ಹೋಳಿ ಸಂಭ್ರಮ ಆಚರಣೆ ವೇಳೆ ಯುವಕರ ನಡುವೆ ಮಾರಾಮಾರಿ ಹಲ್ಲೆ ನಡೆಸಿದ್ದ, ಮೂವರ ಯುವಕರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಲೋಹಿತ್, ಋತ್ವಿಕ್ ಮತ್ತು ಆಕಾಶ್ ಬಂಧಿತ ಆರೋಪಿಗಳು, ಮಾ.8 ರಂದು ನಗರದ ಖಾಸಗಿ ಹೋಟೆಲ್ನಲ್ಲಿ ಹೋಳಿ ಹಬ್ಬದ ಆಚರಣೆ ನಡೆಸುತ್ತಿರುವ ವೇಳೆ ಏಕಾಏಕಿ ಗಲಾಟೆ ಮಾಡಿಕೊಂಡು ಪ್ರಜ್ವಲ್ ಎಂಬಾತನ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ಕೂಡಲೇ ಪ್ರಜ್ವಲ್ನನ್ನು ನಗರದ ಹಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಹಲ್ಲೆಗೊಳಗಾದ ಪ್ರಜ್ವಲ್ ನನ್ನು ನೋಡಲು ಬಂದಿದ್ದ ಚಂದನ್ ಎಂಬಾತನ ಮೇಲೂ ಇದೇ ಗುಂಪು ಹಲ್ಲೆ ಮಾಡಿ, ಅರೆ ಬೆತ್ತಲುಗೊಳಿಸಿ ಕೈಯಿಂದ ಥಳಿಸಿ, ಕಾಲಿನಿಂದ ಹೊದ್ದು ರೌಡಿಗಳಂತೆ ವರ್ತನೆ ತೋರಿದ್ದರು. ಚಂದನ್ ಎಂಬ ವ್ಯಕ್ತಿ, ಬಿಟ್ಟುಬಿಡಿ ಎಂದು ಕೇಳಿಕೊಂಡರೂ ಬಿಡದೆ ಹಲ್ಲೆ ನಡೆಸಿದ್ದರು. ಈ ವಿಚಾರವಾಗಿ ದೃಶ್ಯಾವಳಿ ಎಲ್ಲೆಡೆ ವೈರಲ್ ಆಗಿತ್ತು.
ಇದನ್ನೂ ಓದಿದ್ದೀರಾ?ಹಾಸನ | ಗಾಳಿ ಸಹಿತ ಮಳೆ; ಎಲ್ಲೆಲ್ಲಿ ಎಷ್ಟೆಷ್ಟು?
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನಗರ ಠಾಣೆ ಪೊಲೀಸರು, ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂದಿತರೆಲ್ಲರೂ ನಗರದ ಹೊರ ವಲಯದ ಚಿಕ್ಕಹೊನ್ನೇನಹಳ್ಳಿಯವರು ಎಂದು ತಿಳಿದು ಬಂದಿದೆ. ಹಲ್ಲೆ ನಡೆಸಲು ಏನು ಕಾರಣವೆಂದು ಇನ್ನು ತಿಳಿದುಬಂದಿಲ್ಲ, ಪೊಲೀಸ್ ತನಿಖೆ ಮುಗಿದ ನಂತರ ತಿಳಿಯುತ್ತದೆ.
