಿ ʼನಿರಂಜನʼ

Date:

Advertisements

ಖ್ಯಾತ ಬರಹಗಾರ, ಲೇಖಕ ನಿರಂಜನ ಅವರು ಕನ್ನಡದ ಅನನ್ಯ ಪ್ರತಿಭೆ. ಸಾಹಿತ್ಯ ಮತ್ತು ರಾಜಕಾರಣವನ್ನು ಬೇರೆಯಾಗಿ ಕಾಣದ ಹಲವು ಲೇಖಕರಲ್ಲಿ ನಿರಂಜನರು ಒಬ್ಬರು ಎಂದು ಬಾಗಲಕೋಟೆ ಅಧ್ಯಾಪಕ ರೇವಣಸಿದ್ದಪ್ಪ ದೊರೆಗಳ್ ಹೇಳಿದರು.

ಬಸವಕಲ್ಯಾಣ ನಗರದ ಸಂಜೀವಿನಿ ಆಸ್ಪತ್ರೆ ಸಭಾಂಗಣದಲ್ಲಿ ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ಭಾನುವಾರ ಹಮ್ಮಿಕೊಂಡಿದ್ದ ನಿರಂಜನ ಜನ್ಮ ಶತಮಾನೋತ್ಸವ ಪ್ರಯುಕ್ತ ನಿರಂಜನರ ಸಾಹಿತ್ಯದ ತಾತ್ವಿಕತೆ ಕುರಿತು ಪ್ರತಿಷ್ಠಾನದ 81ನೇ ಉಪನ್ಯಾಸ ಸಮಾರಂಭದಲ್ಲಿ ಅವರು ಮಾತನಾಡಿದರು.

ʼಬರಹದಿಂದಲೇ ಬದುಕುತ್ತೇನೆ ಎಂದು ನಂಬಿದ ಬಹುದೊಡ್ಡ ಬರಹಗಾರ ನಿರಂಜನ. ಕನ್ನಡದ ಹಲವು ಲೇಖಕರು ಪತ್ರಕರ್ತರಾಗಿದ್ದರು. ಅವರ ಬರಹ ಪತ್ರಿಕೆ ಬರಹ, ಅಂಕಣ ಹಾಗೂ ಸೃಜನಶೀಲ ಬರಹವು ಬರೆಯುತ್ತಿದ್ದರು. ನಿರಂಜನರು ಹಾಗೂ ಅವರ ಪತ್ನಿ ಅನುಪಮಾ ನಿರಂಜನ ಕನ್ನಡದ ಶ್ರೇಷ್ಠ ಬರಹಗಾರ ದಂಪತಿ. ಬಾಲ್ಯದಲ್ಲಿ ಕತೆಗಳು ಬರೆದ ನಿರಂಜನರು ಕಮ್ಯುನಿಸ್ಟ್ ತತ್ವ ಸಿದ್ಧಾಂತಗಳನ್ನು ನಿರಂತರವಾಗಿ ಉಳಿಸಿಕೊಂಡು ಬಂದಿದ್ದರುʼ ಎಂದರು.

Advertisements

ನಿರಂಜನರು ಬರೆದ ‘ಕೊನೆಯ ಗಿರಾಕಿ’ ಕತೆಯನ್ನು ಕಲಬುರ್ಗಿಯ ಅಧ್ಯಾಪಕ ಡಾ.ಶಿವಾಜಿ ಮೇತ್ರೆ ಅವರು ವಿಮರ್ಶಿಸಿ, ʼನಿರಂಜನರ ಅವರ ಕತೆ ಮಾತು ಬಾರದ, ಅಸಹಾಯಕ, ಬಡ ಹುಡುಗಿಯನ್ನು ಪುರುಷ ಪ್ರಧಾನ ವ್ಯವಸ್ಥೆ ಎಸಗಿದ ದೌರ್ಜನ್ಯ ಹಾಗೂ ದಾರುಣತೆಯನ್ನು ಬಿಂಬಿಸುತ್ತದೆ. ಕನ್ನಡದ ಶ್ರೇಷ್ಠ ಕತೆಗಳ ಸಾಲಿಗೆ ಸೇರುವ ಈ ಕತೆ ಸಮಾಜದ ವಿಕೃತ ಮುಖವನ್ನು ಅನಾವರಣಗೊಳಿಸುತ್ತದೆʼ ಎಂದು ವಿಶ್ಲೇಷಿಸಿದರು.

ಅಧ್ಯಾಪಕ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ʼಜನ ಚಳುವಳಿ ಹಾಗೂ ಸಾಮಾಜಿಕ ಬದುಕಿನ ನೋವಿನ, ಅಸಹಾಯಕತೆ, ಸಂಘರ್ಷದ ಹಲವು ಮುಖಗಳು ನಿರಂಜನರ ಸೃಜನಶೀಲ ಕೃತಿಗಳಲ್ಲಿ ಅಡಕಗೊಂಡಿವೆ. ಕನ್ನಡದ ಪ್ರಗತಿಶೀಲ ಚಳುವಳಿಯ ಪ್ರಮುಖ ಧ್ವನಿ ನಿರಂಜನರುʼ ಎಂದು ಹೇಳಿದರು.

ರಂಗಕರ್ಮಿ ಉಮೇಶ ಪಾಟೀಲ ನಿರಂಜನರ ʼಕೊನೆಯ ಗಿರಾಕಿʼ ಕತೆಯನ್ನು ನಾಟಕೀಯವಾಗಿ ಓದಿದರು. ನಾಗೇಂದ್ರ ಬಿರಾದಾರ ರಂಗಗೀತೆ ಹಾಡಿ ಸಭಿಕರನ್ನು ರಂಜಿಸಿದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಸರಳ ಸಾಮೂಹಿಕ ವಿವಾಹ : ದಾಂಪತ್ಯಕ್ಕೆ ಕಾಲಿಟ್ಟ 138 ಜೋಡಿಗಳು

ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ.ಹುಡೇದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಡಾ. ಬಸವರಾಜ ಸ್ವಾಮಿ, ಪ್ರತಿಷ್ಠಾನದ ನಿರ್ದೇಶಕ ಬಕ್ಕಯ್ಯ ಸ್ವಾಮಿ, ಭೀಮಾಶಂಕರ ಮಾಶಾಳಕರ, ನಾಗಪ್ಪ ನಿಣ್ಣೆ, ಬಸವಣ್ಣಪ್ಪ ನೆಲೋಗಿ, ವೀರಶೆಟ್ಟಿ ಪಾಟೀಲ್, ಶಿವಪುತ್ರ ಸಂಗನಬಸವ, ಸೋಮನಾಥ ಡೊಣಗಾರೆ, ಶಿವಪುತ್ರ ಮಿರಾಜದಾರ ಮೊದಲಾದವರು ಇದ್ದರು. ಚಂದ್ರಕಾಂತ ಅಕ್ಕಣ್ಣ ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ ನಿರೂಪಿಸಿದರು. ಶರಣಬಸವ ಬಿರಾದಾರ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X